ಆ್ಯಪ್ನಗರ

ತಹಸೀಲ್ದಾರ್‌ಗೆ 20ರೂ.ದಂಡ ವಿಧಿಸಿದ ಎಸಿ!

ಸಕಾಲ ಯೋಜನೆಯಡಿ ಕೈಬರಹದ ಪಹಣಿಯನ್ನು ಸಕಾಲಕ್ಕೆ ನೀಡುವಲ್ಲಿ ಲೋಪವೆಸಗಿದ ಇಲ್ಲಿನ ತಹಸೀಲ್ದಾರ್ ಗುರುಬಸವರಾಜ್ ಕೆ.ಎಂ. ಅವರಿಗೆ ಉಪವಿಭಾಗಾಧಿಕಾರಿ ಗುರುದತ್ ಹೆಗಡೆ ಅವರು, 20ರೂ. ದಂಡ ವಿಧಿಸಿ ಸೋಮವಾರ ಆದೇಶಿಸಿದ್ದಾರೆ.

ವಿಕ ಸುದ್ದಿಲೋಕ 9 Aug 2017, 8:18 am
ಕೊಪ್ಪಳ: ಸಕಾಲ ಯೋಜನೆಯಡಿ ಕೈಬರಹದ ಪಹಣಿಯನ್ನು ಸಕಾಲಕ್ಕೆ ನೀಡುವಲ್ಲಿ ಲೋಪವೆಸಗಿದ ಇಲ್ಲಿನ ತಹಸೀಲ್ದಾರ್ ಗುರುಬಸವರಾಜ್ ಕೆ.ಎಂ. ಅವರಿಗೆ ಉಪವಿಭಾಗಾಧಿಕಾರಿ ಗುರುದತ್ ಹೆಗಡೆ ಅವರು, 20ರೂ. ದಂಡ ವಿಧಿಸಿ ಸೋಮವಾರ ಆದೇಶಿಸಿದ್ದಾರೆ.
Vijaya Karnataka Web  20
ತಹಸೀಲ್ದಾರ್‌ಗೆ 20ರೂ.ದಂಡ ವಿಧಿಸಿದ ಎಸಿ!


ತಾಲೂಕಿನ ಹ್ಯಾಟಿ ಗ್ರಾಮದ ಖಾಜಾಸಾಬ್ ಮತ್ತು ಮಾಬುಸಾಬ್ ಅವರು, ಅದೇ ಗ್ರಾಮದ ಸರ್ವೆ ನಂಬರ್ 15/ಡಿ ಗೆ ಸಂಬಂಧಿಸಿ 1945ರ ಕೈಬರಹದ ಪಹಣಿ ನೀಡುವಂತೆ 2016, ಅ.17ರಂದು ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರು. ಯೋಜನೆಯಡಿ ಪಹಣಿಯನ್ನು ನವೆಂಬರ್ 26 ರೊಳಗೆ ಅರ್ಜಿದಾರರಿಗೆ ನೀಡಬೇಕಿತ್ತು. ಆದರೆ, ತಹಸೀಲ್ದಾರ್ ಗುರುಬಸವರಾಜ್ ಕೆ.ಎಂ. ಅವರು, ಅರ್ಜಿಯನ್ನು ನವೆಂಬರ್ 28ರಂದು ಅನುಮೋದಿಸಿದ್ದರು.

ಅನುಮೋದಿತ ಪ್ರತಿ ನೀಡುವಂತೆ ಕೋರಿದ ಅರ್ಜಿದಾರರ ಮನವಿಯನ್ನು ತಹಸೀಲ್ದಾರ್ ತಿರಸ್ಕರಿಸಿದ್ದರು. ಸಕಾಲ ಯೋಜನೆಯಡಿ ನಿಗದಿತ ಕಾಲಮಿತಿಯೊಳಗೆ ಸೇವೆ ಒದಗಿಸಿಲ್ಲ ಎಂದು ಆರೋಪಿಸಿ, ಅರ್ಜಿದಾರರು ಉಪವಿಭಾಗಾಧಿಕಾರಿಗಳ ಕಚೇರಿಗೆ ಮೇಲ್ಮನವಿ ಸಲ್ಲಿಸಿದ್ದರು. ಮನವಿ ಪರಿಶೀಲಿಸಿದ ಎಸಿ ಗುರುದತ್ ಹೆಗಡೆ ಅವರು, ಸಕಾಲ ಸೇವೆಗಳ ಅಧಿನಿಯಮದಡಿ, ಸೇವೆ ಒದಗಿಸಲು ವಿಳಂಬ ಮಾಡಿದ್ದಕ್ಕಾಗಿ ದಂಡದ ಮೊತ್ತವನ್ನು ಸಂಬಳದಿಂದ ಕಡಿತಗೊಳಿಸಿ, ಅರ್ಜಿದಾರರಿಗೆ ಪಾವತಿಸುವಂತೆ ಕೊಪ್ಪಳ ತಹಸೀಲ್ದಾರ್‌ಗೆ ಆದೇಶಿಸಿದ್ದಾರೆ.

................
ಕಾಲಮಿತಿಯೊಳಗೆ ಸಕಾಲ ಯೋಜನೆಯಡಿ ಸೇವೆ ಲಭ್ಯವಾಗದಿದ್ದಲ್ಲಿ, ಅರ್ಜಿದಾರರು ಉಪವಿಭಾಗಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ನಿಯಮ ಉಲ್ಲಂಘನೆ ಕಂಡುಬಂದಲ್ಲಿ, ಅಧಿಕಾರಿ ಅಥವಾ ಸಿಬ್ಬಂದಿಗೆ 20 ರೂ.ಗಳಿಂದ 500 ರೂ.ವರೆಗೂ ದಂಡ ವಿಧಿಸಲು ನಿಯಮದಲ್ಲಿ ಅವಕಾಶವಿದೆ. ದೊಡ್ಡ ಮೊತ್ತವಲ್ಲ ಎನ್ನುವುದಕ್ಕಿಂತ ಅಧಿಕಾರಿಗೆ ತಪ್ಪಿನ ಪ್ರಾಯಶ್ಚಿತ್ತವಾಗಿ ಅರ್ಜಿದಾರರಿಗೆ ದಂಡದ ಮೊತ್ತ ಪಾವತಿಸಬೇಕು.

-ಗುರುದತ್ ಹೆಗಡೆ, ಎಸಿ, ಕೊಪ್ಪಳ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ