ಹನುಮಸಾಗರ: ನೀಡ್ ಬೇಸ್ ಇಂಡಿಯಾ ಸಂಸ್ಥೆಯಡಿ ಇ-ವಿದ್ಯಾ ಲೋಕದ ವತಿಯಿಂದ ಆಯ್ದ ಸರಕಾರಿ ಶಾಲೆಗಳಲ್ಲಿ ನಡೆಸುತ್ತಿರುವ ಆನ್ಲೈನ್ ಟೀಚಿಂಗ್ ಪ್ರೋಗ್ರಾಮ್ ಮೂಲಕ ಹಿಂದುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕಿದೆ ಎಂದು ಸಂಸ್ಥೆಯ ರಾಜ್ಯ ಸಮನ್ವಯಾಧಿಕಾರಿ ಅಶ್ವಿನಿ ಹೇಳಿದರು.
ಇಲ್ಲಿನ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನೀಡ್ ಬೇಸ್ ಸಂಸ್ಥೆಯಿಂದ ನಡೆದ ವಿದ್ಯಾರ್ಥಿಗಳ ಹಾಗೂ ಪಾಲಕರ ಸಂವಾದದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ನಗರ ಪ್ರದೇಶಗಳ ಮಕ್ಕಳಿಗಿಂತ ಕಡಿಮೆ ಇಲ್ಲ ಎನ್ನುವಂತೆ ಮಾಡಿದೆ. ಅನಾಥ ಮಕ್ಕಳ, ಭಿಕ್ಷಾಟನೆ ಮಾಡುವ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದ ಜತೆಗೆ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಶಿಕ್ಷ ಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಸುಭಾಷಚಂದ್ರ ವಡ್ಡರ ಅಧ್ಯಕ್ಷ ತೆ ವಹಿಸಿದ್ದರು. ಇ-ವಿದ್ಯಾಲೋಕದ ಸಿಇಒ ವೆಂಕಟ ಶ್ರೀರಾಮನ್ ಉದ್ಘಾಟಿಸಿದರು.
ತಾಂತ್ರಿಕ ವಿಭಾಗದ ಅಧಿಕಾರಿ ನಾಗರಾಜ, ಸ್ಥಳೀಯ ಸಮನ್ವಯಾಧಿಕಾರಿ ವಸಂತ ಶಿನ್ನೂರ, ಮುಖ್ಯಗುರು ನಂದೂಲಾಲ್ ದಲಬಂಜನ, ಎಸ್ಡಿಎಂಸಿ ಉಪಾಧ್ಯಕ್ಷೆ ರಮಜಾನಬೀ ತಾವರಗೇರಾ, ಸದಸ್ಯ ಮಲ್ಲಯ್ಯ ಕೆಂಬಾವಿಮಠ, ಪಾಲಕ ಪ್ರತಿನಿಧಿ ಶೋಭಾ ಕನ್ನೂರ, ಶ್ರೀನಿವಾಸ ಜಹಗೀರದಾರ, ರಾಜೇಶ ಕಂಬದ ಇತರರು ಇದ್ದರು.
ಶಾಲೆಯ ಮಕ್ಕಳಿಂದ ನೃತ್ಯ, ಜನಪದ, ದೇಶ ಭಕ್ತಿಗೀತೆ, ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಲ್ಲಮ್ಮ ರೋಣದ, ಉಮಾ ನಾಗೂರ ನಿರ್ವಹಿಸಿದರು.