ಆ್ಯಪ್ನಗರ

ಟಾಟಾ ಇಂಡಿಕ್ಯಾಶ್ ಎಟಿಎಂ ಯಂತ್ರ ಕಳವು

ಸಮೀಪದ ಮರ್ಲಾನಹಳ್ಳಿ ಗ್ರಾಮದ ಮುಖ್ಯರಸ್ತೆ ಬಳಿ ಅಳವಡಿಸಿದ್ದ ಟಾಟಾ ಇಂಡಿಕ್ಯಾಶ್ ಎಟಿಎಂ (ಐಡಿ-ಟಿಎಎಎಸ್ 0387)ಯಂತ್ರವನ್ನು ದುಷ್ಕರ್ಮಿಗಳ ಗುಂಪೊಂದು ಸೋಮವಾರ ತಡರಾತ್ರಿ ಕದ್ದೊಯ್ದಿದೆ.

ವಿಕ ಸುದ್ದಿಲೋಕ 23 Mar 2016, 7:38 am
ಕಾರಟಗಿ (ಕೊಪ್ಪಳ); ಸಮೀಪದ ಮರ್ಲಾನಹಳ್ಳಿ ಗ್ರಾಮದ ಮುಖ್ಯರಸ್ತೆ ಬಳಿ ಅಳವಡಿಸಿದ್ದ ಟಾಟಾ ಇಂಡಿಕ್ಯಾಶ್ ಎಟಿಎಂ (ಐಡಿ-ಟಿಎಎಎಸ್ 0387)ಯಂತ್ರವನ್ನು ದುಷ್ಕರ್ಮಿಗಳ ಗುಂಪೊಂದು ಸೋಮವಾರ ತಡರಾತ್ರಿ ಕದ್ದೊಯ್ದಿದೆ.
Vijaya Karnataka Web
ಟಾಟಾ ಇಂಡಿಕ್ಯಾಶ್ ಎಟಿಎಂ ಯಂತ್ರ ಕಳವು


ಈ ಎಟಿಎಂ ಯಂತ್ರದಲ್ಲಿ ಮೊದಲಿದ್ದ 1.95ಲಕ್ಷ ರೂ. ಜತೆಗೆ ಸೋಮವಾರವಷ್ಟೇ ಹೆಚ್ಚುವರಿಯಾಗಿ 1ಲಕ್ಷ ರೂ.ಗಳನ್ನು ಜಮೆಮಾಡಲಾಗಿತ್ತು. ರಾತ್ರಿ 11ಗಂಟೆ ಸುಮಾರಿಗೆ 2.66ಲಕ್ಷ ರೂ.ಗಳು ಎಟಿಎಂ ಯಂತ್ರದಲ್ಲಿದ್ದವು. ಸೋಮವಾರ ರಾತ್ರಿ ಎಟಿಎಂ ಕಾವಲಿಗೆ ಯಾವುದೇ ಸಿಬ್ಬಂದಿ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ. ಸ್ಥಳಕ್ಕೆ ಕೊಪ್ಪಳ ಎಸ್ಪಿ ಡಾ.ಪಿ.ತ್ಯಾಗರಾಜನ್, ಡಿಎಸ್‌ಪಿ ಎಸ್.ಎಂ.ಸಂದಿಗೆವಾಡ, ಸಿಪಿಐ ಪ್ರಭಾಕರ್ ಧರ್ಮಟ್ಟಿ ಭೇಟಿನೀಡಿ ಪರಿಶೀಲಿಸಿದರು. ಪಿಎಸ್‌ಐ ಎನ್.ಆರ್.ನಿಂಗಪ್ಪ ಅವರಿಂದ ಪ್ರಕರಣ ಕುರಿತು ಸಮಗ್ರ ವಿವರ ಪಡೆದರು.

ಶ್ವಾನದಳ, ಬೆರಳಚ್ಚು ತಜ್ಞರ ತಂಡಗಳೂ ಸ್ಥಳಕ್ಕೆ ಆಗಮಿಸಿದ್ದವು. ‘‘ಎಟಿಎಂ ಯಂತ್ರವನ್ನು ದುಷ್ಕರ್ಮಿಗಳು ವಾಹನದಲ್ಲೇ ಸಾಗಿಸಿರುವ ಶಂಕೆಯಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ, ಬಳ್ಳಾರಿ ಜಿಲ್ಲೆಯ ತಂಬ್ರಹಳ್ಳಿ ಹಾಗೂ ಮರ್ಲಾನಹಳ್ಳಿಯಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಟಾಟಾ ಇಂಡಿಕ್ಯಾಶ್ ಸಂಸ್ಥೆಗೆ ಸೇರಿದ ಮೂರು ಎಟಿಎಂ ಯಂತ್ರಗಳನ್ನು ದುಷ್ಕರ್ಮಿಗಳ ಗುಂಪು ಕದ್ದೊಯ್ದಿದೆ. ಸಿಸಿ ಕ್ಯಾಮೆರಾ ನಿರ್ವಹಣೆಯಲ್ಲೂ ವೈಫಲ್ಯ ಕಾಣುತ್ತಿದೆ’’ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ. ಟಾಟಾ ಇಂಡಿಕ್ಯಾಶ್ ಎಟಿಎಂ ಸಿಬ್ಬಂದಿ ಸಿದ್ದಲಿಂಗಯ್ಯ ಹಿರೇಮಠ ನೀಡಿದ ದೂರು ಆಧರಿಸಿ, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

----- ಮರ್ಲಾನಹಳ್ಳಿ ಗ್ರಾಮದಲ್ಲಿ ಅಳವಡಿಸಿದ್ದ ಟಾಟಾ ಇಂಡಿಕ್ಯಾಶ್‌ಗೆ ಸೇರಿದ ಎಟಿಎಂ ಯಂತ್ರ ಕಳ್ಳತನ ನಡೆದಿದ್ದು, ಪ್ರಕರಣ ಭೇದಿಸಲು ಸಿಪಿಐ ನೇತತ್ವದಲ್ಲಿ ತಂಡ ರಚಿಸಲಾಗಿದೆ. ಜಿಲ್ಲೆಯ ನಾನಾ ಕಡೆ ಇರುವ ಅಸುರಕ್ಷಿತ ಎಟಿಎಂಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಸಂಸ್ಥೆಯವರಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

-ಡಾ.ಪಿ.ತ್ಯಾಗರಾಜನ್, ಎಸ್‌ಪಿ, ಕೊಪ್ಪಳ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ