ಆ್ಯಪ್ನಗರ

ವೇತನ ಪಾವತಿಗೆ ಆಗ್ರಹಿಸಿ ಪೌರಕಾರ್ಮಿಕರ ಪ್ರತಿಭಟನೆ

8 ತಿಂಗಳ ಬಾಕಿ ವೇತನ ತಕ್ಷಣ ಪಾವತಿ ಮಾಡಬೇಕೆಂದು ಆಗ್ರಹಿಸಿ,ಗುತ್ತಿಗೆ ಪೌರಕಾರ್ಮಿಕರು ನಗರಸಭೆ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

Vijaya Karnataka Web 3 Apr 2018, 5:00 am
ಗಂಗಾವತಿ : 8 ತಿಂಗಳ ಬಾಕಿ ವೇತನ ತಕ್ಷಣ ಪಾವತಿ ಮಾಡಬೇಕೆಂದು ಆಗ್ರಹಿಸಿ,ಗುತ್ತಿಗೆ ಪೌರಕಾರ್ಮಿಕರು ನಗರಸಭೆ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
Vijaya Karnataka Web KPL-KPL02GVT01


ಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ 162 ಪೌರಕಾರ್ಮಿಕರ ಸುಮಾರು 2 ಕೋಟಿ ರೂಪಾಯಿ ಬಾಕಿ ವೇತನ ನಗರಸಭೆ ಅಧಿಕಾರಿಗಳು ಉಳಿಸಿಕೊಂಡಿದ್ದಾರೆ. ಪೌರಾಯುಕ್ತರು ಮತ್ತು ನಗರಸಭೆ ಆಡಳಿತ ಮಂಡಳಿಯವರನ್ನು ಈ ಬಗ್ಗೆ ಕೇಳಿದರೆ ನಿರ್ಲಕ್ಷ್ಯದಿಂದ ಉತ್ತರ ನೀಡುತ್ತಾರೆ.ಕೂಲಿ ಹಣಕ್ಕಾಗಿ ಪ್ರತಿ ತಿಂಗಳು ಧರಣಿ ನಡೆಸುವಂತಾಗಿದೆ. ಇದರಿಂದ ಕೌಟುಂಬಿಕ ಜೀವನ ನಡೆಸಲು ಸಮಸ್ಯೆ ಎದುರಾಗಿದೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕರ ಮುಖಂಡ ಜೆ.ಭಾರದ್ವಾಜ್‌ ಮಾತನಾಡಿ, ಕೂಲಿ ಕಾರ್ಮಿಕರ ವತ್ಯಾಸದ 22 ತಿಂಗಳ ವೇತನ ಬಾಕಿ ಇದೆ. ಕಾರ್ಮಿಕ ಇಲಾಖೆ ನಿಯಮಾವಳಿಯಂತೆ ಕೆಲಸಗಾರರಿಗೆ ವ್ಯತ್ಯಾಸದ ಹಣ ನಗರಸಭೆ ಶೀಘ್ರ ಪಾವತಿ ಮಾಡಬೇಕು. ಆದರೆ, ಕನಿಷ್ಠ ಕೂಲಿ ನೀಡುವ ಮೂಲಕ ದುಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಕಾರ್ಮಿಕರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗುತ್ತಿಗೆ ಪೌರ ಕಾರ್ಮಿಕರ ಸಂಘಟನೆ ಅಧ್ಯಕ್ಷ ಪರಶುರಾಮ, ಕಾರ್ಮಿಕರಾದ ಬುಡ್ಡಪ್ಪ,ಯೇಸಪ್ಪ, ನಿಂಗಮ್ಮ, ಗಿಡ್ಡಪ್ಪ, ಬಾಬರ್‌, ಆಲಂಸಾಬ್‌, ನಬಿಸಾಬ್‌, ಬಸವರಾಜ, ನಾಗರಾಜು, ದ್ಯಾವಮ್ಮ, ಸರೋಜಮ್ಮ ಸೇರಿದಂತೆ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ