ಆ್ಯಪ್ನಗರ

ಗದ್ದಿ ಬಸವೇಶ್ವರ ಜಾತ್ರೆ: ಪಲ್ಲಕ್ಕಿ ಉತ್ಸವ

ತಾಲೂಕಿನ ಕುಡಗುಂಟಿ ಗ್ರಾಮದ ಶ್ರೀಗದ್ದಿ ಬಸವೇಶ್ವರ ಜಾತ್ರೆ ನಿಮಿತ್ತ ಶನಿವಾರ ಪಲ್ಲಕ್ಕಿ ಉತ್ಸವ ಜರುಗಿತು.

ವಿಕ ಸುದ್ದಿಲೋಕ 3 Apr 2016, 4:49 pm
ಯಲಬುರ್ಗಾ; ತಾಲೂಕಿನ ಕುಡಗುಂಟಿ ಗ್ರಾಮದ ಶ್ರೀಗದ್ದಿ ಬಸವೇಶ್ವರ ಜಾತ್ರೆ ನಿಮಿತ್ತ ಶನಿವಾರ ಪಲ್ಲಕ್ಕಿ ಉತ್ಸವ ಜರುಗಿತು.
Vijaya Karnataka Web
ಗದ್ದಿ ಬಸವೇಶ್ವರ ಜಾತ್ರೆ: ಪಲ್ಲಕ್ಕಿ ಉತ್ಸವ


ಮುಂಜಾನೆ ಶ್ರೀಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ ಪೂಜೆ ಸಲ್ಲಿಸಲಾಯಿತು. ಕುಂಭ ಕಳಶ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ, ದೇವಸ್ಥಾನ ತಲುಪಿತು. ನಂತರ ಭಕ್ತರು ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು. ಭಕ್ತರಿಗೆ ಮಹಾ ಪ್ರಸಾದ ನಡೆಯಿತು. ಸಂಜೆ ಎಳೆದ ಉಚ್ಛಾಯದಲ್ಲಿ ಭಕ್ತರು ಉತ್ತತ್ತಿ, ಹಣ್ಣು ಸರ್ಪಿಸಿದರು. ಸುತ್ತ ಮುತ್ತಲಿನ ಗ್ರಾಮಗಳಾದ ಚಿಕ್ಕ ಮ್ಯಾಗೇರಿ, ರ‌್ಯಾವಣಿಕಿ, ಮಲಕಸಮುದ್ರ, ಚಿಕ್ಕ ಮ್ಯಾಗೇರಿ ತಾಂಡಾ, ಗೆದಗೇರಿ, ಲಕಮನಗುಳೆ, ಬೇವೂರು ಗ್ರಾಮಗಳಿಂದ ಭಕ್ತರು ಆಗಮಿಸಿ ದ್ದರು. ಸಂಜೆ ನಾಟಕ ಪ್ರದರ್ಶ ನಗೊಂಡಿತು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಗಿರಿಜಾ ರೇವಣಪ್ಪ ಸಂಗಟಿ, ಪ್ರೇಮಾ ಈರಪ್ಪ ಕುಡಗುಂಟಿ, ಗ್ರಾಮ ಪಂಚಾಯಿತಿ ಉಪಾ ಧ್ಯಕ್ಷೆ ಲಕ್ಷ್ಮವ್ವ ಗುಂಡಪ್ಪ ಲಗಳೂರು, ಮುಖಂ ಡರಾದ ಭೀಮಪ್ಪ ನಾಯ್ಕರ್,ಗದ್ದೆಪ್ಪ ಕುಡ ಗುಂಟಿ,ರುದ್ರಪ್ಪ ಚಲವಾದಿ, ಹಿರೇ ಹನು ಮಂತಪ್ಪ ಬಮ್ಮನಾಳ, ರಾಮಣ್ಣ ಚಿಲವಾಡಗಿ, ಮಲ್ಲಿಕಾರ್ಜುನಗೌಡ ಪಾಟೀಲ್, ದೇವಪ್ಪ ಲಗಳೂರು, ರಾಮಣ್ಣ ಗುಡಿಗೇರಿ, ಶರಣಪ್ಪ ಮೇಟಿ,ರಾಜಾಸಾಬ್ ಹುಡೇದ್,ಪಾಂಡು ರಂಗಾವ್ ಕುಲಕರ್ಣಿ, ಶಿವು ಮ್ಯಾಗಳಮಠ, ಶರಣಪ್ಪ ಗುರಿಕಾರ್, ಬಸವಂತಪ್ಪ ಇಟಗಿ ಇನ್ನಿತರರು ಇದ್ದರು.

ತಲ್ಲೂರು: ತಾಲೂಕಿನ ತಲ್ಲೂರು ಗ್ರಾಮದ ಶ್ರೀ ದ್ಯಾಮಮ್ಮ ದೇವಿ ಜಾತ್ರೆ ಶನಿವಾರ ನಡೆಯಿತು.

ಬೆಳಗಿನ ಜಾವ ಕುಂಭ ಕಳಶ ಮೆರವಣಿಗೆ ನಡೆಯಿತು. ಜಾತ್ರೆ ನಿಮಿತ್ತ ನಾನಾ ಧಾರ್ಮಿಕ ಕಾರ್ಯಗಳು ಜರುಗಿದವು. ಸಂಜೆ ಉಚ್ಛಾಯ ಎಳೆಯಲಾಯಿತು. ಭಕ್ತರಿಗಾಗಿ ಅನ್ನ ಸಂತರ್ಪಣೆ ನಡೆಯಿತು. ಸುತ್ತಮುತ್ತಲಿನ ಗ್ರಾಮದಿಂದ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು. ತಾ.ಪಂ.ಸದಸ್ಯ ಓಬಳಪ್ಪ ಕುಲಕರ್ಣಿ, ಮುಖಂಡರಾದ ನಾಗರಾಜ ತಾಲ್ಲೂರು, ಈರಣ್ಣ ತೋಟದ್,ಚನ್ನಬಸವ ಕುಲಕರ್ಣಿ, ಶಿವಶಂಗಪ್ಪ ಅಂಗಡಿ, ಪರಶುರಾಮ ಬತ್ತಿ,ಹೊನ್ನಪ್ಪ ಚಿಚ್ಚಿ ಮುಖಂಡರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ