ಆ್ಯಪ್ನಗರ

ಅನ್ವರ್ ಕುಟುಂಬಕ್ಕೆ 1ಲಕ್ಷ ರೂ. ಪರಿಹಾರ: ಸಚಿವ ಭರವಸೆ

ರಸ್ತೆ ಅಪಘಾತದಲ್ಲಿ ತಕ್ಷಣ ನೆರವು ಸಿಗದೇ ಹೃದಯ ವಿದ್ರಾವಕವಾಗಿ ಮೃತಪಟ್ಟ ಯುವಕ ಅನ್ವರ್‌ಅಲಿ ಅವರ ಕುಟುಂಬಕ್ಕೆ ರಾಜ್ಯ ಸರಕಾರದಿಂದ ಒಂದು ಲಕ್ಷ ರೂ. ಪರಿಹಾರ ಕೊಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ವಿಕ ಸುದ್ದಿಲೋಕ 4 Feb 2017, 8:11 am
ಕೊಪ್ಪಳ; ರಸ್ತೆ ಅಪಘಾತದಲ್ಲಿ ತಕ್ಷಣ ನೆರವು ಸಿಗದೇ ಹೃದಯ ವಿದ್ರಾವಕವಾಗಿ ಮೃತಪಟ್ಟ ಯುವಕ ಅನ್ವರ್‌ಅಲಿ ಅವರ ಕುಟುಂಬಕ್ಕೆ ರಾಜ್ಯ ಸರಕಾರದಿಂದ ಒಂದು ಲಕ್ಷ ರೂ. ಪರಿಹಾರ ಕೊಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
Vijaya Karnataka Web  1
ಅನ್ವರ್ ಕುಟುಂಬಕ್ಕೆ 1ಲಕ್ಷ ರೂ. ಪರಿಹಾರ: ಸಚಿವ ಭರವಸೆ


ಬೆಂಗಳೂರಿಗೆ ತೆರಳಿದ ನಂತರ ಪರಿಹಾರ ವಿತರಣೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸುವೆ. ಸಂಕಷ್ಟದಲ್ಲಿರುವ ಕುಟುಂಬಕ್ಕೆ ಪರಿಹಾರ ದೊರಕಿಸಲು ಪ್ರಾಮಾಣಿಕ ಪ್ರಯತ್ನಮಾಡುವೆ ಎಂದರು. ಫೆ.1ರಂದು ಬೆಳಗ್ಗೆ ಕೆಲಸಕ್ಕೆಂದು ಹೊರಟಿದ್ದ ಅನ್ವರ್ ಅಲಿ(18) ಮೇಲೆ ಸಾರಿಗೆ ಬಸ್ ಹರಿದಿತ್ತು. ತಕ್ಷಣ ನೆರವು ಸಿಗದೇ ಈ ಯುವಕ ಅರ್ಧತಾಸಿನವರೆಗೆ ರಕ್ತಮಡುವಿನಲ್ಲೇ ಒದ್ದಾಡಿದ್ದ. ತೀವ್ರ ರಕ್ತಸ್ರಾವ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ಘಟನೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ