ಆ್ಯಪ್ನಗರ

ಶಿವಾಜಿ ಜಯಂತಿ ಆಚರಣೆ

ಪಟ್ಟಣದ ಛತ್ರಪತಿ ಯುವಕ ಸಂಘದಿಂದ ಛತ್ರಪತಿ ಶಿವಾಜಿ ಜಯಂತಿಯನ್ನು ಗುರುವಾರ ಆಚರಿಸಲಾಯಿತು.

ವಿಕ ಸುದ್ದಿಲೋಕ 27 Feb 2016, 7:34 am
ಕನಕಗಿರಿ; ಪಟ್ಟಣದ ಛತ್ರಪತಿ ಯುವಕ ಸಂಘದಿಂದ ಛತ್ರಪತಿ ಶಿವಾಜಿ ಜಯಂತಿಯನ್ನು ಗುರುವಾರ ಆಚರಿಸಲಾಯಿತು.
Vijaya Karnataka Web
ಶಿವಾಜಿ ಜಯಂತಿ ಆಚರಣೆ


ಇಲ್ಲಿನ ಮಹಿಷಾಸುರ ಮರ್ಧಿನಿ ದೇವಸ್ಥಾನದಲ್ಲಿ ಬೆಳಗ್ಗೆ ಛತ್ರಪತಿ ಶಿವಾಜಿಯ ತೊಟ್ಟಿಲು ಸೇವೆ, ದೇವಿಗೆ ವಿಶೇಷ ಪೂಜೆ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮ ನಡೆದವು. ಛತ್ರಪತಿ ಶಿವಾಜಿಯ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಸಮಾಜದ ಮಹಿಳೆಯರಿಂದ ಕಳಸ ಮೆರವಣಿಗೆ ನಡೆಯಿತು. ಡೊಳ್ಳು, ಗೊಂಬೆ ಕುಣಿತ ಮೆರವಣಿಗೆಗೆ ರಂಗು ನೀಡಿದವು. ಸಂಘದ ಅಧ್ಯಕ್ಷ ಮಂಜುನಾಥ ದುಮ್ಮಾಳ, ಉಪಾಧ್ಯಕ್ಷ ಬಸವರಾಜ ಮರಾಠಿ, ಕಾರ್ಯದರ್ಶಿ ನಾಗರಾಜ ಆರೇರ್, ಖಜಾಂಚಿ ಹನುಮೇಶ ಹೋಟೆಲ್, ಸಹ ಕಾರ್ಯದರ್ಶಿ ರವಿಕುಮಾರ, ಸಂಘಟನ ಕಾರ್ಯದರ್ಶಿ ಶರಣಪ್ಪ ಮಹಿಪತಿ, ಗೌರವಾಧ್ಯಕ್ಷ ರವಿಕುಮಾರ, ಪ್ರಮುಖರಾದ ಪಾಂಡುರಂಗ ಮರಾಠಿ, ಬಾಜಿರಾವ್ ಮರಾಠಿ, ಹನುಮಂತಪ್ಪ, ಹನುಮಂತ ಮರಾಠಿ, ರಾಘವೇಂದ್ರ ಆರೇರ್, ಅಂಬಾಜೀ ಆರೇರ್, ಅಂಬಣ್ಣ , ಪ್ರಕಾಶ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ