ಕುಕನೂರು : ಅಪರಾಧ ರಹಿತ ಸಮಾಜ ಎಲ್ಲಿದೆಯೋ ಅಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ.ಯುವಕರು ಕೆಟ್ಟ ಹಾದಿಯಲ್ಲಿ ನಡೆಯದೇ ಉನ್ನತವಾಗಿ ಆಲೋಚಿಸಿ ಸರಿಯಾದ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಪಿಎಸ್ಸೈ ಜಿ.ಎಸ್.ರಾಘವೇಂದ್ರ ಹೇಳಿದರು.
ಪಟ್ಟಣದ ಸರಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೂಂಡಿದ್ದ 'ಲೈಂಗಿಕ ದೌರ್ಜನ್ಯ ವಿರೋಧಿ ತಡೆ ಜಾಗೃತಿ ಹಾಗೂ ಮಾದಕ ಸೇವನೆಯಿಂದಾಗುವ ಪರಿಣಾಮ' ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳಾದ ತಂಬಾಕು, ಡ್ರಗ್ಸ್ , ಸಿಗರೇಟ್ ಇತ್ಯಾದಿ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ.ನಮ್ಮ ದೇಶ ಧೂಮಪಾನ ಮಾಡುವವರ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಶ್ವಾಸಕೋಶದ ಕಾಯಿಲೆಗೆ ತಂಬಾಕು ಸೇವನೆ ಪ್ರಮುಖ ಕಾರಣವಾಗಿದೆ. ಪ್ರತಿ ವರ್ಷ ವಿಶ್ವದಾದ್ಯಂತ 60ಲಕ್ಷ ಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆಯಿಂದ ಉಂಟಾಗುವ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ವೇಶ್ಯಾವಾಟಿಕೆ, ಮಾದಕವಸ್ತು ಮಾರಾಟಕ್ಕಾಗಿ ದೊಡ್ಡ ನೌಕರಿ ಹೆಚ್ಚು ಸಂಬಳದ ಆಸೆ ತೋರಿಸಿ ಯುವಕ-ಯುವತಿಯರನ್ನು ಹೊರ ರಾಜ್ಯಕ್ಕೆ ಕಳಿಸಿ ಮಾನವ ಕಳ್ಳ ಸಾಗಣೆ ಮಾಡಲಾಗುತ್ತಿದೆ. ಇದರಿಂದ ಕೆಲವರು ಮಾರಕ ರೋಗಗಳಿಗೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತದ್ದಾರೆ ಎಂದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷ ಕ ಎ.ಎಚ್ ಮುತ್ತಣ್ಣ, ಸಹ ಶಿಕ್ಷ ಕರಾದ ನಿಂಗಪ್ಪ ಚಕ್ರಸಾಲಿ, ಶರಣಗೌಡ ಪಾಟೀಲ್, ಪ್ರೊ.ಪಿಎಸ್ಸೈ ಅಮರೇಗೌಡ, ಸಿಬ್ಬಂದಿ ಶರಣಪ್ಪ ಕಲಕಬಂಡಿ, ದೊಡ್ಡಯ್ಯ ಮಳ್ಳಿಮಠ, ಮಹಾಂತೇಶ ಸೇರಿದಂತೆ ಇನ್ನಿತರರಿದ್ದರು.