ಆ್ಯಪ್ನಗರ

ವಿದ್ಯಾರ್ಥಿಗಳ ಶೌಚಕ್ಕಿಲ್ಲ ವ್ಯವಸ್ಥೆ!

ತಾಲೂಕಿನ ಜುಮಲಾಪೂರ ಸರಕಾರಿ ಪ್ರೌಢ ಶಾಲೆಯಲ್ಲಿ ಲಕ್ಷಾಂತರ ರೂ. ಹಣ ವ್ಯಯಿಸಿ ನಿರ್ಮಿಸಲಾದ ಶೌಚಾಲಯಗಳು ಶಿಥಿಲಾವಸ್ಥೆಗೆ ತಲುಪಿದ್ದು ವಿದ್ಯಾರ್ಥಿಗಳು ಮಲ, ಮೂತ್ರ ವಿಸರ್ಜನೆಗೆ ಬಯಲು ಪ್ರದೇಶನ್ನೆ ಅವಲಂಬಿಸಿದ್ದಾರೆ!

ವಿಕ ಸುದ್ದಿಲೋಕ 26 Jun 2016, 4:40 pm

ತಾವರಗೇರಾ; ತಾಲೂಕಿನ ಜುಮಲಾಪೂರ ಸರಕಾರಿ ಪ್ರೌಢ ಶಾಲೆಯಲ್ಲಿ ಲಕ್ಷಾಂತರ ರೂ. ಹಣ ವ್ಯಯಿಸಿ ನಿರ್ಮಿಸಲಾದ ಶೌಚಾಲಯಗಳು ಶಿಥಿಲಾವಸ್ಥೆಗೆ ತಲುಪಿದ್ದು ವಿದ್ಯಾರ್ಥಿಗಳು ಮಲ, ಮೂತ್ರ ವಿಸರ್ಜನೆಗೆ ಬಯಲು ಪ್ರದೇಶನ್ನೆ ಅವಲಂಬಿಸಿದ್ದಾರೆ!

ಇಲ್ಲಿನ ಶಾಲೆಯಲ್ಲಿ ಒಟ್ಟು 179ವಿದ್ಯಾರ್ಥಿಗಳ ದಾಖಲಾತಿ ಇದ್ದು, 96ಜನ ವಿದ್ಯಾರ್ಥಿನಿಯರ ಸಂಖ್ಯೆ ಇದೆ. ಅಲ್ಲದೆ ಜುಮಲಾಪೂರ ಗ್ರಾಮದಿಂದ ಹೊರವಲಯದ 1.5 ಕಿ.ಮೀ ದೂರದಲ್ಲಿ ಪ್ರೌಢ ಶಾಲೆ ಕಟ್ಟಡ ನಿರ್ಮಿಸಲಾಗಿದ್ದು ಊರ ಹೊರಗಿನ ಭಾಗದಲ್ಲಿ ವಿದ್ಯಾರ್ಥಿಗಳು ಕಲಿಕೆ ನಡೆಸಿದ್ದಾರೆ. ಹೀಗಾಗಿ ಬಯಲು ಪ್ರದೇಶದಲ್ಲಿ ಮಲ, ಮೂತ್ರ ವಿಸರ್ಜನೆ ಭೀತಿ ಹುಟ್ಟಿಸಿದೆ.

ಎಲ್ಲ ಪೋಲು; ಇಲ್ಲಿನ ಸರಕಾರಿ ಪ್ರೌಢ ಶಾಲೆಯಲ್ಲಿ 2005-06 ಸಾಲಿನಲ್ಲಿ ಸಂಪೂರ್ಣ ನೈರ್ಮಲ್ಯ ಆಂದೋಲನ ಯೋಜನೆಯಡಿ ಅಂದಾಜು 3ಲಕ್ಷ ರೂ. ಹಣ ವ್ಯಯಿಸಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿತ್ತು. ಅಲ್ಲದೆ ಮತೊಮ್ಮೆ 2009-10ನೇ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ 5 ಲಕ್ಷ ರೂ. ಗಳ ಅನುದಾನದಲ್ಲಿ ನಿರ್ಮಿತಿ ಕೇಂದ್ರ ಏಜೆನ್ಸಿಯಿಂದ ಎರಡು ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇರುವ ಎರಡು ಶೌಚಾಲಯಗಳಲ್ಲಿ ಒಂದು ಸಂಪೂರ್ಣ ಶಿಥಿಲಗೊಂಡಿದ್ದು, ಬಳಕೆಗೆ ಯೋಗ್ಯವಿಲ್ಲ. ಇನ್ನೂ ಮತ್ತೊಂದು ಶೌಚಾಲಯಕ್ಕೆ ಬಳಸಿದ ಬೇಸಿನ್‌, ಟೈಲ್ಸ ಗಳೆಲ್ಲಾ ಕಿತ್ತಿ ಹೋಗಿದ್ದು, ಇದರಲ್ಲಿಯೇ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮೂತ್ರ ವಿಸರ್ಜನೆಗೆ ಅವಲಂಬಿಸಿದ್ದಾರೆ. ಮಗದೊಂದು ಶೌಚಾಲಯದ ಕಟ್ಟಡ ಸುಸಜ್ಜಿತವಾಗಿದ್ದು, ಶಾಲೆಯ ಕಟ್ಟಡಕ್ಕೆ ನಿವೇಶನವನ್ನು ದಾನ ನೀಡಿದ ಶಾಲೆಯ ಎಸ್ಡಿಎಂಸಿ ಉಪಾಧ್ಯಕ್ಷ ಅಡಿವೆಪ್ಪ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಶಾಲೆಯ ಪಕ್ಕದಲ್ಲಿ ನೀರಾವರಿ ಜಮೀನು ಇದ್ದು ಅದಕ್ಕೆ ಬೇಕಾಗುವ ಒಕ್ಕಲುತನ ಪರಿಕರಗಳನ್ನು , ಬೀಜ ಗೊಬ್ಬರಗಳನ್ನು ಸಂಗ್ರಹಿಸಿಡಲು ಈ ಶೌಚಾಲಯದ ಕೊಠಡಿ ಬಳಸಿಕೊಂಡಿದ್ದಾರೆ. ವಿದ್ಯಾರ್ಥಿನಿಯರು ಇದೇ ಶೌಚಾಲಯವನ್ನು ಅನಿವಾರ್ಯವಾಗಿ ಬಳಸುತ್ತಿದ್ದರೆ, ವಿದ್ಯಾರ್ಥಿಗಳು ಬಯಲಿಗೆ ತೆರಳುತ್ತಿದ್ದಾರೆ.

ಗಮನಿಸಿಲ್ಲ; ಇಷ್ಟೊಂದು ಸಂಕಷ್ಟದಲ್ಲಿರುವ ಇಲ್ಲಿನ ಮಕ್ಕಳ ನೆರವಿಗೆ ಯಾವ ಅಧಿಕಾರಿಗಳು ನಿಂತಿಲ್ಲ. ಗ್ರಾಮದ ಪಾಲಕರು ಮಕ್ಕಳು ವೇದನೆ ಕಂಡು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಈ ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ಇಂತಹ ಸಂಕಷ್ಟದಲ್ಲಿ ನಿತ್ಯ ಕಾಲ ಕಳೆಯುತ್ತಿರುವ ವಿದ್ಯಾರ್ಥಿಗಳಿಗೆ ಯಾವಾಗ ಮುಕ್ತಿ ದೊರೆಯುತ್ತದೆ? ಎನ್ನುವುದು ಪ್ರಶ್ನೆಯಾಗಿದೆ.

---

ಜುಮಲಾಪೂರ ಪ್ರೌಢ ಶಾಲೆ ಸೇರಿದಂತೆ ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯದ ವ್ಯವಸ್ಥೆ ಮಾಡಲು ತಾ.ಪಂ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸುತ್ತೇನೆ.

Vijaya Karnataka Web
ವಿದ್ಯಾರ್ಥಿಗಳ ಶೌಚಕ್ಕಿಲ್ಲ ವ್ಯವಸ್ಥೆ!

-ಸರಸ್ವತಿ ಗಂಗನಾಳ, ತಾ.ಪಂ ಸದಸ್ಯೆ ಜುಮಲಾಪೂರ ಕ್ಷೇತ್ರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ