ಗಂಗಾವತಿ: ಬಾಬರಿ ಮಸೀದಿ ಮರು ನಿರ್ಮಿಸಬೇಕು ಎಂದು ಒತ್ತಾಯಿಸಿ ಪಾಪುಲರ್ ಫ್ರೆಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ನಗರದ ಕರ್ನೂಲ್ ಬಾಬಾ ದರ್ಗಾ ಆವರಣದಲ್ಲಿ ಸೋಮವಾರ ಪ್ರತಿಭಟಿಸಿದರು.
1992 ಡಿಸೆಂಬರ್ 6 ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿರುವುದು ಇತಿಹಾಸದಲ್ಲಿಯೇ ಇದೊಂದು ಕರಾಳ ದಿನವಾಗಿದೆ. ಜಾತ್ಯತೀಕ ಏಳಿಗೆಗೆ ಕಾರಣವಾದ ಬಾಬರಿ ಮಸೀದಿ ಮರು ನಿರ್ಮಿಸಬೇಕು. ಧ್ವಂಸಕ್ಕೆ ಕಾರಣರಾದ ಆರೋಪಿಗಳನ್ನು ಶಿಕ್ಷಿಸಿ, ಲಿಬರ್ಹಾನ್ ವರದಿಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ನ್ಯಾಯಾಲಯದಲ್ಲಿ ಪ್ರಕರಣವು ಇತ್ಯರ್ಥವಾಗದೆ ಹಾಗೇ ಇದೆ. ಆದಷ್ಟು ಬೇಗನೆ ಜನತೆಗೆ ನ್ಯಾಯ ನೀಡುವುದು ಅವಶ್ಯಕವಾಗಿದೆ. ಕೂಡಲೇ ಧ್ವಂಸಕ್ಕೆ ಕಾರಣವಾದ ಆರೋಪಿಗಳನ್ನು ಶಿಕ್ಷಿಸಿ ಎಂದು ಒತ್ತಾಯಿಸಿದರು.
ಸಂಘಟನೆಯ ಕಾರ್ಯಕರ್ತರಾದ ಜಹೀರ್ ಅಭಾಸ್, ಮೊಹಮ್ಮದ್ ಕೌಸಿಂ, ಮಹೆಬೂಬ್ ರಜಾ, ಶಾಮೀದ್ ರಜಾ, ಶಾಮೀದ್ ಮುನಿಯಾರ್, ಸೈಯದ್ ಪಾಷಾ, ಸಾಧಿಕ್, ಸಲೀಂ ಹಾಗೂ ಇತರರಿದ್ದರು.