ಆ್ಯಪ್ನಗರ

ಮೀಟರ್‌ಬಡ್ಡಿ, ಲೇವಾದೇವಿದಾರರ ನಿಯಂತ್ರಣಕ್ಕೆ ಶೂನ್ಯ ಬಡ್ಡಿ ಸಾಲ

ಅವಿಭಜಿತ ಜಿಲ್ಲೆಯಲ್ಲಿ ಮೀಟರ್‌ ಬಡ್ಡಿ ದಂಧೆಕೋರರು ಹಾಗೂ ಬಡ್ಡಿ ಲೇವಾದೇವಿದಾರರನ್ನು ನಿಯಂತ್ರಣ ಮಾಡುವ ಉದ್ದೇಶ ಹಾಗೂ ಆರ್ಥಿಕ ಸಬಲತೆಗಾಗಿ ಮಹಿಳೆಯರಿಗೆ ಶೂನ್ಯ ಬಡ್ಡಿದರಲ್ಲಿ ಸಾಲ ವಿತರಿಸುತ್ತಿರುವುದಾಗಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.

Vijaya Karnataka 12 Jul 2019, 3:09 pm
ಕೋಲಾರ: ಅವಿಭಜಿತ ಜಿಲ್ಲೆಯಲ್ಲಿ ಮೀಟರ್‌ ಬಡ್ಡಿ ದಂಧೆಕೋರರು ಹಾಗೂ ಬಡ್ಡಿ ಲೇವಾದೇವಿದಾರರನ್ನು ನಿಯಂತ್ರಣ ಮಾಡುವ ಉದ್ದೇಶ ಹಾಗೂ ಆರ್ಥಿಕ ಸಬಲತೆಗಾಗಿ ಮಹಿಳೆಯರಿಗೆ ಶೂನ್ಯ ಬಡ್ಡಿದರಲ್ಲಿ ಸಾಲ ವಿತರಿಸುತ್ತಿರುವುದಾಗಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.
Vijaya Karnataka Web zero interest loan to womens
ಮೀಟರ್‌ಬಡ್ಡಿ, ಲೇವಾದೇವಿದಾರರ ನಿಯಂತ್ರಣಕ್ಕೆ ಶೂನ್ಯ ಬಡ್ಡಿ ಸಾಲ


ತಾಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಸಹಕಾರ ಸಂಘದಿಂದ ಕುರಗಲ್‌ ಗ್ರಾಮದಲ್ಲಿ ಗುರುವಾರ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ವಿತರಿಸಿ ಅವರು ಮಾತನಾಡಿದರು.

ಖಾಸಗಿಯವರ ಬಳಿ ಸಾಲ ಪಡೆದುಕೊಳ್ಳಬೇಕಾದರೆ ಶೇ.5ರಷ್ಟು ಬಡ್ಡಿ ಕಟ್ಟಬೇಕು. ಒಂದು ಸಕಾಲಕ್ಕೆ ಬಡ್ಡಿ ಪಾವತಿ ಮಾಡದಿದ್ದರೆ ಹಿಂಸೆ ಕೊಟ್ಟು ವಸೂಲಿ ಮಾಡುತ್ತಾರೆ ಎಂದರು.

ಒಂದು ಮನೆಯಲ್ಲಿ ಸಾವು ಸಂಭವಿಸಿದ್ದರೂ ಬಿಡುವುದಿಲ್ಲ, ಆಸ್ತಿಯನ್ನಾದರೂ ಅಡಮಾನ ಇಟ್ಟುಕೊಳ್ಳುತ್ತಾರೆ. ಜತೆಗೆ ಜಮೀನು, ವಾಹನದ ದಾಖಲೆಗಳನ್ನು ಕಿತ್ತುಕೊಂಡು ಹೋಗುತ್ತಾರೆ. ಇಂತಹ ಪರಿಸ್ಥಿತಿಯಿಂದ ಮಹಿಳೆಯರನ್ನು ದೂರ ಮಾಡಿ ಅವರು ಸ್ವಾಭಿಮಾನದಿಂದ ಬದುಕು ನಡೆಸಲು ಆರ್ಥಿಕ ಸಹಕಾರ ನೀಡಲು ಡಿಸಿಸಿ ಬ್ಯಾಂಕ್‌ ಮುಂದೆ ಬಂದಿದೆ ಎಂದರು.

ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆಯುವುದನ್ನು ನಿಲ್ಲಿಸಬೇಕು, ನಿಮ್ಮ ಆರ್ಥಿಕ ಅಭಿವೃದ್ಧಿಗಾಗಿ ಬ್ಯಾಂಕ್‌ ಸಂಕಲ್ಪ ಮಾಡಿದ್ದು, ಅಗತ್ಯ ಸಾಲ ನೀಡಲಾಗುವುದು, ಅಷ್ಟೇ ಪ್ರಾಮಾಣಿಕವಾಗಿಯೂ ನೀವು ಮರುಪಾವತಿ ಮಾಡುವ ಮೂಲಕ ನಂಬಿಕೆ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೊದಲು ಕಡಿಮೆ ಪ್ರಮಾಣದಲ್ಲಿ ಮಹಿಳಾ ಸಂಘಗಳಿಗೆ ಸಾಲ ನೀಡಲಾಗಿತ್ತು, ಪ್ರಾಮಾಣಿಕವಾಗಿ ಮರುಪಾವತಿ ಮಾಡಿದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಲಾಗಿದೆ, ಅಪಪ್ರಚಾರಕ್ಕೆ ಒಳಗಾಗಿ ಸಾಲ ಕಟ್ಟದಿದ್ದರೆ ಬಡ್ಡಿಯ ಹೊರೆ ಬೀಳುವ ಮೂಲಕ ನೀವೇ ತೊಂದರೆಗೆ ಸಿಲುಕುತ್ತೀರಿ ಎಂದು ಎಚ್ಚರಿಸಿದರು.

ಸಾಲ ಮನ್ನಾದಂತಹ ವದಂತಿಗಳನ್ನು ಕೆಲವರು ಹಬ್ಬಿಸುತ್ತಾರೆ, ಅಲ್ಲದೆ ಬ್ಯಾಂಕ್‌ ವಿರುದ್ಧ ಮಾತನಾಡುತ್ತಾರೆ, ಅವರ ಬಾಯಿ ಮುಚ್ಚಿಸುವ ಕೆಲಸ ಮಹಿಳೆಯರು ಮಾಡಬೇಕು ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ವಿ.ದಯಾನಂದ್‌, ರೇಷ್ಮೆ ಬೆಳೆಗಾರರ ಸಹಕಾರ ಸಂಘದ ವ್ಯಾಪ್ತಿಯ 22 ಮಹಿಳಾ ಸಂಘಗಳಿಗೆ 1ಕೋಟಿ 80 ಸಾವಿರ ರೂ ವಿತರಣೆ ಮಾಡಲಾಗುತ್ತಿದ್ದು, ಸಾಲವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಎಂದು ಸಲಹೆ ನೀಡಿದರು.

ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಸಾಲ ನೀಡಲಾಗುತ್ತಿತ್ತು, ಇದರಿಂದ ಸಾಕಷ್ಟು ಮಂದಿ ಮಹಿಳೆಯರು ಕುರಿ, ಹಸು ತೆಗೆದುಕೊಂಡು ಆರ್ಥಿಕವಾಗಿ ಸಬಲರಾದವರನ್ನು ನೋಡಿದ್ದೇವೆ, ಈಗ ಬ್ಯಾಂಕಿನಲ್ಲಿ ಚಿನ್ನಾಭರಣದ ಮೇಲೂ ಶೇ.3ಕ್ಕೆ ಸಾಲ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಲು ಮಹಿಳೆಯರು ಮುಂದಾಗಬೇಕು ಎಂದು ಕೋರಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಯಲವಾರ ಸೋಣ್ಣೆಗೌಡ, ಬ್ಯಾಂಕ್‌ ವಿರುದ್ಧ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಇದು ಯಾವುದಕ್ಕೂ ಮಹಿಳೆಯರು ಕಿವಿಗೊಡಬಾರದು, ಪ್ರಾಮಾಣಿಕವಾಗಿ ಮರುಪಾವತಿ ಮಾಡುವ ಮೂಲಕ ಮುಂದೆ ಹೆಚ್ಚಿಗೆ ಸಾಲ ಸಿಗುವುದರ ಜತೆಗೆ ಬೇರೆಯವರಿಗೂ ಸಾಲ ನೀಡಬಹುದು ಎಂದರು.

ಸಭೆಯಲ್ಲಿ ರೇಷ್ಮೆ ಬೆಳೆಗಾರರ ಸಹಕಾರ ಸಂಘದ ನಿರ್ದೇಶಕರಾದ ಶ್ರೀನಿವಾಸ, ಕೃಷ್ಣಪ್ಪ, ಡಿ.ಶ್ರೀನಿವಾಸ್‌, ಮುನಿರಾಜು, ನಾರಾಯಣಮ್ಮ, ಸಹಕಾರಿ ಯೂನಿಯನ್‌ ನಿರ್ದೇಶಕ ವೆಂಕಟೇಶ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುನೇಶ್‌, ಕಾರ್ಯದರ್ಶಿ ನಾಗೇಶ್‌, ಲೆಕ್ಕಾಧಿಕಾರಿ ಶ್ರಾವಂತಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ