ಗಂಗಾವತಿ: ತಾಲೂಕಿನ ನವಬೃಂದಾವನ ಗಡ್ಡೆಯಲ್ಲಿ ಬುಧವಾರ, ಉತ್ತರಾದಿ ಮಠದ ಪೀಠಾಧಿಪತಿ ಸತ್ಯಾತ್ಮ ತೀರ್ಥರು, ಕವೀಂದ್ರ ತೀರ್ಥರ ಮಧ್ಯಾರಾಧನೆ ನೆರವೆರಿಸಿದರು.
ರಾಮ ನವಮಿ ಅಂಗವಾಗಿ ಮೂಲರಾಮದೇವರಿಗೆ ಕ್ಷೀರಾಭಿಷೇಕ, ಕವೀಂದ್ರ ತೀರ್ಥರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಹಾಗೂ ಭಕ್ತರಿಗೆ ಮುದ್ರಾಧಾರಣೆ, ಪ್ರವಚನ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಂಗಳೂರು, ದಾರವಾಡ, ವಿಜಯಪುರ, ಕೊಪ್ಪಳ, ಬಳ್ಳಾರಿ ಸೇರಿ ನಾನಾ ಜಿಲ್ಲೆಗಳ ಭಕ್ತರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ವಿದ್ಯಾಧೀಶಾಚಾರ್ಯ ಗುತ್ತಲ್, ಸತ್ಯಧ್ಯಾನಾಚಾರ್ಯ ಕಟ್ಟಿ, ಪ್ರಸನ್ನ ಆಚಾರ್, ಆನಂದ ಆಚಾರ್, ಸಗರ ಕೃಷ್ಣ, ಶರತ ದಂಡಿನ್, ಎ.ಕೆ. ಪಾಟೀಲ್ ಇತರರಿದ್ದರು.
ರಾಮ ನವಮಿ ಅಂಗವಾಗಿ ಮೂಲರಾಮದೇವರಿಗೆ ಕ್ಷೀರಾಭಿಷೇಕ, ಕವೀಂದ್ರ ತೀರ್ಥರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಹಾಗೂ ಭಕ್ತರಿಗೆ ಮುದ್ರಾಧಾರಣೆ, ಪ್ರವಚನ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಂಗಳೂರು, ದಾರವಾಡ, ವಿಜಯಪುರ, ಕೊಪ್ಪಳ, ಬಳ್ಳಾರಿ ಸೇರಿ ನಾನಾ ಜಿಲ್ಲೆಗಳ ಭಕ್ತರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ವಿದ್ಯಾಧೀಶಾಚಾರ್ಯ ಗುತ್ತಲ್, ಸತ್ಯಧ್ಯಾನಾಚಾರ್ಯ ಕಟ್ಟಿ, ಪ್ರಸನ್ನ ಆಚಾರ್, ಆನಂದ ಆಚಾರ್, ಸಗರ ಕೃಷ್ಣ, ಶರತ ದಂಡಿನ್, ಎ.ಕೆ. ಪಾಟೀಲ್ ಇತರರಿದ್ದರು.