ಆ್ಯಪ್ನಗರ

‘ಹರಿವು’ ಸಿನಿಮಾ ಪ್ರದರ್ಶನಕ್ಕೆ ತೀರ್ಮಾನ

ಇಲ್ಲಿನ ಸಿನಿ ಬಳಗ ಪ್ರತಿ ತಿಂಗಳ ಮೂರನೇ ಭಾನುವಾರ ಸದಭಿರುಚಿಯ ಸಿನಿಮಾ ಪ್ರದರ್ಶಿಸುತ್ತಿದ್ದು, ಮಾರ್ಚ್ ಮೂರನೇ ಭಾನುವಾರ ದಿನದಂದು 2014 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಮೊದಲ ಸ್ಥಾನ ಪಡೆದ ‘ಹರಿವು’ ಸಿನಿಮಾ ಪ್ರದರ್ಶಿಸಲು ನಿರ್ಧರಿಸಿದೆ.

ವಿಕ ಸುದ್ದಿಲೋಕ 3 Mar 2016, 8:17 am
ಕೊಪ್ಪಳ ; ಇಲ್ಲಿನ ಸಿನಿ ಬಳಗ ಪ್ರತಿ ತಿಂಗಳ ಮೂರನೇ ಭಾನುವಾರ ಸದಭಿರುಚಿಯ ಸಿನಿಮಾ ಪ್ರದರ್ಶಿಸುತ್ತಿದ್ದು, ಮಾರ್ಚ್ ಮೂರನೇ ಭಾನುವಾರ ದಿನದಂದು 2014 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಮೊದಲ ಸ್ಥಾನ ಪಡೆದ ‘ಹರಿವು’ ಸಿನಿಮಾ ಪ್ರದರ್ಶಿಸಲು ನಿರ್ಧರಿಸಿದೆ.
Vijaya Karnataka Web
‘ಹರಿವು’ ಸಿನಿಮಾ ಪ್ರದರ್ಶನಕ್ಕೆ ತೀರ್ಮಾನ


ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸಿನಿಬಳಗದ ಸಭೆಯಲ್ಲಿ ಸದಸ್ಯರಿಂದ ಈ ಅಭಿಪ್ರಾಯ ವ್ಯಕ್ತವಾಗಿದೆ.

ಪ್ರತಿ ತಿಂಗಳು ಆಯಾ ಸಿನಿಮಾಗಳ ತಂಡ, ಪ್ರದರ್ಶನ ಹಾಗೂ ಸಂವಾದದಲ್ಲಿ ಭಾಗಿಯಾಗುತ್ತಿರುವುದರಿಂದ ಆರ್ಥಿಕವಾಗಿ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ವಿಷಯಗಳು ಚರ್ಚೆಯಾದವು. ಆದರೆ ಮುಂದಿನ ದಿನಗಳಲ್ಲಿ ಪ್ರಾಯೋಜಕರ ಅಥವಾ ಪ್ರವೇಶ ಶುಲ್ಕ ನಿಗದಿಪಡಿಸುವ ಬಗ್ಗೆ ಗಮನ ಹರಿಸಲು ಚಿಂತಿಸಿ, ಯಥಾಪ್ರಕಾರ ಸದಸ್ಯರೇ ಪ್ರತಿ ತಿಂಗಳಿನಂತೆ 100 ರೂ. ಸಂಗ್ರಹಿಸಿ ಸಿನಿಮಾ ಪ್ರದರ್ಶಿಸಲು ತೀರ್ಮಾನಿಸಲಾಯಿತು. ಈ ಬಾರಿ ಕಾರ್ಯಕ್ರಮದ ಉಸ್ತುವಾರಿಯನ್ನು ಸಿನಿಬಳಗದ ಸದಸ್ಯರಾದ ಶಂಕರ ಕೊಪ್ಪದ, ಜಗದೀಶ ಚೆಟ್ಟಿ, ವಿನೋದ ಚಿನ್ನಿನಾಯ್ಕರ್ ಹಾಗೂ ಮೋಹನ್ ಅವರು ವಹಿಸಿಕೊಂಡರು.

ಸಭೆಯಲ್ಲಿ ವಿಜಯ ಅಮತರಾಜ್, ಡಿ.ಎಂ.ಬಡಿಗೇರ, ಸೋಮರೆಡ್ಡಿ ಅಳವಂಡಿ, ಶರತ್ ಹೆಗ್ಡೆ, ಬಸವರಾಜ ಕರುಗಲ್, ಪ್ರವೀಣ ಇಟಗಿ, ಮಂಜುನಾಥ ಡೊಳ್ಳಿನ್, ಸುಭಾಷ್ ಕಲಾಲ್, ವಿಜಯ್ ಹಣಗಿ, ನಾಗರಾಜ ಡೊಳ್ಳಿನ್, ಅನಿಲ್ ಬಾಚನಹಳ್ಳಿ, ಸಿರಾಜ್ ಬಿಸರಳ್ಳಿ, ದೊಡ್ಡೇಶ್ ಯಲಿಗಾರ್, ವಾಲಿ ಇತರರು ಇದ್ದರು.

ಸಭೆ ಮೊದಲು ಇತ್ತೀಚೆಗೆ ಬಿಡುಗಡೆಯಾದ ಶಿವಯೋಗಿ ಶ್ರೀಪುಟ್ಟಯ್ಯಜ್ಜ ಚಿತ್ರದ ನಿರ್ಮಾಪಕ ಶ್ಯಾಂ ನವಲೆ ಅವರು ಬೆಂಗಳೂರಿನಲ್ಲಿ ಹದಯಾಘಾತದಿಂದ ನಿಧನರಾಗಿದ್ದು, ಸಿನಿಬಳಗದ ಸಭೆ ನುಡಿನಮನ ಸಲ್ಲಿಸಿತು. ವಿಜಯ್ ಅಮತ್‌ರಾಜ್ ನವಲೆಯವರ ಕುರಿತು ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ