ಆ್ಯಪ್ನಗರ

ಸತ್ಯಾತ್ಮ ತೀರ್ಥರಿಂದ ಕವೀಂದ್ರ ತೀರ್ಥರ ಮಧ್ಯಾರಾಧನೆ

ತಾಲೂಕಿನ ನವಬೃಂದಾವನ ಗಡ್ಡೆಯಲ್ಲಿ ಬುಧವಾರ, ಉತ್ತರಾದಿ ಮಠದ ಪೀಠಾಧಿಪತಿ ಸತ್ಯಾತ್ಮ ತೀರ್ಥರು, ಕವೀಂದ್ರ ತೀರ್ಥರ ಮಧ್ಯಾರಾಧನೆ ನೆರವೆರಿಸಿದರು.

ವಿಕ ಸುದ್ದಿಲೋಕ 6 Apr 2017, 8:22 am
ಗಂಗಾವತಿ: ತಾಲೂಕಿನ ನವಬೃಂದಾವನ ಗಡ್ಡೆಯಲ್ಲಿ ಬುಧವಾರ, ಉತ್ತರಾದಿ ಮಠದ ಪೀಠಾಧಿಪತಿ ಸತ್ಯಾತ್ಮ ತೀರ್ಥರು, ಕವೀಂದ್ರ ತೀರ್ಥರ ಮಧ್ಯಾರಾಧನೆ ನೆರವೆರಿಸಿದರು.
Vijaya Karnataka Web
ಸತ್ಯಾತ್ಮ ತೀರ್ಥರಿಂದ ಕವೀಂದ್ರ ತೀರ್ಥರ ಮಧ್ಯಾರಾಧನೆ


ರಾಮ ನವಮಿ ಅಂಗವಾಗಿ ಮೂಲರಾಮದೇವರಿಗೆ ಕ್ಷೀರಾಭಿಷೇಕ, ಕವೀಂದ್ರ ತೀರ್ಥರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಹಾಗೂ ಭಕ್ತರಿಗೆ ಮುದ್ರಾಧಾರಣೆ, ಪ್ರವಚನ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಂಗಳೂರು, ದಾರವಾಡ, ವಿಜಯಪುರ, ಕೊಪ್ಪಳ, ಬಳ್ಳಾರಿ ಸೇರಿ ನಾನಾ ಜಿಲ್ಲೆಗಳ ಭಕ್ತರು ಆಗಮಿಸಿದ್ದರು.

ಈ ಸಂದರ್ಭದಲ್ಲಿ ವಿದ್ಯಾಧೀಶಾಚಾರ್ಯ ಗುತ್ತಲ್, ಸತ್ಯಧ್ಯಾನಾಚಾರ್ಯ ಕಟ್ಟಿ, ಪ್ರಸನ್ನ ಆಚಾರ್, ಆನಂದ ಆಚಾರ್, ಸಗರ ಕೃಷ್ಣ, ಶರತ ದಂಡಿನ್, ಎ.ಕೆ. ಪಾಟೀಲ್ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ