ಆ್ಯಪ್ನಗರ

ಟೋಲ್ ಕಟ್ಟಲು ಜಿ.ಪಂ. ಸದಸ್ಯ ತಗಾದೆ

ತಾಲೂಕಿನ ಮುಕ್ಕುಂಪಿ ಬಳಿಯ ಟೋಲ್‌ಗೇಟ್‌ನಲ್ಲಿ ಹೇರೂರು ಕ್ಷೇತ್ರದ ಜಿ.ಪಂ. ಕಾಂಗ್ರೆಸ್ ಸದಸ್ಯ ಅಮರೇಶ ಗೋನಾಳ ಅವರು, ಸೋಮವಾರ ಟೋಲ್ ಕಟ್ಟಲು ತಗಾದೆ ತೆಗೆದರು.

ವಿಕ ಸುದ್ದಿಲೋಕ 3 May 2016, 8:25 am
ಗಂಗಾವತಿ; ತಾಲೂಕಿನ ಮುಕ್ಕುಂಪಿ ಬಳಿಯ ಟೋಲ್‌ಗೇಟ್‌ನಲ್ಲಿ ಹೇರೂರು ಕ್ಷೇತ್ರದ ಜಿ.ಪಂ. ಕಾಂಗ್ರೆಸ್ ಸದಸ್ಯ ಅಮರೇಶ ಗೋನಾಳ ಅವರು, ಸೋಮವಾರ ಟೋಲ್ ಕಟ್ಟಲು ತಗಾದೆ ತೆಗೆದರು.
Vijaya Karnataka Web
ಟೋಲ್ ಕಟ್ಟಲು ಜಿ.ಪಂ. ಸದಸ್ಯ ತಗಾದೆ


ಅವರು ಕೊಪ್ಪಳದಿಂದ ಗಂಗಾವತಿ ಕಡೆ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಟೋಲ್ ಸಂಗ್ರಹ ಸಿಬ್ಬಂದಿ, ನಿಗದಿತ ಟೋಲ್ ಕಟ್ಟುವಂತೆ ಅವರನ್ನು ಕೋರಿದರು. ‘‘ಜನಪ್ರತಿನಿಧಿಗಳಿಗೆ ಟೋಲ್ ತೆಗೆದುಕೊಳ್ಳಬಾರದು’’ ಎಂದು ಸಿಬ್ಬಂದಿಯನ್ನೇ ತರಾಟೆ ತೆಗೆದುಕೊಂಡರು. ಟೋಲ್ ಕಟ್ಟುವಂತೆ ಒತ್ತಡ ಹೆಚ್ಚುತ್ತಿದ್ದಂತೆ, ಟೋಲ್‌ಗೇಟ್ ಬಳಿ ಅರ್ಧ ತಾಸು ಕಾರು ನಿಲ್ಲಿಸಿದ ಅವರು ಟೋಲ್ ಕಟ್ಟುವುದಿಲ್ಲ ಎಂದು ಪಟ್ಟುಹಿಡಿದರು. ಇದೇ ಮಾರ್ಗದಲ್ಲಿ ಬಂದ ಮಾಜಿ ಎಮ್ಮೆಲ್ಸಿ ಎಚ್.ಆರ್.ಶ್ರೀನಾಥ ಅವರು, ಜಿ.ಪಂ. ಸದಸ್ಯ ಅಮರೇಶ ಗೋನಾಳ ಅವರ ಮನವೊಲಿಸಿ, ಟೋಲ್ ಕಟ್ಟಿಸಿದರು. ಪರಸ್ಪರ ವಾಗ್ವಾದ ನಡೆದಿದ್ದರಿಂದ ಕೆಲ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ