ಆ್ಯಪ್ನಗರ

ಕೆಲವು ಕುಲಪತಿಗಳು ಕಳ್ಳರು: ಡಾ.ನಾಗವಾರ ಟೀಕೆ

ರಾಜ್ಯದ ಕೆಲವು ವಿಶ್ವವಿದ್ಯಾಲಯಗಳ ಕುಲಪತಿಗಳು ಕಳ್ಳರಾಗಿದ್ದಾರೆ. ಪ್ರಶಸ್ತಿ, ಪುರಸ್ಕಾರಗಳಿಗೆ ಮನಸೋತು ಕೋಟ್ಯಂತರ ರೂ. ಅನುದಾನ ಕಬಳಿಸುತ್ತಿದ್ದಾರೆ. ಅವರ ಧನದಾಹ ನೀತಿಯಿಂದ ವಿವಿಗಳಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಸಾಹಿತಿ ಕಾಳೇಗೌಡ ನಾಗವಾರ ಟೀಕಿಸಿದರು.

ವಿಕ ಸುದ್ದಿಲೋಕ 19 Jan 2017, 8:01 am
ಗಂಗಾವತಿ: ರಾಜ್ಯದ ಕೆಲವು ವಿಶ್ವವಿದ್ಯಾಲಯಗಳ ಕುಲಪತಿಗಳು ಕಳ್ಳರಾಗಿದ್ದಾರೆ. ಪ್ರಶಸ್ತಿ, ಪುರಸ್ಕಾರಗಳಿಗೆ ಮನಸೋತು ಕೋಟ್ಯಂತರ ರೂ. ಅನುದಾನ ಕಬಳಿಸುತ್ತಿದ್ದಾರೆ. ಅವರ ಧನದಾಹ ನೀತಿಯಿಂದ ವಿವಿಗಳಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಸಾಹಿತಿ ಕಾಳೇಗೌಡ ನಾಗವಾರ ಟೀಕಿಸಿದರು.
Vijaya Karnataka Web
ಕೆಲವು ಕುಲಪತಿಗಳು ಕಳ್ಳರು: ಡಾ.ನಾಗವಾರ ಟೀಕೆ


ಕರ್ನಾಟಕ ಸಾಹಿತ್ಯ ಅಕಾಡೆಮಿ, ಕಲ್ಮಠ ಶ್ರೀ ಚನ್ನಬಸವಸ್ವಾಮಿ ಮಹಿಳಾ ಮಹಾವಿದ್ಯಾಲಯ ಹಾಗೂ ಸಾವಿತ್ರಿಬಾಯಿ ಫುಲೆ ಸಾಹಿತ್ಯ ಸಾಂಸ್ಕೃತಿಕ ವಿಚಾರ ವೇದಿಕೆ ಸಹಯೋಗದಲ್ಲಿ ಇಲ್ಲಿನ ಕಲ್ಮಠದ ಡಿ.ಎಡ್ ಕಾಲೇಜು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಕುವೆಂಪು ಸಾಹಿತ್ಯ ಸಂಸ್ಕೃತಿ ಪುನರಚನೆಯ ನೆಲೆಗಳು’ ವಿಷಯ ಕುರಿತ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘‘ಸಾಹಿತ್ಯದ ಸೇವೆ ಹೆಸರು ಹೇಳಿಕೊಂಡು ಇಲಾಖೆಯ ಅನುದಾನ ದುರುಪಯೋಗಪಡಿಸಿಕೊಂಡ ಕೆಲವು ಕುಲಪತಿಗಳು ಕೋರ್ಟ್‌ಗೆ ಹೋಗಿದ್ದಾರೆ. ಇನ್ನೂ ಕೆಲವರು ಕೋರ್ಟ್ ಬಾಗಿಲು ಕಾಯುತ್ತಿದ್ದಾರೆ. ಕುಲಪತಿ ಎನ್ನುವ ಶ್ರೇಷ್ಠ ಹುದ್ದೆಯಲ್ಲಿ ಇರುವ ಕೆಲವರು ನಾನಾ ಹಗರಣಗಳಲ್ಲಿ ಭಾಗಿಯಾಗಿ ತಮ್ಮ ಹುದ್ದೆಗೆ ಧಕ್ಕೆ ತರುತ್ತಿದ್ದಾರೆ’’ಎಂದು ದೂರಿದ ಅವರು, ‘‘ನಿಜವಾದ ಶಿವ, ಬಸವ, ಮಾನವೀಯ ತತ್ತ್ವಗಳನ್ನು ಜನರು ಇಂದಿಗೂ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ’’ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಅರ್ಜುನ್ ಗೊಳಸಂಗಿ, ಸಾವಿತ್ರಿಬಾಯಿ ಫುಲೆ ಸಾಹಿತ್ಯ ಸಾಂಸ್ಕೃತಿಕ ವಿಚಾರ ವೇದಿಕೆ ತಾಲೂಕು ಅಧ್ಯಕ್ಷೆ ಡಾ.ಎಂ.ಸೋಮಕ್ಕ, ಪ್ರಗತಿಪರ ಚಿಂತಕರಾದ ಸಿ.ಎಚ್. ನಾರಿನಾಳ, ಡಾ.ಲಿಂಗಣ್ಣ ಜಂಗಮರಹಳ್ಳಿ, ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ, ಸಾಹಿತಿಗಳಾದ ರಮೇಶ ಗಬ್ಬೂರು, ಡಾ.ಜಾಜಿ ದೇವೇಂದ್ರಪ್ಪ, ನವೀನ್ ಕಿಶೋರ, ಲೋಕೇಶ, ಕಾಲೇಜಿನ ಪ್ರಾಂಶುಪಾಲ ಡಾ.ಶರಣಬಸಪ್ಪ ಕೋಲ್ಕಾರ್ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ