ಆ್ಯಪ್ನಗರ

ಎಸಿಬಿ ಬಲೆಗೆ ಬಿದ್ದಿದ್ದ ಕಾರ್ಮಿಕ ಅಧಿಕಾರಿ ಆತ್ಮಹತ್ಯೆ

ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಬಿದ್ದಿದ್ದ ಇಲ್ಲಿನ ಕಾರ್ಮಿಕ ಇಲಾಖೆ ಅಧಿಕಾರಿ ಮಾನಸಿಕ ನೊಂದು ನಗರದ ಹೊರವಲಯದ ರೈಲ್ವೆ ಹಳಿಗೆ ಬಿದ್ದು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಕ ಸುದ್ದಿಲೋಕ 7 Nov 2016, 8:14 am
ಕೊಪ್ಪಳ: ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಬಿದ್ದಿದ್ದ ಇಲ್ಲಿನ ಕಾರ್ಮಿಕ ಇಲಾಖೆ ಅಧಿಕಾರಿ ಮಾನಸಿಕ ನೊಂದು ನಗರದ ಹೊರವಲಯದ ರೈಲ್ವೆ ಹಳಿಗೆ ಬಿದ್ದು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Vijaya Karnataka Web
ಎಸಿಬಿ ಬಲೆಗೆ ಬಿದ್ದಿದ್ದ ಕಾರ್ಮಿಕ ಅಧಿಕಾರಿ ಆತ್ಮಹತ್ಯೆ


ಬಸಯ್ಯ ನಂದಯ್ಯ ಅಂಗಡಿ (56) ಮೃತ ಅಧಿಕಾರಿ. ರೈಲ್ವೆ ತಲೆಯ ಮೇಲೆ ಹರಿದು ಹೋಗಿದ್ದರಿಂದ ಶವ ಗುರುತು ಸಿಗದಂತಾಗಿತ್ತು. ಶವದ ಕಾಲು ಹಾಗೂ ಗುರುತಿನ ಚೀಟಿ ಆಧಾರದ ಮೇಲೆ ಗುರುತು ಹಿಡಿಯಲಾಗಿದೆ.

ಹಿನ್ನೆಲೆ: ದಿಡ್ಡಿಕೇರಿಯ ನಿವಾಸಿ ಅಮೇಜಾನ್ ಅವರ ಪತಿ ನಾಸೀರ್‌ಹುಸೇನ್ ಮೃತರಾದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಿದ್ದಳು. ಈ ಸಮಯದಲ್ಲಿ ಸಹಾಯ ಧನ ನೀಡಲು 2 ಸಾವಿರ ರೂ. ಬೇಡಿಕೆ ಸಲ್ಲಿದ್ದರು ಎನ್ನಲಾಗಿದೆ. ಈ ಕುರಿತಂತೆ ಎಸಿಬಿಗೆ ಅಮೇಜಾನ್ ದೂರು ಸಲ್ಲಿಸಿದ್ದಳು. ನ.20 ರಂದು ಹಣ ಸ್ವೀಕರಿಸುವ ವೇಳೆಯಲ್ಲಿ ಎಸಿಬಿ ದಾಳಿ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ನ. 5 ರಂದು ಬಸಯ್ಯ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಮೃತರಿಗೆ ಪತ್ನಿ ಭುವನೇಶ್ವರಿ, ಪುತ್ರ ಹಾಗೂ ಪುತ್ರಿಯರಿದ್ದಾರೆ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪತ್ನಿ ಭುವನೇಶ್ವರಿ ಪ್ರಜ್ಞಾವಸ್ಥೆ ಕಳೆದುಕೊಂಡಿದ್ದು, ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂಲತಃ ಯಲಬುರ್ಗಾ ತಾಲೂಕಿನ ಚಿಕ್ಕೇನಕೊಪ್ಪ ಗ್ರಾಮದವರಾದ ಬಸಯ್ಯ ಅವರು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೇನೆಯಿಂದ ನಿವೃತ್ತರಾದ ಮೇಲೆ ಕಾರ್ಮಿಕ ಇಲಾಖೆಯಲ್ಲಿ ಸೇವೆಗೆ ಸೇರಿದ್ದರು. ಮೂರು ವರ್ಷದಿಂದ ಇಲ್ಲಿಯ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕ ಅಧಿಕಾರಿಯಾಗಿದ್ದರು ಎಂದು ಕುಟುಂಬದ ಮೂಲ ವಿಜಯ ಕರ್ನಾಟಕಕ್ಕೆ ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ