ಆ್ಯಪ್ನಗರ

ಲಂಚ: ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಜಮೀನಿನ ಮ್ಯುಟೇಷನ್ ನೀಡಲು ಲಂಚ ಸ್ವೀಕರಿಸಿದ, ತಾಲೂಕಿನ ಹಿರೇವಂಕಲಕುಂಟಾ ಹೋಬಳಿ ವ್ಯಾಪ್ತಿಯ ತಿಪ್ಪನಾಳ ಗ್ರಾಮಲೆಕ್ಕಾಧಿಕಾರಿ, ಎಸಿಬಿ ದಾಳಿಗೆ ಗುರುವಾರ ಸಿಲುಕಿದ್ದಾರೆ.

ವಿಕ ಸುದ್ದಿಲೋಕ 24 Mar 2017, 8:32 am
ಯಲಬುರ್ಗಾ(ಕೊಪ್ಪಳ): ಜಮೀನಿನ ಮ್ಯುಟೇಷನ್ ನೀಡಲು ಲಂಚ ಸ್ವೀಕರಿಸಿದ, ತಾಲೂಕಿನ ಹಿರೇವಂಕಲಕುಂಟಾ ಹೋಬಳಿ ವ್ಯಾಪ್ತಿಯ ತಿಪ್ಪನಾಳ ಗ್ರಾಮಲೆಕ್ಕಾಧಿಕಾರಿ, ಎಸಿಬಿ ದಾಳಿಗೆ ಗುರುವಾರ ಸಿಲುಕಿದ್ದಾರೆ.
Vijaya Karnataka Web
ಲಂಚ: ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ


ಗ್ರಾಮದ ರೈತ ಮಹೆಬೂಬ್‌ಸಾಬ್ ಮುಲ್ಲಾ ಅವರು, ಜಮೀನಿನ ಮ್ಯುಟೇಷನ್‌ಗೆಂದು ತೆರಳಿದಾಗ, ಗ್ರಾಮಲೆಕ್ಕಾಧಿಕಾರಿ ನಾಗಪ್ಪ ಚೂರಿ ಅವರು 4ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ನಿರಾಕರಿಸಿದ ಮಹೆಬೂಬ್‌ಸಾಬ್ ಅವರು, ಎಸಿಬಿಗೆ ದೂರು ನೀಡಿದ್ದರು. ಈ ದೂರಿನನ್ವಯ, ಎಸಿಬಿ ಡಿಎಸ್ಪಿ ಗಿರೀಶ್ ನೇತೃತ್ವದ ತಂಡ ದಾಳಿ ನಡೆಸಿ, ಗ್ರಾಮಲೆಕ್ಕಾಧಿಕಾರಿಯನ್ನು ವಶಕ್ಕೆ ಪಡೆದಿದೆ. ಈ ಸಂದರ್ಭದಲ್ಲಿ ಸಿಪಿಐಗಳಾದ ಕರಿಯಪ್ಪ ಬನ್ನಿ, ಮೌನೇಶ್ವರ ಮಾಲಿ ಪಾಟೀಲ್ ಹಾಗೂ ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ