ಆ್ಯಪ್ನಗರ

ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ: ಮೆರವಣಿಗೆ

ಸಮೀಪದ ಸಿದ್ದಾಪುರ ಗ್ರಾಮದ ಗೂಳಿಬಸವೇಶ್ವರ ಟ್ರಸ್ಟ್‌ನಿಂದ ಪಂ.ಪುಟ್ಟರಾಜ ಗವಾಯಿಗಳ 5ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಗುರುವಾರ ನಡೆಸಲಾಯಿತು.

ವಿಕ ಸುದ್ದಿಲೋಕ 26 Feb 2016, 6:30 am
ಕಾರಟಗಿ; ಸಮೀಪದ ಸಿದ್ದಾಪುರ ಗ್ರಾಮದ ಗೂಳಿಬಸವೇಶ್ವರ ಟ್ರಸ್ಟ್‌ನಿಂದ ಪಂ.ಪುಟ್ಟರಾಜ ಗವಾಯಿಗಳ 5ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಗುರುವಾರ ನಡೆಸಲಾಯಿತು.
Vijaya Karnataka Web
ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ: ಮೆರವಣಿಗೆ


ಗೂಳಿಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಭೀಮನಗೌಡ ಹೊಸಮನಿ ಮಾತನಾಡಿ, ಸಂಗೀತ ಲೋಕಕ್ಕೆ ಪಂ.ಪುಟ್ಟರಾಜ ಗವಾಯಿಗಳು ನೀಡಿದ ಕೊಡುಗೆ ಅಪಾರ. ಗವಾಯಿಗಳ ಸಂಗೀತದಿಂದ ಸಾವಿರಾರು ಅಂಧಮಕ್ಕಳು ಜೀವನ ಕಟ್ಟಿಕೊಂಡಿದ್ದಾರೆ. ಈ ಮೂಲಕ ಸಂಗೀತ ಸೇವೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಟ್ರಸ್ಟ್‌ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಪಂ.ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ ನಡೆಸುತ್ತಿದ್ದೇವೆ ಎಂದರು.

ಪುಣ್ಯಸ್ಮರಣೆ ನಿಮಿತ್ತ ಗೂಳಿಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಭಾವಚಿತ್ರ ಮೆರವಣಿಗೆ ಹೊಸ ಬಸ್‌ನಿಲ್ದಾಣದ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನ ತಲುಪಿತು. ಮೆರವಣಿಗೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಸ್ತೂರಿ ಬಾ ಗಾಂಧಿ ಶಾಲೆ ಹಾಗೂ ಶರಣಬವೇಶ್ವರ ಶಾಲೆಯ ನೂರರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ಕೊಪ್ಪಳದ ಸದಾಶಿವ ಪಾಟೀಲ್ ತಂಡದಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಯಿತು.

ಗೂಳಿಬಸವೇಶ್ವರ ಟ್ರಸ್ಟ್ ಪದಾಧಿಕಾರಿಗಳಾದ ಬಸವರಾಜ ತಾವರಗೇರಾ, ರಮೇಶ ಕುಲಕರ್ಣಿ, ಶರಣಪ್ಪ ಹೊಸಮನಿ, ಪಂಪನಗೌಡ ಹೊಸಮನಿ, ರಮೇಶ ಕಳಮಳ್ಳಿ, ವೀರಭದ್ರಯ್ಯ ಗಣಾಚಾರಿ, ಶಿವಪುತ್ರ, ಬಸವನಗೌಡ ಸೇರಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ