ಆ್ಯಪ್ನಗರ

ಚಾರಣ ದುರಂತ: ತಮ್ಮವ ಸತ್ತರೂ ಹಿಂತಿರುಗಿ ನೋಡದ ಸ್ನೇಹಿತರು

ತಾಲ್ಲೂಕಿನ ಬಡವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಸ್ಮಂಗಿ ಬೆಟ್ಟಕ್ಕೆ ಚಾರಣ ಮಾಡಲು ಹೋದ ನಾಲ್ವರ ಪೈಕಿ ಒಬ್ಬ ಮೃತ ಪಟ್ಟಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ

Vijaya Karnataka Web 27 Oct 2017, 9:28 pm
ಮಧುಗಿರಿ: ತಾಲ್ಲೂಕಿನ ಬಡವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಸ್ಮಂಗಿ ಬೆಟ್ಟಕ್ಕೆ ಚಾರಣ ಮಾಡಲು ಹೋದ ನಾಲ್ವರ ಪೈಕಿ ಒಬ್ಬ ಮೃತ ಪಟ್ಟಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web youth lost life in madhugiri
ಚಾರಣ ದುರಂತ: ತಮ್ಮವ ಸತ್ತರೂ ಹಿಂತಿರುಗಿ ನೋಡದ ಸ್ನೇಹಿತರು


ಗುರುವಾರದಂದು ಶಿರಾ ತಾಲ್ಲೂಕಿನವರು ಐವರು ಬಸ್ಮಂಗಿ ಬೆಟ್ಟಕ್ಕೆ ಚಾರಣ ಮಾಡಿ ಅದರಲ್ಲಿ ಮೂರು ಜನ ಮಾತ್ರ ಕೆಳಗಿಳಿದು ಬಂದಿದ್ದಾರೆ ಶುಕ್ರವಾರ ಮತ್ತೆ ಅದೇ ಯುವಕರು ಬೆಟ್ಟಕ್ಕೆ ಹೋಗಿ ಪರಿಶೀಲಿಸಿದಾಗ ತಮ್ಮ ಸ್ನೇಹಿತ ತೇಜಸ್ (17) ಶವವಾಗಿ ಪತ್ತೆಯಾಗಿದ್ದಾನೆ. ಈತನೊಂದಿಗೆ ಹಲ್ಕೂರಿನ ಹರೀಶ್, ಅಂಧ್ರದ ಹಾಲದಹಳ್ಳಿವೀರೇಗೌಡ , ಶಿರಾದ ಜೀವನ್ , ಜೊತೆಯಾಗಿ SSLC ವ್ಯಾಸಂಗ ಮಾಡುತ್ತಿದ್ದು ದಸರಾ ರಜೆಯ ಕೊನೆಯದಿನ ಈ ಬೆಟ್ಟವನ್ನು ಏರಿದ್ದಾರೆ.

ತೇಜಸ್ ಎಂಬ ಹುಡುಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಮೃತ ಪಟ್ಟಿದ್ದಾನೆ ಇದರಿಂದ ಭಯಭೀತರಾದ ಸ್ನೇಹಿತರು ಹಿಂದುರಿಗಿದ್ದಾರೆ ಇಂದು ಶುಕ್ರವಾರ ಶಿರಾದ ಜಿ.ಜೆ.ಸಿ ಶಾಲೆಯ ಬಳಿ ತೇಜಸ್ ತಂದೆಯಾದ ಮಹೇಶ್ ಹೋಗಿ ವಿಚಾರಿಸಿದಾಗ ನಡೆದ ಘಟನೆ ಬಯಲುಗೊಂಡಿದ್ದು, ಸಂಜೆ 4 ಘಂಟೆಗೆ ಶವ ಪತ್ತೆಯಾಗಿದೆ

ಶವ ಪರೀಕ್ಷೆಗೆ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ತರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ