ಕುಷ್ಟಗಿ: 2015-16ನೇ ಸಾಲಿಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.60 ಹಾಗೂ ಶೇ.75ಕ್ಕಿಂತ ಹೆಚ್ಚು ಅಂಕ ಪಡೆದಿರುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಇದುವರೆಗೆ ಪ್ರೋತ್ಸಾಹಧನ ದೊರೆತಿಲ್ಲ, ಕೂಡಲೇ ವಿತರಣೆ ಮಾಡುವಂತೆ ಒತ್ತಾಯಿಸಿ ಇಲ್ಲಿನ ಬಿಇಒ ಕಚೇರಿಯ ಹಿರಿಯ ಸಿಬ್ಬಂದಿಗೆ ತಾಲೂಕಿನ ಬಿಸನಾಳ, ಚಿಕ್ಕನಂದಿಹಾಳ ವಿದ್ಯಾರ್ಥಿಗಳು ಮಂಗಳವಾರ ಮನವಿ ಸಲ್ಲಿಸಿದರು.
ಸರಕಾರ ಎಸ್ಸೆಸ್ಸೆಲ್ಸಿಯಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ., ಶೇ.75ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ತಲಾ 15 ಸಾವಿರ ರೂ. ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿತ್ತು. ವಿದ್ಯಾರ್ಥಿಗಳು ಕಲಿತ ಶಾಲೆಗಳಿಂದ ಸಂಬಂಧಿಸಿದ ದಾಖಲೆಗಳನ್ನು ಈಗಾಗಲೇ ಬಿಇಒ ಕಚೇರಿಗೆ ಸಲ್ಲಿಸಲಾಗಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡ ಕೆಲವೇ ದಿನಗಳಲ್ಲಿ ಪ್ರೋತ್ಸಾಹಧನವನ್ನು ನೀಡಬೇಕಿತ್ತು. ಶೈಕ್ಷ ಣಿಕ ವರ್ಷ ಮುಗಿಯುವ ಹಂತಕ್ಕೆ ಬಂದರೂ ಇದುವರೆಗೆ ಪ್ರೋತ್ಸಾಹಧನ ದೊರೆತಿಲ್ಲ. ಇದರಿಂದ ತಮ್ಮ ಶೈಕ್ಷ ಣಿಕ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಬಿಇಒ ಅವರು ಕಚೇರಿಯಲ್ಲಿ ಇಲ್ಲದ್ದಕ್ಕೆ ಕಚೇರಿಯ ಹಿರಿಯ ಸಿಬ್ಬಂದಿ ರಾಜು ಬಾಳಿತೋಟ ಅವರು ಮನವಿ ಸ್ವೀಕರಿಸಿ, ಬಿಇಒ ಗಮನಕ್ಕೆ ತರಲಾಗುವುದು ಎಂದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ್ ಬಿಸನಾಳ, ರಮೇಶ ಸೂಳಿಕೇರಿ, ಸಂತೋಷ ಸೂಳಿಕೇರಿ, ಲಲಿತಾ ಮಾಳೆಕೊಪ್ಪ, ಶ್ರೀದೇವಿ ಬುಕನಟ್ಟಿ, ಮಂಜುನಾಥ ಬಂಡಿ, ಪರಶುರಾಮ ವದೇಗೋಳ ಇತರರಿದ್ದರು.
...........
ಇತ್ತೀಚೆಗೆ ಶಿಕ್ಷ ಣ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಪ್ರೋತ್ಸಾಹಧನ ನೀಡಿಕೆ ಬಗ್ಗೆ ಚರ್ಚೆಯಾಗಿದೆ. ರಾಜ್ಯದ ಎಲ್ಲೂ ವಿತರಣೆಯಾಗಿಲ್ಲ. ಏಕಕಾಲಕ್ಕೆ ವಿತರಣೆ ಮಾಡುವ ಗುರಿಯನ್ನು ಇಲಾಖೆ ಹೊಂದಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಇರುವುದರಿಂದ ದೊಡ್ಡ ಮೊತ್ತದಲ್ಲೇ ಪ್ರೋತ್ಸಾಹಧನ ಮಂಜೂರಾಗಬೇಕು. ವಿದ್ಯಾರ್ಥಿಗಳು ಆತಂಕಪಡುವ ಅಗತ್ಯ ಇಲ್ಲ. ಇಷ್ಟರಲ್ಲೇ ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗುತ್ತದೆ.
-ಹಾನಮ್, ವಿಷಯ ಪರೀಕ್ಷ ಕರು ಹಾಗೂ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ, ಡಿಡಿಪಿಐ ಕಚೇರಿ, ಕೊಪ್ಪಳ.