ಆ್ಯಪ್ನಗರ

ಟ್ರೋಫಿ ಮುಡಿಗೇರಿಸಿಕೊಂಡ ಉಡುಪಿ ಇಲೆವನ್

ನಾಯಕ ಅರ್ಜುನ್, 51 ಬಾಲ್‌ಗಳಲ್ಲಿ ಸಿಡಿಸಿದ ಅಜೇಯ ಶತಕದ ನೆರವಿನೊಂದಿಗೆ ಉಡುಪಿಯ ಇಲೆವನ್ ತಂಡ, ‘ಗಂಗಾವತಿ ಕ್ರಿಕೆಟ್ ಕಪ್-2016’ ಮುಡಿಗೇರಿಸಿಕೊಂಡಿತು.

ವಿಕ ಸುದ್ದಿಲೋಕ 15 Mar 2016, 7:37 am
ಗಂಗಾವತಿ; ನಾಯಕ ಅರ್ಜುನ್, 51 ಬಾಲ್‌ಗಳಲ್ಲಿ ಸಿಡಿಸಿದ ಅಜೇಯ ಶತಕದ ನೆರವಿನೊಂದಿಗೆ ಉಡುಪಿಯ ಇಲೆವನ್ ತಂಡ, ‘ಗಂಗಾವತಿ ಕ್ರಿಕೆಟ್ ಕಪ್-2016’ ಮುಡಿಗೇರಿಸಿಕೊಂಡಿತು.
Vijaya Karnataka Web
ಟ್ರೋಫಿ ಮುಡಿಗೇರಿಸಿಕೊಂಡ ಉಡುಪಿ ಇಲೆವನ್


ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಜರುಗಿದ ರಾಜ್ಯ ಮಟ್ಟದ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ನಲ್ಲಿ ಬೆಂಗಳೂರಿನ ವಿಜ್ಡ್‌ಂ ಬಾಯ್ಸ್ ಹಾಗೂ ಉಡುಪಿಯ ತಂಡಗಳು ಟ್ರೋಫಿಗಾಗಿ ಸೆಣಸಾಡಿದವು. 15 ಓವರ್‌ಗಳ ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರಿನ ತಂಡ, ಫೀಲ್ಡಿಂಗ್ ಆಯ್ದುಕೊಂಡಿತು. ಉಡುಪಿ ತಂಡ, ಮೂರು ವಿಕೆಟ್‌ಗಳ ನಷ್ಟಕ್ಕೆ ನಿಗದಿತ 15 ಓವರ್‌ಗಳಲ್ಲಿ 162 ರನ್ ಪೇರಿಸಿತು. ಬೃಹತ್ ಮೊತ್ತ ಬೆನ್ನಟ್ಟಿದ ಬೆಂಗಳೂರಿನ ತಂಡ, ನಿಗದಿತ 15 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು, 125 ರನ್ ಗಳಿಸಿ, ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಳ್ಳುವಂತಾಯಿತು. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಉಡುಪಿ ತಂಡದ ನಾಯಕ ಅರ್ಜುನ್, ಎಲ್‌ಇಡಿ ಟಿವಿ ಬಹುಮಾನ ಪಡೆದರು. ಉಡುಪಿ ತಂಡ ಮೊದಲ ಬಹುಮಾನದ ರೂಪದಲ್ಲಿ ಟ್ರೋಫಿ ಹಾಗೂ 77,777 ರೂ. ಗಳಿಸಿತು. ಬೆಂಗಳೂರಿನ ವಿಜ್ಡ್‌ಂ ಬಾಯ್ಸ್ ತಂಡ, ಎರಡನೇ ಬಹುಮಾನದ ರೂಪದಲ್ಲಿ 33, 333ರೂ. ಹಾಗೂ ಟ್ರೋಫಿ ಪಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ