ಆ್ಯಪ್ನಗರ

ತ್ಯಾಜ್ಯ ವಿಲೇವಾರಿ

ವೈಯಕ್ತಿಕ ಜಗಳದಿಂದಾಗಿ ಗ್ರಾಮದ ಶ್ರೀ ಚಂದ್ರಶೇಖರಸ್ವಾಮಿ ಮಠದ ಮುಂಭಾಗ, ಸಂತೆ ಮಾರುಕಟ್ಟೆ ಪಕ್ಕದ ಚರಂಡಿ ತ್ಯಾಜ್ಯ ವಿಲೇವಾರಿಗೆ ಅಲ್ಲಿನ ನಿವಾಸಿಗಳು ಅಡ್ಡಿಪಡಿಸಿದ ಘಟನೆ ಶನಿವಾರ ನಡೆಯಿತು.

ವಿಕ ಸುದ್ದಿಲೋಕ 17 Apr 2017, 9:00 am

ಮುದೇನೂರು: ವೈಯಕ್ತಿಕ ಜಗಳದಿಂದಾಗಿ ಗ್ರಾಮದ ಶ್ರೀ ಚಂದ್ರಶೇಖರಸ್ವಾಮಿ ಮಠದ ಮುಂಭಾಗ, ಸಂತೆ ಮಾರುಕಟ್ಟೆ ಪಕ್ಕದ ಚರಂಡಿ ತ್ಯಾಜ್ಯ ವಿಲೇವಾರಿಗೆ ಅಲ್ಲಿನ ನಿವಾಸಿಗಳು ಅಡ್ಡಿಪಡಿಸಿದ ಘಟನೆ ಶನಿವಾರ ನಡೆಯಿತು.

ಗ್ರಾಮದ ಚರಂಡಿ ಮತ್ತು ಮುಖ್ಯರಸ್ತೆ ಸೇರಿ ಎಲ್ಲೆಂದರಲ್ಲಿ ಮಲಿನ ನೀರು ಸಂಗ್ರಹವಾಗಿ ತೊಂದರೆಯಾಗಿದೆ. ಸೊಳ್ಳೆ ಕಾಟ ಹೆಚ್ಚಾಗಿ ಮಲೇರಿಯಾ,ಡೆಂಗೆ ಮುಂತಾದ ಕಾಯಿಲೆ ಹರಡುತ್ತಿವೆ. ಈ ಬಗ್ಗೆ ಕೆಲವು ಬಾರಿ ಪಿಡಿಒಗೆ ತಿಳಿಸಿದರೂ ಸ್ಪಂದಿಸಿಲ್ಲ ಎಂದು ಸ್ಥಳೀಯರು ಇತ್ತೀಚೆಗೆ ಪಿಡಿಒ ಅವರನ್ನು ತರಾಟೆ ತೆಗೆದುಕೊಂಡಿದ್ದರು. ಗ್ರಾಮ ಸ್ವಚ್ಛತೆಗೆ ಮುಂದಾಗುವಂತೆ ಆರೋಗ್ಯ ಇಲಾಖೆಯೂ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಸಂತೆ ಮಾರುಕಟ್ಟೆ ಪಕ್ಕದ ಚರಂಡಿಯಲ್ಲಿನ ತ್ಯಾಜ್ಯ ವಿಲೇವಾರಿಗೆ ಮುಂದಾಗಿತ್ತು. ಆದರೆ ಚರಂಡಿ ಪಕ್ಕದ ಕೆಲ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಸಾರ್ವಜನಿಕರ ರಸ್ತೆಯನ್ನು ಕೆಲವರು ಅತಿಕ್ರಮಿಸಿಕೊಂಡು ರಸ್ತೆ ಮಧ್ಯೆ ತೆಂಗಿನ ಮರ ಬೆಳೆಸಿದ್ದಾರೆ. ನೆಟ್ಟ ಗಿಡದ ಸುತ್ತಲೂ ಕಟ್ಟೆ ನಿರ್ಮಿಸಿದ್ದರಿಂದ ರಸ್ತೆ ಇಕ್ಕಟ್ಟಾಗಿದೆ. ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಆದ್ದರಿಂದ ಸಮಸ್ಯೆ ಬಗೆಹರಿಸಿ ಕಾಮಗಾರಿ ಆರಂಭಕ್ಕೆ ಮುಂದಾಗಬೇಕು ಎಂದು ಪಟ್ಟು ಹಿಡಿದರು.

ಎಚ್ಚರಿಕೆ: ಕೆಲ ಹೊತ್ತು ಎರಡು ಮನೆಯವರ ನಡುವೆ ವಾಗ್ವಾದ ಉಂಟಾಗಿ ತ್ಯಾಜ್ಯ ವಿಲೇವಾರಿ ಕೆಲಸಕ್ಕೆ ಅಡ್ಡಿಯಾಯಿತು. ಇಬ್ಬರ ಜಗಳದಿಂದ ಗ್ರಾಮದಲ್ಲಿ ಅನೈರ್ಮಲ್ಯ ವಾತಾವರಣ ಸೃಷ್ಟಿಯಾಗಿದೆ. ಮತ್ತು ಸೊಳ್ಳೆ ಕಾಟದಿಂದ ಜನ ಬೇಸತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಮೇಲಧಿಕಾರಿಗಳು ಮಧ್ಯಪ್ರವೇಶಿಸಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಇಲ್ಲವಾದರೆ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟಿಸಲಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದರು.

Vijaya Karnataka Web
ತ್ಯಾಜ್ಯ ವಿಲೇವಾರಿ

-----

ಚರಂಡಿಯಲ್ಲಿ ಸುಮಾರು ವರ್ಷಗಳಿಂದ ತ್ಯಾಜ್ಯ ಸಂಗ್ರಹವಾಗಿದ್ದರಿಂದ ಸ್ವಚ್ಛತೆಗೆ ಮುಂದಾಗಿದ್ದೆವು. ಆದರೆ, ಅಲ್ಲಿನ ಕೆಲವರು ತಮ್ಮ ವೈಯಕ್ತಿಕ ತಿಕ್ಕಾಟದಿಂದ ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ. ಮತ್ತು ರಸ್ತೆ ಮಧ್ಯೆ ಮನೆ ಮತ್ತು ಕಟ್ಟೆ ನಿರ್ಮಿಸಿಕೊಂಡಿದ್ದು, ಇವುಗಳನ್ನು ತೆರವು ಮಾಡುವಂತೆ ತಾಕೀತು ಮಾಡುತ್ತಿದ್ದಾರೆ. ಮನೆ ಕಿತ್ತುವುದು ನಮ್ಮ ಕೆಲಸವಲ್ಲ. ಅದಕ್ಕೆ ಸಂಬಂಧಿಸಿದ ಮೇಲಧಿಕಾರಿಗಳಿಗೆ ಪತ್ರ ಬರೆದು ಮನೆ ತೆರವು ಮಾಡಬೇಕಿದೆ. ಏ.17ರಂದು ಸಾಮನ್ಯ ಸಭೆ ಇದ್ದು ಅಂದು ಈ ವಿಷಯ ಚರ್ಚಿಸಿ ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆ.

-ಬಸವರಾಜ ಸಂಕನಾಳ,ಪಿಡಿಒ ಗ್ರಾ.ಪಂ.ಮುದೇನೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ