ಆ್ಯಪ್ನಗರ

ಸಾಲಬಾಧೆ: ರೈತ ಆತ್ಮಹತ್ಯೆ

ಸಾಲಬಾಧೆ ತಾಳದ, ಜಮಾಪುರ ಗ್ರಾಮದ ರೈತ ಅನ್ನದಾನಗೌಡ ಕಲ್ಮಂಗಿ (32), ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಕ ಸುದ್ದಿಲೋಕ 8 Aug 2017, 7:50 am
ಕಾರಟಗಿ (ಕೊಪ್ಪಳ): ಸಾಲಬಾಧೆ ತಾಳದ, ಜಮಾಪುರ ಗ್ರಾಮದ ರೈತ ಅನ್ನದಾನಗೌಡ ಕಲ್ಮಂಗಿ (32), ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web
ಸಾಲಬಾಧೆ: ರೈತ ಆತ್ಮಹತ್ಯೆ


ಅನ್ನದಾನಗೌಡ ಸೇರಿ ಒಟ್ಟು ಮೂವರು ಸೋದರರ ಹೆಸರಿಗೆ 23ಎಕರೆ ಕಷಿ ಜಮೀನಿದೆ. ಅವರು ಕಷಿ ಚಟುವಟಿಕೆಗೆ ಗಂಗಾವತಿಯ ಎಡಿಬಿ ಬ್ಯಾಂಕಿನಲ್ಲಿ 12ಲಕ್ಷ ರೂ. ಹಾಗೂ ಐಸಿಐಸಿಐ ಬ್ಯಾಂಕಿನಲ್ಲಿ 11ಲಕ್ಷ ರೂ. ಸಾಲಮಾಡಿದ್ದಾರೆ. ಅಪಾರ ಪ್ರಮಾಣದ ಸಾಲದ ಹೊರೆಯಿಂದ ಚಿಂತೆಗೀಡಾಗಿದ್ದ ಅನ್ನದಾನಗೌಡ, ರವಿನಗರ-ಜಮಾಪುರ ಮಧ್ಯದ ಉಪನಾಲೆಯ ಮೇಲೆ ಶನಿವಾರ ತಡರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರ ಗಾಯಗೊಂಡಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ರಾತ್ರಿ ಮತಪಟ್ಟರು.

ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಅವರ ತಂದೆ ಶರಣಪ್ಪ ಕಲ್ಮಂಗಿ ನೀಡಿದ ದೂರು ಆಧರಿಸಿ, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ