ಆ್ಯಪ್ನಗರ

ಭ್ರಷ್ಟಾಚಾರ ತನಿಖೆಗೆ ಆಗ್ರಹಿಸಿ ಧರಣಿ

ಸಣ್ಣ ನೀರಾವರಿ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಕುರಿತು ತನಿಖೆಯಾಗಬೇಕು ಎಂದು ಒತ್ತಾಯಿಸಿ ಪ್ರಾಂತ ರೈತ ಸಂಘದ ಗಂಗಾವತಿ, ಕೊಪ್ಪಳ, ಕುಷ್ಟಗಿ ಘಟಕಗಳ ಕಾರ್ಯಕರ್ತರು ಇಲ್ಲಿನ ಸಣ್ಣನೀರಾವರಿ ಇಲಾಖೆ ವಿಭಾಗೀಯ ಕಚೇರಿ ಎದುರು ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ವಿಕ ಸುದ್ದಿಲೋಕ 24 Mar 2016, 7:19 am
ಕುಷ್ಟಗಿ; ಸಣ್ಣ ನೀರಾವರಿ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಕುರಿತು ತನಿಖೆಯಾಗಬೇಕು ಎಂದು ಒತ್ತಾಯಿಸಿ ಪ್ರಾಂತ ರೈತ ಸಂಘದ ಗಂಗಾವತಿ, ಕೊಪ್ಪಳ, ಕುಷ್ಟಗಿ ಘಟಕಗಳ ಕಾರ್ಯಕರ್ತರು ಇಲ್ಲಿನ ಸಣ್ಣನೀರಾವರಿ ಇಲಾಖೆ ವಿಭಾಗೀಯ ಕಚೇರಿ ಎದುರು ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
Vijaya Karnataka Web
ಭ್ರಷ್ಟಾಚಾರ ತನಿಖೆಗೆ ಆಗ್ರಹಿಸಿ ಧರಣಿ


ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಜಿ.ನಾಗರಾಜ, ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ನಾನಾ ಕೆಲಸಗಳನ್ನು ನಿರ್ವಹಿಸದೇ ಬೋಗಸ್ ಬಿಲ್ ಸಷ್ಟಿಸಿ ಹಣ ಎತ್ತುವಳಿ ಮಾಡಲಾಗಿದೆ. ಕಾಮಗಾರಿ ನಡೆಸದ ಗುತ್ತಿಗೆದಾರರಿಗೆ ಹಣ ಪಾವತಿಸಲು ತೋರಿರುವ ಕಾಳಜಿಯನ್ನು ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸಿರುವ ಕೂಲಿಕಾರರ ಹಣ ಪಾವತಿಸಲು ಇಲಾಖೆ ತೋರಿಲ್ಲ. ಪ್ರತಿ ದಿನ 204ರೂ. ಕೂಲಿ ನೀಡಬೇಕಿತ್ತು. ಇಲಾಖೆ ಎಂಜಿನಿಯರ್ ತಯಾರಿಸಿರುವ ಎಂ.ಬಿ.ಯಲ್ಲಿ ದಿನಕ್ಕೆ 170-174ರೂ. ಕೂಲಿ ಹಾಕಲಾಗಿದೆ. ಈ ಹಿಂದೆ ಕಚೇರಿ ಎದುರು ಪ್ರತಿಭಟನೆ ನಡೆಸಿದಾಗ ಕೂಲಿಕಾರರಿಗೆ ಆಗಿರುವ ಅನ್ಯಾಯವನ್ನು ಮಾ.22 ಒಳಗೆ ಸರಿಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಕ್ರಮ ಕೈಗೊಂಡಿಲ್ಲ. ಕೂಲಿಕಾರರಿಗೆ ನ್ಯಾಯಯುತ ಕೂಲಿ ದೊರೆಯುವುದರೊಂದಿಗೆ ಇಲಾಖೆಯಲ್ಲಿ ನಡೆದಿರುವ ಭ್ರಷ್ಟ್ಟಾಚಾರ ತನಿಖೆಯಾಗಬೇಕು. ಬೋಗಸ್ ಬಿಲ್ ಸಷ್ಟಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕ್ರಮ ಕೈಗೊಳ್ಳುವವರೆಗೂ ಧರಣಿ ಮುಂದುವರಿಯಲಿದೆ ಎಂದು ಕಾರ್ಯಕರ್ತರು ತಿಳಿಸಿದರು.

ನಿರುಪಾದಿ ಬೆಣಕಲ್, ದೊಡ್ಡನಗೌಡ ಬಿಜಕಲ್, ಗವಿಸಿದ್ದಪ್ಪ ಗಡಾದ್, ಕನಕರಾಯ, ಮರಿಯಪ್ಪ, ಶ್ರೀನಿವಾಸ, ಬಸವರಾಜ, ಸಂಗಪ್ಪ ಕಮತರ, ದೇವಪ್ಪ ಅಮಾಜಿ, ಇಮಾಂಬೀ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ