ಹನುಮಸಾಗರ: ಗ್ರಾಮದ 8ನೇ ವಾರ್ಡ್ ಸಿನ್ನೂರ ಕಾಲೊನಿಗೆ ಚರಂಡಿ ನೀರು ಮಿ]ತ ಕುಡಿವ ನೀರು ಪೂರೈಕೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ನಿವಾಸಿಗಳು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕಾಲೊನಿಯಲ್ಲಿ ಇತ್ತೀಚೆಗೆ ಸಿಸಿ ರಸ್ತೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ನಡೆದ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ರಾಗಲಿ, ಅಧಿಕಾರಿಗಳಾಗಲಿ, ಸದಸ್ಯರಾಗಲಿ ಬಂದು ಪರಿಶೀಲಿಸಿಲ್ಲ. ಇದರಿಂದಾಗಿ ಪೈಪ್ಲೈನ್ ಒಡೆದು ಚರಂಡಿ ಮಿ]ತ ನೀರು ಪೂರೈಕೆಯಾಗುತ್ತಿದೆ. ವಾರ್ಡ್ನಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಪಕ್ಕದ ವಾರ್ಡ್ಗೆ ನೀರು ಪೂರೈಕೆ ಮಾಡುವ ನೀರಗಂಟಿಯವರು, ಈ ಕಾಲೊನಿಗೆ ನೀರು ಬಿಡುವ ಸರದಿ ಬಂದಾಗ ಕೊಳವೆ ಬಾವಿಯಲ್ಲಿ ನೀರಿಲ್ಲ ಎಂದು ಹೇಳುತ್ತಾರೆ. ಹೀಗೆ ತಾರತಮ್ಯ ನೀತಿ ಎಸಗಲಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ಹೊರ ಹಾಕಿದರು.
ಗ್ರಾ.ಪಂ.ಸದಸ್ಯ ಚಂದ್ರು ಹಿರೇಮನಿ ಪ್ರತಿಕ್ರಿಯಿಸಿ, ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಕೂಡಲೇ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತದೆ. ಬಳಿಕ ಪೈಪ್ಲೈನ್ ದುರಸ್ತಿಗೊಳಿಸಿ ಶುದ್ಧ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದರು.
ಪ್ರಮುಖರಾದ ಗುರುರಾಜ ಮುಜಂದಾರ, ವೀರೇಶ ಕಟಗಿ, ನಿವಾಸಿಗಳಾದ ಗಾಯತ್ರಿ ಸಿನ್ನೂರ, ನೀಲಮ್ಮ ಸಿನ್ನೂರ, ಭಾಗ್ಯ ಸಿನ್ನೂರ, ನೀಲಮ್ಮ ಸೊಪ್ಪಿಮಠ, ಸಾವಿತ್ರಿ, ವಿದ್ಯಾ ಸಿನ್ನೂರ, ಇಂದುಮತಿ, ಸುಮಾ ಸಿನ್ನೂರ, ಚಂದ್ರಪ್ಪ ಇತರರು ಇದ್ದರು.