ಆ್ಯಪ್ನಗರ

ಬಿರುಬೇಸಿಗೆ ಪರಿಣಾಮ: ಗೋಡೆಗಳಲ್ಲಿ ಬಿರುಕು

ಬಿರುಬೇಸಿಗೆ ಪರಿಣಾಮ, ತಾಲೂಕಿನ ಹೊಸಳ್ಳಿಯ ಮನೆಯೊಂದರ ಗೋಡೆಗಳಲ್ಲಿ ಗುರುವಾರ ಮಧ್ಯಾಹ್ನ 3.50ರ ಸುಮಾರಿಗೆ ಅಲ್ಲಲ್ಲಿ ಬಿರುಕುಕಾಣಿಸಿಕೊಂಡು, ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾದವು.

ವಿಕ ಸುದ್ದಿಲೋಕ 7 Apr 2017, 8:25 am
ಕೊಪ್ಪಳ: ಬಿರುಬೇಸಿಗೆ ಪರಿಣಾಮ, ತಾಲೂಕಿನ ಹೊಸಳ್ಳಿಯ ಮನೆಯೊಂದರ ಗೋಡೆಗಳಲ್ಲಿ ಗುರುವಾರ ಮಧ್ಯಾಹ್ನ 3.50ರ ಸುಮಾರಿಗೆ ಅಲ್ಲಲ್ಲಿ ಬಿರುಕುಕಾಣಿಸಿಕೊಂಡು, ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾದವು.
Vijaya Karnataka Web
ಬಿರುಬೇಸಿಗೆ ಪರಿಣಾಮ: ಗೋಡೆಗಳಲ್ಲಿ ಬಿರುಕು


ಗ್ರಾಮದ ದತ್ತಂಭಟ್ ಜೋಶಿ ಅವರ 12 ಅಡಿ ಎತ್ತರದ ಆರ್‌ಸಿಸಿ ಕಟ್ಟಡದಲ್ಲಿ ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಯಿತು. ಕುಟುಂಬದ ಸದಸ್ಯರು ಸಂತೋಷದಿಂದ ಕಾಲ ಕಳೆಯುತ್ತಿದ್ದ ಸಂದರ್ಭದಲ್ಲಿ ಮನೆಯ ಮೇಲ್ಭಾಗ ದಿಢೀರ್ ಬಿರುಕು ಬಿಟ್ಟು ಅಚ್ಚರಿಮೂಡಿಸಿದೆ. ಮನೆಯ ಮುಂದಿನ ಬಾಗಿಲಿಗೆ ಅಳವಡಿಸಿದ್ದ ಗಾಜುಗಳೆಲ್ಲ ಪುಡಿಪುಡಿಯಾಗಿವೆ. ಈ ಘಟನೆಗೆ ಬೆಚ್ಚಿಬಿದ್ದ ಮನೆಯವರು ಹೊರಗೋಡಿ ಬಂದರು. ಹೊರಬಂದು ನೋಡುತ್ತಿದ್ದಂತೆ ಎಲ್ಲವೂ ಶಾಂತವಾಗಿದ್ದಂತೆ ಕಂಡು ಬಂತು.

‘‘ಮನೆ ಮೇಲೆದ್ದು ಕೆಳಗೆ ಕುಸಿದಂತೆ ಭಾಸವಾಯಿತು. ಇದರಿಂದ ಮನೆ ಮೇಲ್ಭಾಗವೆಲ್ಲ ಬಿರುಕುಬಿಟ್ಟಿದೆ. ಅಡುಗೆ ಮನೆಯಲ್ಲಿ ಚಪಾತಿ ತಯಾರಿಸುತ್ತಿದ್ದ ಸಾಮಗ್ರಿ ಹಾಗೂ ಪಾತ್ರೆಗಳೆಲ್ಲ ಕೆಳಗೆ ಬಿದ್ದವು. ಫ್ರಿಡ್ಜ್ ಅತ್ತಿಂದಿತ್ತ ಅಲುಗಾಡಿ ನೆಲಕ್ಕುರುಳಿತು. ಫ್ಯಾನ್ ರೆಕ್ಕೆಗಳೆಲ್ಲ ಮುದುಡಿದವು. ಬಾಗಿಲು ಹಾಗೂ ಮೇಲ್ಭಾಗದಲ್ಲಿದ್ದ ಹವಾನಿಯಂತ್ರಿತ ಕಿಟಕಿಗಳೆಲ್ಲ ಸಿಡಿದವು. ಅಡುಗೆ ತಯಾರಿಸಲು ಸಿಲಿಂಡರ್ ಹಚ್ಚಿದ್ದರೂ ಸ್ಪೋಟವಾಗಿಲ್ಲ ಎಂಬುದೇ ದೊಡ್ಡ ಸಮಾಧಾನ. ಸುತ್ತಲಿನ ಮನೆಗಳಿಗೆ ಯಾವುದೇ ಧಕ್ಕೆ ಆಗಿಲ್ಲ’’ ಎಂದು ಕುಟುಂಬದ ಸದಸ್ಯರು ತಮ್ಮ ಅನುಭವ ಹಂಚಿಕೊಂಡರು.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಜನರು, ‘‘ಮನೆಗೆ ಸರಿಯಾದ ಬುನಾದಿ ಹಾಕದೇ ಇರುವುದರಿಂದ ಅಥವಾ ಬಿಸಿಲಿನ ಹೊಡೆತಕ್ಕೆ ಮನೆಯಲ್ಲಿ ಬಿರುಕು ಕಾಣಿಸಿಕೊಂಡಿರಬಹುದು’’ ಎಂಬ ಶಂಕೆ ವ್ಯಕ್ತಪಡಿಸಿದರು.

..............
ಹೊಸಳ್ಳಿ ಗ್ರಾಮದ ಮನೆಯೊಂದರಲ್ಲಿ ಬಿರುಕು ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಕಳುಹಿಸಲಾಗಿದೆ. ಅಧಿಕಾರಿಗಳು ಪರಿಶೀಲಿಸಿದ ಬಳಿಕ ಮನೆ ಬಿರುಕು ಬಿಡಲು ನೈಜ ಕಾರಣ ತಿಳಿಯಲಿದೆ.

- ಎಂ.ಕನಗವಲ್ಲಿ, ಡಿಸಿ, ಕೊಪ್ಪಳ
..............

ಮನೆಯಲ್ಲಿ ದಿಢೀರ್ ನಡೆದ ಬೆಳವಣಿಗೆಯಿಂದ ಎಲ್ಲರಿಗೂ ಆಶ್ಚರ್ಯವಾಗಿದೆ. ಮನೆಯ ಬಾಗಿಲು, ಕಿಟಕಿಯ ಗಾಜುಗಳೆಲ್ಲ ಒಡೆದಿವೆ. ಏನಾಗುತ್ತಿದೆ ಎನ್ನುವಷ್ಟರಲ್ಲಿ ಮನೆ ಬಿರುಕು ಬಿಟ್ಟು, ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದವು.

-ದತ್ತಂಭಟ್ ಜೋಶಿ, ಮನೆಯ ಯಜಮಾನ, ಹೊಸಳ್ಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ