ಆ್ಯಪ್ನಗರ

ಕೋಣವನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ತಾಲೂಕಿನ ಕುಂಬಳಾವತಿಯ ದ್ಯಾಮವ್ವದೇವಿಗೆ ಗುರುವಾರ ಬಲಿ ನೀಡಬೇಕಿದ್ದ ಪಟ್ಟಣದ ಕೋಣವನ್ನು ಗ್ರಾಮದ ಹಿರಿಯರು ಪೊಲೀಸರ ವಶಕ್ಕೆ ಒಪ್ಪಿಸಿದರು.

ವಿಕ ಸುದ್ದಿಲೋಕ 3 Mar 2016, 8:17 am
ಕುಷ್ಟಗಿ; ತಾಲೂಕಿನ ಕುಂಬಳಾವತಿಯ ದ್ಯಾಮವ್ವದೇವಿಗೆ ಗುರುವಾರ ಬಲಿ ನೀಡಬೇಕಿದ್ದ ಪಟ್ಟಣದ ಕೋಣವನ್ನು ಗ್ರಾಮದ ಹಿರಿಯರು ಪೊಲೀಸರ ವಶಕ್ಕೆ ಒಪ್ಪಿಸಿದರು.
Vijaya Karnataka Web
ಕೋಣವನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು


ಪ್ರಾಣಿ ಬಲಿ ನಡೆಯಲಿದೆ ಎಂಬ ಹಿನ್ನೆಲೆಯಲ್ಲಿ ಕುಂಬಳಾವತಿ ಗ್ರಾಮದ ದ್ಯಾಮವ್ವದೇವಿ ದೇವಾಲಯ ಸುತ್ತ ಮಂಗಳವಾರದಿಂದ ಬಿಗಿಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿದೆ. ಸಂಪ್ರದಾಯದಂತೆ ಬುಧವಾರ ಬೆಳಗಿನ ಜಾವ ದೇವಿಗೆ ಪಟ್ಟದ ಕೋಣವನ್ನು ಬಲಿ ನೀಡಬೇಕಿತ್ತು. ಆ ವೇಳೆಗೆ ಪ್ರಾಣಿ ದಯಾಸಂಘದ ಕಾರ್ಯಕರ್ತರು, ಪೊಲೀಸರು ದೇವಾಲಯದ ಬಳಿ ಬೀಡುಬಿಟ್ಟರು. ದೇವಿಗೆ ಪಟ್ಟದ ಕೋಣವನ್ನು ಬಲಿ ನೀಡಲಾಗಲಿಲ್ಲ. ಬಲಿಯ ಸಂಕೇತವಾಗಿ ಕುಂಬಳಕಾಯಿ ಒಡೆದು ಅದರೆದುರು ಹಣತೆ ಬೆಳಗಲಾಯಿತು.

ಪ್ರಾಣಿದಯಾ ಸಂಘದ ದಯಾನಂದ ಸ್ವಾಮೀಜಿ ಗ್ರಾಮದಲ್ಲಿ ಪ್ರಾಣಿ ಬಲಿ ವಿರೋಧಿಸಿ ಪ್ರಚಾರ ಕೈಗೊಂಡರು. ಗ್ರಾಮದ ಹಿರಿಯರು ಸಭೆ ನಡೆಸಿ ದೇವಿಗೆ ಬಿಟ್ಟಿದ್ದ ಕೋಣವನ್ನು ಪೊಲೀಸರ ಮೂಲಕ ತಾಲೂಕು ಆಡಳಿತಕ್ಕೆ ಹಸ್ತಾಂತರಿಸಿದರು. ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಗ್ರಾಮಸ್ಥರ ಕಾರ್ಯವನ್ನು ಶ್ಲಾಘಿಸಿದರು.

ಮಂಗಳವಾರ ಸಂಜೆಯಿಂದ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಜಾರಿಯಲ್ಲಿದೆ. ಡಿವೈಎಸ್‌ಪಿ ಎಸ್.ಎಂ.ಸಂದಿಗವಾಡ ಅವರು ಮಂಗಳವಾರ ಗ್ರಾಮದಲ್ಲೇ ಬೀಡುಬಿಟ್ಟಿದ್ದರು. 150ಕ್ಕೂ ಹೆಚ್ಚು ಪೊಲೀಸರು, ಒಂದು ಡಿಆರ್ ವ್ಯಾನ್, ಜಿಲ್ಲೆಯ ನಾನಾ ಠಾಣೆಗಳ ಎಎಸ್‌ಐ, ಹನುಮಸಾಗರ ಎಸ್‌ಐ ಮಹಾಂತೇಶ ಶಿವಯೋಗಿ ಕಾವಲು ಕಾಯುತ್ತಿದ್ದಾರೆ.

ಸಾಧ್ಯತೆ: ಬುಧವಾರ ಪಟ್ಟದ ಕೋಣದ ಬಲಿಯ ಮೂಲಕ ಜಾತ್ರೆಗೆ ಚಾಲನೆ ನೀಡಬೇಕಿತ್ತು. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಯಿತು. ಗುರುವಾರ ನಾನಾ ಗ್ರಾಮಗಳ ಭಕ್ತರು ಗ್ರಾಮಕ್ಕೆ ಆಗಮಿಸುತ್ತಿದ್ದು, ತಮ್ಮ ಹರಕೆ ತೀರಿಸಲು ಟಗರು, ಹೋತಗಳನ್ನು ಬಲಿಕೊಡಲು ಮುಂದಾಗಲಿದ್ದಾರೆ ಎಂಬ ಮಾಹಿತಿ ಇದೆ. ದೇವಾಲಯ ಆವರಣ ಸೇರಿದಂತೆ ಸಮೀಪದಲ್ಲಿ ಎಲ್ಲೂ ಪ್ರಾಣಿ ಬಲಿ ನಡೆಯಲು ಅವಕಾಶ ನೀಡುವುದಿಲ್ಲ. ಈಗಾಗಲೇ ಯರಗೇರಾ, ಮದ್ನಾಳ, ಮೂಗನೂರು ಕ್ರಾಸ್‌ಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಬಲಿಗಾಗಿ ತರುವ ಪ್ರಾಣಿ, ಆಯುಧಗಳನ್ನು ಬಿಡದಂತೆ ಎಚ್ಚರವಹಿಸಲಾಗುತ್ತಿದೆ ಎಂದು ಎಸ್‌ಐ ಮಹಾಂತೇಶ ಶಿವಯೋಗಿ ತಿಳಿಸಿದರು. ಮುಖ್ಯವಾಗಿ ದೇವಿಯ ಪಾದಗಟ್ಟೆ ಬಳಿಯೇ ಪ್ರಾಣಿ ಬಲಿ ನಡೆಯುತ್ತದೆ ಎಂಬ ಗುಮಾನಿ ಹಿನ್ನೆಲೆಯಲ್ಲಿ ಒಬ್ಬ ಎಎಸ್‌ಐ, ಒಬ್ಬ ಮುಖ್ಯಪೇದೆ, ಇಬ್ಬರು ಪೊಲೀಸರನ್ನು ಈ ಸ್ಥಳಕ್ಕೆ ನಿಯೋಜಿಸಲಾಗಿದೆ. ಗುರುವಾರ ಪ್ರಾಣಿಬಲಿ ವಿಷಯವಾಗಿ ಭಕ್ತರು ಮತ್ತು ಪೊಲೀಸರ ನಡುವೆ ಸಂಘರ್ಷ ನಡೆಯುವ ಸಾಧ್ಯತೆಗಳು ಇವೆ.

ಗುಮಾನಿ: ಗ್ರಾಮದ ಹಿರಿಯರು ಪೊಲೀಸರ ಮೂಲಕ ತಾಲೂಕು ಆಡಳಿತಕ್ಕೆ ಒಪ್ಪಿಸಿರುವ ಕೋಣ ಪಟ್ಟದಕೋಣ ಅಲ್ಲ ಎಂಬ ಗುಮಾನಿ ಇದೆ. ಸಂಪ್ರದಾಯದಂತೆ ಕೋಣವನ್ನು ಪೊಲೀಸರ ಕಣ್ಣು ತಪ್ಪಿಸಿ ಬಲಿಕೊಡಲಾಗಿದೆ ಎಂಬ ಸುದ್ದಿ ಗ್ರಾಮದಲ್ಲಿ ಹರಿದಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ