ಆ್ಯಪ್ನಗರ

ಬೇಸಾಯದಲ್ಲಿ ಖುಷಿ ಕಂಡ ಎಂಬಿಎ ಪದವೀಧರ

ಆಧುನಿಕ ಜೀವನ ಶೈಲಿಯ ಬೆನ್ನತ್ತಿ ಇಂದಿನ ಯುವಕರು ಕಷಿಯಿಂದ ವಿಮುಕ್ತಿಯಾಗುತ್ತಿದ್ದಾರೆ. ಇದಕ್ಕೆ ಅಪವಾದವೆಂಬಂತೆ ಪಟ್ಟಣದ ಎಂಬಿಎ ಪದವೀಧರ ಸಂತೋಷ್ ಸರನಾಡಗೌಡ್ರ ಕೃಷಿಯಲ್ಲೇ ಯಶಸ್ಸು ಕಾಣುತ್ತಿದ್ದಾರೆ.

ವಿಕ ಸುದ್ದಿಲೋಕ 16 Mar 2016, 7:11 am
ಭೀಮನಗೌಡ ಮಂಡಲಮರಿ, ತಾವರಗೇರಾ
Vijaya Karnataka Web
ಬೇಸಾಯದಲ್ಲಿ ಖುಷಿ ಕಂಡ ಎಂಬಿಎ ಪದವೀಧರ


ಆಧುನಿಕ ಜೀವನ ಶೈಲಿಯ ಬೆನ್ನತ್ತಿ ಇಂದಿನ ಯುವಕರು ಕಷಿಯಿಂದ ವಿಮುಕ್ತಿಯಾಗುತ್ತಿದ್ದಾರೆ. ಇದಕ್ಕೆ ಅಪವಾದವೆಂಬಂತೆ ಪಟ್ಟಣದ ಎಂಬಿಎ ಪದವೀಧರ ಸಂತೋಷ್ ಸರನಾಡಗೌಡ್ರ ಕೃಷಿಯಲ್ಲೇ ಯಶಸ್ಸು ಕಾಣುತ್ತಿದ್ದಾರೆ.

ಬೆಂಗಳೂರು, ಮಂಗಳೂರು, ಮುಂಬಯಿ, ಚೆನ್ನೈನಂತಹ ಮಹಾನಗರದ ದೊಡ ್ಡದೊಡ್ಡ ಕಂಪನಿಯಲ್ಲಿ ಕೈತುಂಬ ಸಂಬಳ ಪಡೆಯುವ ಅವಕಾಶವಿದ್ದರೂ ಕೃಷಿಯತ್ತ ವಾಲಿದ್ದಾರೆ. ಮೇಣೆಧಾಳ ಸೀಮಾದಲ್ಲಿ ಬರುವ ತಮ್ಮ 40 ಎಕರೆ ಜಮೀನಿನಲ್ಲಿ 20 ಎಕರೆ ತೋಟಗಾರಿಕೆ ಬೆಳೆ ಬೆಳೆದಿದ್ದಾರೆ. ನೇರಳೆ, ಹೆಬ್ಬೇವು, ಮಾವು, ಶ್ರೀಗಂಧ, ಪೇರಲ, ಸಾಗುವಾನಿ, ನಿಂಬೆ, ಬೇವು, ಚಿಕ್ಕು ಮುಂತಾದ ಬೆಳೆ ಬೆಳೆದು ಸಮಗ್ರ ಬೆಳೆಗಳ ಸಂಗಮ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಪ್ರಗತಿಪರ ರೈತರ ಒಡನಾಟ, ತೋಟಗಾರಿಕೆ ಇಲಾಖೆಯ ಸಹಕಾರದಿಂದ ನಾನಾ ಬೆಳೆ ಬೆಳೆಯುತ್ತಿದ್ದಾರೆ.

ಇವರ ಜಮೀನಿನಲ್ಲಿ 09 ಮೊಲ, 32 ಕುರಿ, 16 ಜವಾರಿ ಹಸು, 500 ಮೀನು ಸಾಕಣೆೆ ಮಾಡಿಕೊಂಡಿದ್ದಾರೆ. 100 ನೇರಳೆ, 2000 ಹೆಬ್ಬೇವು, 650 ಕೇಸರ್ ತಳಿಯ ಮಾವು, 550 ಶ್ರೀಗಂಧ, 550 ಪೇರಲ, 1500 ಸಾಗುವಾನಿ, 700 ಕೀನ್ವಾ, 200 ನಿಂಬೆ, 250 ಬೇವು, 250 ಚಿಕ್ಕು ಬೆಳೆದಿದ್ದಾರೆ.

ಆದಾಯ : 2013ನೇ ಸಾಲಿನಲ್ಲಿ ಬೆಳೆದ ಕೀನ್ವಾ ಹಣ್ಣುಗಳನ್ನು ಮುಂಬಯಿ, ಬೆಂಗಳೂರು, ಹೈದರಾಬಾದ್ ಮಾರುಕಟ್ಟೆಗೆ ಮಾರಾಟ ಮಾಡಿ ಸುಮಾರು 15 ಲಕ ್ಷರೂಪಾಯಿಗಳಷ್ಟು ಲಾಭ ಪಡೆದುಕೊಂಡಿದ್ದಾರೆ. ಪ್ರತಿ ಗಿಡಕ್ಕೆ 1 ಕ್ವಿಂಟಲ್ ಹಣ್ಣು ಬೆಳೆದಿದ್ದಾರೆ. ಜಮೀನಿನಲ್ಲಿ 5 ಕೊಳವೆ ಬಾವಿ ಕೊರೆಸಿದ್ದು, 2 ಇಂಚು ನೀರು ಬಳಕೆ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ. ಎಲ್ಲ ಗಿಡಕ್ಕೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಕೊಂಡು ಕೃಷಿ ರಂಗದಲ್ಲಿ ಯಶಸ್ಸು ಕಾಣುತ್ತಿದ್ದಾರೆ.

----- ನಾವು ಬದುಕುವಂತೆ ಪ್ರಾಣಿ -ಪಕ್ಷಿಗಳು ಬದುಕಲು ಬಿಡಬೇಕು, ಅದ್ದರಿಂದ ನಾನು ಮೊಲ, ಮೀನು, ಕುರಿ, ಹಸು ಸಾಕಿದ್ದೇನೆ. ಬರಡು ಭೂಮಿಯಲ್ಲಿ ಬಂಗಾರದಂಥ ಬೆಳೆ ಬೆಳೆಯುವುದೇ ನನಗೆ ಮಹಾ ಆನಂದ.

- ಸಂತೋಷ್ ಸರನಾಡಗೌಡ್ರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ