ಆ್ಯಪ್ನಗರ

ಅಮಾನತು ಆದೇಶ ರದ್ದು

ಇಲ್ಲಿನ ಎಪಿಎಂಸಿ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ ಅವರ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿದ ಕಷಿ ಮಾರಾಟ ಇಲಾಖೆ, ಅವರ ನಿವೃತ್ತಿ ದಿನವೇ ಅಮಾನತು ಆದೇಶ ರದ್ದುಗೊಳಿಸಿ ಗಮನಸೆಳೆದಿದೆ.

ವಿಕ ಸುದ್ದಿಲೋಕ 2 Jun 2017, 8:23 am
ಕುಷ್ಟಗಿ (ಕೊಪ್ಪಳ): ಇಲ್ಲಿನ ಎಪಿಎಂಸಿ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ ಅವರ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿದ ಕಷಿ ಮಾರಾಟ ಇಲಾಖೆ, ಅವರ ನಿವೃತ್ತಿ ದಿನವೇ ಅಮಾನತು ಆದೇಶ ರದ್ದುಗೊಳಿಸಿ ಗಮನಸೆಳೆದಿದೆ.
Vijaya Karnataka Web
ಅಮಾನತು ಆದೇಶ ರದ್ದು


ಎಪಿಎಂಸಿ ಆವರಣದಲ್ಲಿ ರಚನೆಯಾಗಿದ್ದ ನಿವೇಶನಗಳ ನೋಂದಣಿಗೆ ಘಟನೋತ್ತರ ಅನುಮೋದನೆ ಪಡೆದಿರಲಿಲ್ಲ ಎಂಬ ಕಾರಣಕ್ಕೆ ಎಸ್.ಮಲ್ಲಿಕಾರ್ಜುನ ಅವರನ್ನು ಕಷಿ ಮಾರಾಟ ಇಲಾಖೆ ನಿರ್ದೇಶಕ ಜಿ.ಎನ್.ಶಿವಮೂರ್ತಿ ಅವರು, 2017, ಮೇ 29ರಂದು ಅಮಾನತುಗೊಳಿಸಿದ್ದರು. ಅದೇ ದಿನ ಮಾನ್ವಿ ಎಪಿಎಂಸಿಯ ಕಾರ್ಯದರ್ಶಿ ಜಿ.ಎಂ.ಮರುಳಸಿದ್ಧಯ್ಯ ಅವರು ಕುಷ್ಟಗಿ ಎಪಿಎಂಸಿ ಕಾರ್ಯದರ್ಶಿ ಹುದ್ದೆಯ ಪ್ರಭಾರವನ್ನು ವಹಿಸುವಂತೆ ಆದೇಶದಲ್ಲಿ ತಿಳಿಸಿದ್ದರು.

ಅಮಾನತುಗೊಂಡಿದ್ದ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ ಅವರು ಮೇ 31ರಂದು ಸೇವಾ ನಿವತ್ತಿಯಾಗಲಿದ್ದರು. ಇದನ್ನು ವಿಶೇಷವಾಗಿ ಪರಿಗಣಿಸಿದ ಇಲಾಖೆ ನಿರ್ದೇಶಕ, ಮೇ 31ರಂದೇ ಅವರ ಅಮಾನತು ಆದೇಶವನ್ನು ವಿಚಾರಣೆ ಕಾಯ್ದಿರಿಸಿದರು. ಆದೇಶ ರದ್ದುಗೊಳಿಸಿ ಪುನಃ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದರು. ಸೇವಾ ನಿವತ್ತಿ ದಿನವೇ ಅಮಾನತು ಆದೇಶ ರದ್ದುಗೊಂಡಿರುವ ಸಂತೋಷವನ್ನು ಹಂಚಿಕೊಳ್ಳಲು ಎಸ್.ಮಲ್ಲಿಕಾರ್ಜುನ ಅವರಿಗೆ ಅವಕಾಶ ಇರಲಿಲ್ಲ. ಅದೇ ದಿನ ಅವರು ಎಪಿಎಂಸಿ ಸಿಬ್ಬಂದಿ, ಅಧ್ಯಕ್ಷ, ಸದಸ್ಯರಿಂದ ಬೀಳ್ಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ