ಆ್ಯಪ್ನಗರ

ಸಿಡಿಲಿಗೆ ಮೂವರು ಬಲಿ

ಸಿಡಿಲಿನ ಆರ್ಭಟಕ್ಕೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕಕ್ಕರಗೋಳ ಹಾಗೂ ನಂದಿಹಳ್ಳಿಗ್ರಾಮಗಳಲ್ಲಿ ಇಬ್ಬರು ಹಾಗೂ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ದೊಂಡಂಬಳಿ ಗ್ರಾಮದ ಒಬ್ಬರು ಮಂಗಳವಾರ ಮೃತಪಟ್ಟಿದ್ದಾರೆ.

ವಿಕ ಸುದ್ದಿಲೋಕ 8 Jun 2016, 7:07 am
ಕಾರಟಗಿ/ದೇವದುರ್ಗ; ಸಿಡಿಲಿನ ಆರ್ಭಟಕ್ಕೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕಕ್ಕರಗೋಳ ಹಾಗೂ ನಂದಿಹಳ್ಳಿಗ್ರಾಮಗಳಲ್ಲಿ ಇಬ್ಬರು ಹಾಗೂ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ದೊಂಡಂಬಳಿ ಗ್ರಾಮದ ಒಬ್ಬರು ಮಂಗಳವಾರ ಮೃತಪಟ್ಟಿದ್ದಾರೆ.
Vijaya Karnataka Web
ಸಿಡಿಲಿಗೆ ಮೂವರು ಬಲಿ


ಕಕ್ಕರಗೋಳ ಗ್ರಾಮದ ಈರಪ್ಪ ಕಬ್ಬೇರ್(40), ನಂದಿಹಳ್ಳಿ ಗ್ರಾಮದ ರಾಜಮ್ಮ(28) ಹಾಗೂ ದೊಂಡಂಬಳಿ ಗ್ರಾಮದ ಲಂಕೆಮ್ಮ (55) ಮೃತರು. ಪ್ರತ್ಯೇಕ ಜಮೀನಿನುಗಳಲ್ಲಿ ಕಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾಗ ಭಾರಿ ಗಾಳಿ, ಮಳೆ ಸಹಿತ ಸಿಡಿಲು ಬಡಿದಿದೆ. ಈರಪ್ಪ ಕಬ್ಬೇರ್ ಅವರಿಗೆ ಪತ್ನಿ, ಮೂವರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ರಾಜಮ್ಮ ಅವರಿಗೆ ಪತಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪ್ರಕರಣಗಳು ದಾಖಲಾಗಿವೆ.

ಮೂರು ಎಮ್ಮೆ ಬಲಿ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾ.ಪಂ. ವ್ಯಾಪ್ತಿಯ ನೀರನಹಳ್ಳಿಯಲ್ಲಿ ಸಿಡಿಲು ಬಡಿದು ಮೂರು ಎಮ್ಮೆಗಳು ಮೃತಪಟ್ಟಿವೆ. ಎನ್.ಲಕ್ಷ್ಮಿಕಾಂತ ಅವರಿಗೆ ಈ ಎಮ್ಮೆಗಳು ಸೇರಿವೆ. 1.50ಲಕ್ಷ ರೂ ನಷ್ಟ ಅಂದಾಜಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ