ಆ್ಯಪ್ನಗರ

ಹನುಮೇಶ ನಾಯಕ ಕಲಬುರಗಿ ಜೈಲಿಗೆ ಶಿಫ್ಟ್

ಗಂಗಾವತಿ ತಾಲೂಕಿನ ಕನಕಾಪುರ ಗ್ರಾಮದ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಹನುಮೇಶ ನಾಯಕ ಅವರನ್ನು ಕಲಬುರಗಿಯ ಸೆಂಟ್ರಲ್ ಜೈಲಿಗೆ ಭಾನುವಾರ ಕಳುಹಿಸಲಾಗಿದೆ.

ವಿಕ ಸುದ್ದಿಲೋಕ 14 Aug 2017, 7:37 am
ಕೊಪ್ಪಳ: ಗಂಗಾವತಿ ತಾಲೂಕಿನ ಕನಕಾಪುರ ಗ್ರಾಮದ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಹನುಮೇಶ ನಾಯಕ ಅವರನ್ನು ಕಲಬುರಗಿಯ ಸೆಂಟ್ರಲ್ ಜೈಲಿಗೆ ಭಾನುವಾರ ಕಳುಹಿಸಲಾಗಿದೆ.
Vijaya Karnataka Web
ಹನುಮೇಶ ನಾಯಕ ಕಲಬುರಗಿ ಜೈಲಿಗೆ ಶಿಫ್ಟ್


ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಅವರು, ಅನಾರೋಗ್ಯದ ನೆಪವೊಡ್ಡಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಜಿಲ್ಲಾಸ್ಪತ್ರೆಯಲ್ಲಿದ್ದುಕೊಂಡೇ ಸಾಕ್ಷಿಗಳಿಗೆ ಮೊಬೈಲ್ ಮೂಲಕ ಬೆದರಿಕೆ ಒಡ್ಡುತ್ತಿದ್ದರು ಎಂಬ ಆರೋಪ ಹಿನ್ನೆಲೆಯಲ್ಲಿ ಅವರನ್ನು ಕಲಬುರಗಿಯ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ಬಂಧಿಖಾನೆಯ ಎಡಿಜಿಪಿ ಮೆಘರಿಕ್ ಅವರ ಮೌಖಿಕ ಆದೇಶದಂತೆ ಈ ಆರೋಪಿಯನ್ನು ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಬಿ.ಎಸ್.ಬಿರಾದಾರ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ