ಆ್ಯಪ್ನಗರ

ರಸ್ತೆ ಅಧ್ವಾನ; ಜನ ಹೈರಾಣ!

ತಾಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಅಧ್ವಾನವಾಗಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆಗಳ ಅಭಿವೃದ್ಧಿಗೆ ಮುಂದಾಗದ ಪರಿಣಾಮ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಗಿದೆ.

Vijaya Karnataka 18 Oct 2018, 5:00 am
ದೇವರಾಜ ಮಾದ್ಯನೇರಿ, ಯಲಬುರ್ಗಾ
Vijaya Karnataka Web
ರಸ್ತೆ ಅಧ್ವಾನ; ಜನ ಹೈರಾಣ!


ತಾಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಅಧ್ವಾನವಾಗಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆಗಳ ಅಭಿವೃದ್ಧಿಗೆ ಮುಂದಾಗದ ಪರಿಣಾಮ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಗಿದೆ.

ತಾಲೂಕು ಕೇಂದ್ರದ 2 ಮುಖ್ಯವಾದ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿನ ರಸ್ತೆ ಹದಗೆಟ್ಟಿವೆ. ಹಾಳಾದ ರಸ್ತೆಯಲ್ಲೇ ವಾಹನ ಚಲಾಯಿಸುವ ಅನಿವಾರ್ಯತೆ ಎದುರಾಗಿದೆ. ವಾಹನವನ್ನು ವೇಗವಾಗಿ ಚಲಾಯಿಸಿದರೆ, ಅಪಾಯ ಕಟ್ಟಿಕಟ್ಟಿ ಬುತ್ತಿ. ಕಳೆದ 6ರಿಂದ 7 ವರ್ಷಗಳಿಂದ ಈ ರಸ್ತೆಗಳನ್ನು ನಿರ್ಮಿಸಲಾಗಿದೆ. ಜನಪ್ರತಿನಿಧಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ರಸ್ತೆಗಳು ದುರಸ್ತಿ ಕಾಣದಂತಾಗಿದೆ.

ಸವಾರರಿಗೆ ತೊಡಕು: ಪಟ್ಟಣ ಕೇಂದ್ರದಿಂದ ಕುಕನೂರು ರಸ್ತೆ, ತಾಲೂಕಿನ ಮಲಕಸಮುದ್ರ ಗ್ರಾಮದಿಂದ ಯಲಬುರ್ಗಾ, ಕುಡಗುಂಟಿ ಗ್ರಾಮದಿಂದ ಮಲಕಸಮುದ್ರ ರಸ್ತೆ, ಲಕಮನಗುಳೆ ಗ್ರಾಮದಿಂದ ವಣಗೇರಿ ರಸ್ತೆ, ಬೇವೂರು ಗ್ರಾಮದಿಂದ ಪಟ್ಟಣಕ್ಕೆ ಹಾದು ಹೋಗಿರುವ ರಸ್ತೆ, ತಾಲೂಕಿನ ಹುಲೇಗುಡ್ಡ ಕ್ರಾಸ್‌ದಿಂದ ಮುರಡಿ ಸಂಪರ್ಕಿಸುವ ರಸ್ತೆ, ಯಡ್ಡೋಣಿ ಗ್ರಾಮದಿಂದ ಪುಟಗಮರಿ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ತೆರಳುವ ರಸ್ತೆಗಳು, ಮ್ಯಾದನೇರಿ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಗಳು ಸಂಪೂರ್ಣ ಕಿತ್ತು ಹಾಳಾಗಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಆದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಕ್ರಮಕ್ಕೆ ಮುಂದಾಗಲಿ: ತಾಲೂಕು ಕೇಂದ್ರದಿಂದ ಅಂದಾಜು 40 ಕಿ.ಮೀ.ದೂರದಲ್ಲಿನ ಹಳ್ಳಿಗಳ ರಸ್ತೆಗಳು ಸುಗಮ ಸಂಚಾರ ಹೊಂದಿದ್ದರಿಂದ ತಾಲೂಕು, ಪಟ್ಟಣ, ಹೋಬಳಿ, ಪಕ್ಕದ ಗ್ರಾಮಗಳಿಗೆ ಸಂಚಾರಕ್ಕೆ ಹಾಳದ ರಸ್ತೆಗಳಿಂದ ತೊಂದರೆ ಎದುರಿಸುವಂತಾಗಿದೆ. ಮಳೆ ಗಾಲದಲ್ಲಂತೂ ಈ ರಸ್ತೆ ಮೂಲಕ ಸಂಚರಿಸುವುದೇ ಕಷ್ಟವಾಗಿದೆ. ರಸ್ತೆ ನಡುವೆ ತಗ್ಗು ಹಾಗೂ ದಿನ್ನೆಗಳು ನಿರ್ಮಾಣವಾಗಿವೆ. ಈ ರಸ್ತೆ ಮೂಲಕ ವಾಹನ ಸವಾರರು, ವೃದ್ಧರು, ವಿದ್ಯಾರ್ಥಿಗಳು ತೊಂದರೆ ಎದುರಿಸುತ್ತಿದ್ದಾರೆ.

ಆದರೆ ರಸ್ತೆಗಳ ದುರಸ್ತಿಗೆ ಇಲ್ಲಿ ತನಕ ಕ್ರಮ ಕೈಗೊಂಡಿಲ್ಲ. ಪಿಡಬ್ಲ್ಯುಡಿ ಹಾಗೂ ಕ್ಷೇತ್ರದ ಜನಪ್ರತಿನಿಧಿಗಳು ರಸ್ತೆಗಳ ದುರಸ್ತಿಗೆ ಗಮನಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪ್ರತಿ ವರ್ಷ ರಸ್ತೆಗಳ ಅಭಿವೃದ್ಧಿಗಾಗಿ ಹಲವು ಯೋಜನೆಯಡಿ ಸಾಕಷ್ಟು ಅನುದಾನ ಹರಿದು ಬರುತ್ತದೆ. ಆದರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಮುಂದಾಗಿಲ್ಲ. ಇನ್ನಾದರೂ ರಸ್ತೆ ದುರಸ್ತಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮುಂದಾಗುತ್ತಾರಾ? ಎಂಬುವುದನ್ನು ಕಾದು ನೋಡಬೇಕಿದೆ.

===

ಯಲಬುರ್ಗಾ ತಾಲೂಕಿನ ಗ್ರಾಮೀಣ ಪ್ರದೇಶದ ಬಹುತೇಕ ರಸ್ತೆಗಳು ಹಾಳಾಗಿವೆ. ರಸ್ತೆಗಳಲ್ಲಿ ಓಡಾಡಲು ವಾಹನ ಸವಾರರು ತೊಂದರೆ ಪಡುತ್ತಿದ್ದಾರೆ. ಹಾಳಾದ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ರಸ್ತೆಗಳನ್ನು ದುರಸ್ತಿಗೊಳಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಿದೆ.

-ದೇವಪ್ಪ, ಶರಣಪ್ಪ, ಯಡ್ಡೋಣಿ, ಬೇವೂರು ಗ್ರಾಮಸ್ಥರು.

===

ತಾಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದು ಹೋಬಳಿವಾರು ಪಟ್ಟಿ ಸಿದ್ಧಪಡಿಸಿ, ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನುದಾನ ಮಂಜೂರಾದ ತಕ್ಷಣ ರಸ್ತೆಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು.

-ಹಾಲಪ್ಪ ಆಚಾರ್‌, ಶಾಸಕ , ಯಲಬುರ್ಗಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ