ಆ್ಯಪ್ನಗರ

ರಾಜ್ಯ ಯುವಜನ ಆಯೋಗ ರಚನೆಗೆ ಆಗ್ರಹಿಸಿ ಯುವ ಸರಪಳಿ

ರಾಜ್ಯ ಯುವಜನ ಆಯೋಗ ರಚನೆ ಸೇರಿದಂತೆ ಯುವಕರಿಗೆ ನಾನಾ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಸಂವಾದ ಯುವ ಸಂಪನ್ಮೂಲ ಕೇಂದ್ರ ಹಾಗೂ ಯುವ ಮುನ್ನಡೆ ತಂಡದಿಂದ ಯುವ ಸರಪಳಿಯನ್ನು ಶನಿವಾರ ಮೆಕ್ಕೆ ವೃತ್ತದಲ್ಲಿ ನಿರ್ಮಿಸಲಾಯಿತು.

Vijaya Karnataka 10 Feb 2019, 10:39 pm
ಕೋಲಾರ: ರಾಜ್ಯ ಯುವಜನ ಆಯೋಗ ರಚನೆ ಸೇರಿದಂತೆ ಯುವಕರಿಗೆ ನಾನಾ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಸಂವಾದ ಯುವ ಸಂಪನ್ಮೂಲ ಕೇಂದ್ರ ಹಾಗೂ ಯುವ ಮುನ್ನಡೆ ತಂಡದಿಂದ ಯುವ ಸರಪಳಿಯನ್ನು ಶನಿವಾರ ಮೆಕ್ಕೆ ವೃತ್ತದಲ್ಲಿ ನಿರ್ಮಿಸಲಾಯಿತು.
Vijaya Karnataka Web youth chain demanding state youth commission formation
ರಾಜ್ಯ ಯುವಜನ ಆಯೋಗ ರಚನೆಗೆ ಆಗ್ರಹಿಸಿ ಯುವ ಸರಪಳಿ


ನಗರದ ಕಾಲೇಜು ವೃತ್ತದಿಂದ ಆರಂಭಗೊಂಡ ಯುವಜನರ ಜಾಥಾ, ಮೆಕ್ಕೆ ವೃತ್ತದಲ್ಲಿ ಕೆಲಕಾಲ ಯುವ ಸರಪಳಿ ರಚಿಸಿ, ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸಂಘಟನೆಗಳ ಮುಖಂಡರು, ಯುವಜನರ ಸಮಸ್ಯೆ, ಸವಾಲುಗಳು ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕರ್ನಾಟಕ ರಾಜ್ಯ ಯುವಜನ ಆಯೋಗ ಸ್ಥಾಪಿಸಬೇಕು. ಯುವಜನ ಸಬಲೀಕರಣ ಮತ್ತು ಯುವಜನ ಹಕ್ಕುಗಳ ಸಂರಕ್ಷ ಣೆಯ ಉದ್ದೇಶವುಳ್ಳ ಆಯೋಗ ಯುವಜನರ ಪರ ಅಧ್ಯಯನ, ತನಿಖೆ, ಸಾರ್ವಜನಿಕ ಅರಿವು ಮತ್ತು ಸರಕಾರಕ್ಕೆ ಶಿಪಾರಸ್ಸುಗಳನ್ನು ಮಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬಹುದು ಇದರ ಕುರಿತು ಸರಕಾರ ವಿಶೇಷ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಯುವಜನರಿಗೆ ಶಿಕ್ಷ ಣದ ಹಕ್ಕು, ವೃತ್ತಿ ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನೆಯ ಹಕ್ಕು, ಉದ್ಯೋಗದ ಹಕ್ಕು, ಆರೋಗ್ಯದ ಹಕ್ಕು, ಅನನ್ಯತೆಯ ಹಕ್ಕು,ಘನತೆ ಮತ್ತು ಶೋಷಣೆ ರಹಿತ ಜೀವನ ನಡೆಸುವ ಹಕ್ಕು, ಆಯ್ಕೆಯ ಹಕ್ಕು ಮತ್ತು ಸಾಂಸ್ಕೃತಿಕ ಹಕ್ಕುಗಳಿವೆ ಆದರೆ, ಈ ಹಕ್ಕುಗಳ ಬಗ್ಗೆ ಅರಿಯುವ ಮತ್ತು ಹಕ್ಕುಗಳನ್ನು ಸಕಾರಗೊಳಿಸುವ ವ್ಯವಸ್ಥೆಗಳಾಗಬೇಕು.

ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಆಯೋಗದ ರಚನೆಗೆ ಒತ್ತಾಯಿಸಿ ಅಭಿಯಾನ ಮಾಡುತ್ತಿರುವ ಯುವ ಮುನ್ನಡೆಯ ಜತೆಗೆ ರಾಜ್ಯದ ಹಲವಾರು ಸಂಘಟನೆಗಳು ಕೈಜೋಡಿಸಿವೆ. ಮುಂದೆಯೂ ತೀವ್ರಗೊಳಿಸುವುದಾಗಿ ಹೇಳಿದರು.

ಯುವ ಸರಪಳಿಯ ನೇತೃತ್ವವನ್ನು ಸಂವಾದ ಯುವ ಸಂಪನ್ಮೂಲ ಕೇಂದ್ರದ ಸಿದ್ದಯ್ಯ ಬಿ. ಶಶಿರಾಜ್‌, ಸುನಿತ, ಯುವ ಮುನ್ನಡೆ ತಂಡದ ಕೋಲಾರ ಅರವಿಂದ್‌, ರಿಯಾಜ್‌, ದೇವರಾಜ್‌ ವಹಿಸಿದ್ದು, ಪ್ರದೀಪ್‌, ಗಣೇಶ್‌, ಅನುಷಾ, ಕೋಮಲ, ಲಾವಣ್ಯ ಮತ್ತಿತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ