ಕೊಪ್ಪಳ: ಪ್ರಸಕ್ತ ವರ್ಷ ಜುಲೈನಿಂದ ಇಲ್ಲಿಯವರೆಗೆ ಒಟ್ಟು ಏಳು ದಿನ ಜಿಲ್ಲೆ ಬಂದ್ ಆಚರಿಸಿದ್ದು, ಸಾರಿಗೆ ಇಲಾಖೆಗೆ ಬರೊಬ್ಬರಿ 1ಕೋಟಿ, 65ಲಕ್ಷ 43,711 ರೂ. ನಷ್ಟವಾಗಿದೆ. ನಿಜಕ್ಕೂ ಈ ನಷ್ಟದ ಹೊರೆ ಯಾರ ಮೇಲೆ ಬಿದ್ದಿದೆ ಎನ್ನುವ ಜಿಜ್ಞಾಸೆ ಕಾಡುತ್ತಿದೆ.
ಜಿಲ್ಲೆ ಬಂದ್ ಕರೆ ನೀಡಿದಾಗಲೆಲ್ಲಾ ಸಹಜವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವ್ಯಾಪಾರ ವಹಿವಾಟು ಮುಗ್ಗರಿಸಿದ್ದು, ವಿದ್ಯಾರ್ಥಿಗಳು, ಪ್ರಯಾಣಿಕರು ಬಸ್ ಇಲ್ಲದೆ ಮನೆ ತಲುಪಲು ಹರಸಾಹಸಪಟ್ಟಿದ್ಧಾರೆ. ಅಷ್ಟೇ ಯಾಕೆ ತಿಂಡಿ-ಊಟಕ್ಕೂ ಪರದಾಡುವ ಪರಿಸ್ಥಿತಿಯೂ ಉಂಟಾಗಿವೆ. ಬಂದ್ ಕರೆ ವೇಳೆ ಪ್ರಸ್ತಾಪಿದ್ದ ಬೇಡಿಕೆಗಳು ಈಡೇರಿವೆಯಾ? ಆದ ನಷ್ಟಕ್ಕೆ ಯಾರು ಹೊಣೆ ಎನ್ನುವ ಹಲವು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿವೆ.
ಹೀಗಿದೆ ಹೊರೆ ವಿವರ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ಸಂಸ್ಥೆಗಳು ನೌಕರರು ಜು.27 ರಿಂದ ಸತತ ಮೂರು ದಿನಗಳ ಕಾಲ ನಡೆಸಿದ ಮುಷ್ಕರ ಸಂಸ್ಥೆಯ ಪಾಲಿಗೆ ದುಬಾರಿ ಎನಿಸಿದೆ. ಈ ಮುಷ್ಕರದ ಮೊದಲ ದಿನ ಜು.25ರಂದು 21,37,288ರೂ. ನಷ್ಟವಾಗಿದ್ದರೆ, ಎರಡು ದಿನ ಕ್ರಮವಾಗಿ 37,70,957 ರೂ. ಹಾಗೂ 37,10,109 ರೂ. ನಷ್ಟವಾಗಿದೆ. ಇದುವರೆಗೆ ನಡೆದ ಏಳು ದಿನಗಳ ಮುಷ್ಕರದಲ್ಲಿ ಈ ಮೂರು ದಿನಗಳ ಮುಷ್ಕರದ ನಷ್ಟವೇ ಅತಿ ಹೆಚ್ಚು. ಉಳಿದಂತೆ ಜು.28 ಹಾಗೂ 30ರಂದು ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ನಡೆದ ಬಂದ್ನಿಂದ ಕ್ರಮವಾಗಿ 25,39,756 ರೂ. ಹಾಗೂ 16,63,427 ರೂ. ನಷ್ಟವಾಗಿದೆ. ಸೆ.2ರಂದು ನಡೆದ ಭಾರತ ಬಂದ್ನಿಂದ 15,06,131 ಲಕ್ಷ ರೂ. ನಷ್ಟವಾಗಿದೆ. ಇನ್ನೂ ಕಾವೇರಿ ನೀರು ಬಿಡಲು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ವಿರೋಧಿಸಿ ನಡೆದ ಕರ್ನಾಟಕ ಬಂದ್ನಿಂದ 12,16,043 ರೂ. ನಷ್ಟವಾಗಿದೆ. ಒಟ್ಟು ಜಿಲ್ಲೆಯಲ್ಲಿ ನಡೆದ ಏಳು ಬಂದ್ನಿಂದ ಕೊಪ್ಪಳ ಸಾರಿಗೆ ವಿಭಾಗದ ಘಟಕ ಒಟ್ಟು 1,65,43,711 ರೂ. ನಷ್ಟ ಉಂಟಾಗಿದೆ.
...............
ಡಿಪೊವಾರು ನಷ್ಟ : ಜು. 25 ರಂದು ವೇತನ ಪರಿಷ್ಕರಣೆ ಬಂದ್
ಕೊಪ್ಪಳ-5,87,689 ರೂ.
ಕುಷ್ಟಗಿ- 3,68,572 ರೂ.
ಯಲಬುರ್ಗಾ- 3,43,095 ರೂ.
ಗಂಗಾವತಿ- 7,34,600 ರೂ.
ಕುಕನೂರು- 1,03,332 ರೂ.
...........
ಜು. 26 ರಂದು ವೇತನ ಪರಿಷ್ಕರಣೆ ಬಂದ್
ಕೊಪ್ಪಳ-10,91,671 ರೂ.
ಕುಷ್ಟಗಿ- 7,51,124 ರೂ.
ಯಲಬುರ್ಗಾ- 5,23,356 ರೂ.
ಗಂಗಾವತಿ- 11,58,161 ರೂ.
ಕುಕನೂರು- 2,46,645 ರೂ.
........
ಜು. 27 ರಂದು ವೇತನ ಪರಿಷ್ಕರಣೆ ಬಂದ್
ಕೊಪ್ಪಳ-10,70,933 ರೂ.
ಕುಷ್ಟಗಿ- 7,38,915 ರೂ.
ಯಲಬುರ್ಗಾ- 5,15,239 ರೂ.
ಗಂಗಾವತಿ- 11,41,313 ರೂ.
ಕುಕನೂರು- 2,43,709 ರೂ.
...........
ಜು. 28 ರಂದು ಕಳಸಾ ಬಂಡೂರಿ ಬಂದ್
ಕೊಪ್ಪಳ-8,08,875 ರೂ.
ಕುಷ್ಟಗಿ- 5,26,886 ರೂ.
ಯಲಬುರ್ಗಾ- 4,26,021 ರೂ.
ಗಂಗಾವತಿ- 5,98,187 ರೂ.
ಕುಕನೂರು- 1,79,787 ರೂ.
...........
ಜು. 30 ರಂದು ಕಳಸಾ ಬಂಡೂರಿ ಬಂದ್
ಕೊಪ್ಪಳ-5,26,243 ರೂ.
ಕುಷ್ಟಗಿ- 3,54,147 ರೂ.
ಯಲಬುರ್ಗಾ- 1,14,661 ರೂ.
ಗಂಗಾವತಿ- 5,86,562 ರೂ.
ಕುಕನೂರು- 81,818 ರೂ.
.........
ಸೆ. 2 ರಂದು ಭಾರತ ಬಂದ್
ಕೊಪ್ಪಳ-3,81,629 ರೂ.
ಕುಷ್ಟಗಿ- 3,75,844 ರೂ.
ಯಲಬುರ್ಗಾ- 1,34,421 ರೂ.
ಗಂಗಾವತಿ- 5,00,824 ರೂ.
ಕುಕನೂರು- 1,13,413 ರೂ.
........
ಸೆ. 9 ರಂದು ಕಾವೇರಿ ನೀರಿಗಾಗಿ ಬಂದ್
ಕೊಪ್ಪಳ- 3,14,443 ರೂ.
ಕುಷ್ಟಗಿ- 2,66,465 ರೂ.
ಯಲಬುರ್ಗಾ- 1,37,194 ರೂ.
ಗಂಗಾವತಿ- 4,18,844 ರೂ.
ಕುಕನೂರು- 79,097 ರೂ.
............
ಒಟ್ಟು 1,65,43,711 ರೂ.
ಬಂದ್ ಹಿನ್ನೆಲೆಯಲ್ಲಿ ನಮ್ಮ ವಿಭಾಗಕ್ಕೆ ತುಂಬಾ ನಷ್ಟವಾಗಿದೆ. ಈ ಕುರಿತು ವರದಿಯನ್ನು ಕೇಂದ್ರ ಕಚೇರಿಗೆ ಕಳಿಸಲಾಗಿದೆ.
-ಬಿ. ಭೋರಯ್ಯ, ವಿಭಾಗೀಯ ನಿಯಂತ್ರಣಾಧಿಕಾರಿ, ಕೊಪ್ಪಳ.