ಆ್ಯಪ್ನಗರ

ಕಾಲುವೆ ತಡೆಗೋಡೆ ಕುಸಿತ: ಆತಂಕ

ಸಮೀಪದ ವಾನಭದ್ರೇಶ್ವರ ದೇವಸ್ಥಾನ ಬಳಿಯ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ತಡೆಗೋಡೆ ಕುಸಿದಿ ಬಿದ್ದಿದ್ದು, ರೈತರಲ್ಲಿ ಆತಂಕ ಶುರುವಾಗಿದೆ.

ವಿಕ ಸುದ್ದಿಲೋಕ 22 Sep 2016, 9:00 am

ಗಂಗಾವತಿ; ಸಮೀಪದ ವಾನಭದ್ರೇಶ್ವರ ದೇವಸ್ಥಾನ ಬಳಿಯ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ತಡೆಗೋಡೆ ಕುಸಿದಿ ಬಿದ್ದಿದ್ದು, ರೈತರಲ್ಲಿ ಆತಂಕ ಶುರುವಾಗಿದೆ.

ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಇಲ್ಲಿನ ಕಾಲುವೆ ತಡೆಗೋಡೆ ನಿರ್ವಹಣೆಗೆ 35 ಲಕ್ಷ ರೂ. ಖರ್ಚು ಮಾಡಲಾಗಿದೆ. ಕಾಲುವೆಗೆ ನೀರು ಬರುವ ವಾರಕ್ಕೂ ಮುನ್ನ ಕೆಲಸ ಆರಂಭಿಸಿ ತರಾತುರಿಯಲ್ಲಿ ಕೆಲಸ ಮಾಡಿ ಹಣ ಎತ್ತುವಳಿ ಮಾಡಿದ್ದರು. ಇದೇ ಕಾರಣಕ್ಕೆ ಈ ತಡೆಗೋಡೆ ಕುಸಿದ್ದು, ಕಳಪೆ ಕೆಲಸವನ್ನು ಮತ್ತೆ ಸಾಭೀತು ಪಡಿಸಿದೆ.

ಪ್ರತಿ ವರ್ಷ ವಡ್ಡರಹಟ್ಟಿ ನಂ.2 ವಿಭಾಗದ ವ್ಯಾಪ್ತಿಯ ಕಾಲುವೆ ನಿರ್ವಹಣೆಗೆ ಬಿಡುಗಡೆಯಾಗುತ್ತಿರುವ ಅನುದಾನ ಗುತ್ತಿಗೆದಾರರ ಮತ್ತು ಅಧಿಕಾರಿಗಳ ಪಾಲಾಗುತ್ತಿದೆ. ಸಮಿಪದ ಮಲ್ಲಾಪುರ ಗ್ರಾಮದ ಬಳಿಯ 11/ಎ ಮೈಲುಗಲ್ಲಿನ ಬಳಿ ಕೂಡ ಕಾಲುವೆಗೆ ಬೋಂಗಾ ಬಿದ್ದಿದೆ. ತಡೆಗೊಡೆಗೆ ಹಾಕಿರುವ ಕಾಂಕ್ರಿಟ್‌ ಕಿತ್ತುಕೊಂಡು ಹೋಗಿದೆ. ಕಾಲುವೆಗೆ ದಕ್ಕೆಯಾದರೆ ಪಕ್ಕದಲ್ಲಿರುವ ಮಲ್ಲಾಪುರ ಗ್ರಾಮ ಸಂಪೂರ್ಣ ಜಲಾರ್ವತವಾಗಲಿದೆ. ಹೀಗೆ ನಾನಾ ಕಡೆಗಳಲ್ಲಿ ಕಳಪೆ ಕಾಮಗಾರಿ ನಡೆಸುತ್ತಿರುವ ನೀರಾವರಿ ನಿಗಮದ ಅಧಿಕಾರಿಗಳ ಕ್ರಮ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

---

ಸಮೀಪದ ವಾನಭದ್ರೇಶ್ವರ ದೇವಸ್ಥಾನ ಬಳಿಯ ತುಂಗಭದ್ರಾ ಮುಖ್ಯ ಕಾಲುವೆ ತಡೆಗೊಡೆ ಕುಸಿದು ಬಿದ್ದಿದೆ. ಇದರಿಂದ ಕಾಲುವೆಗೆ ಅಪಾಯವಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಇರುವುದು ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಕಳೆದ ಜುಲೈ ತಿಂಗಳು ನಡೆದ ದುರಸ್ಥಿ ಕಾಮಗಾರಿ ಕಳಪೆಯಿಂದಾಗಿ ಈ ರೀತಿ ಕಾಲುವೆ ಅಲ್ಲಲ್ಲಿ ಬಿರುಕು ಬಿಟ್ಟಿದೆ. ನಾನಾ ಕಡೆಗಳಲ್ಲಿ ಕಾಲುವೆಗೆ ತಕ್ಕೆಯಾಗುತ್ತಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದೆ.

Vijaya Karnataka Web
ಕಾಲುವೆ ತಡೆಗೋಡೆ ಕುಸಿತ: ಆತಂಕ


-ಪಂಪಣ್ಣ ನಾಯಕ, ಕರವೇ ಜಿಲ್ಲಾಧ್ಯಕ್ಷ,ಗಂಗಾವತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ