ಆ್ಯಪ್ನಗರ

‘ದೇಹಕ್ಕೆ ಭಾವ ಬೆಸೆಯುವುದೇ ಅಭಿನಯ’

ಕಲೆ ಎಂಬ ದೇಹಕ್ಕೆ ಜೀವ ತುಂಬಿ, ಬಾವ ಬೆಸೆದಾಗ ಅಭಿನಯವಾಗುತ್ತದೆ ಎಂದು ಲೇಖಕ ಬಸವರಾಜ ಬಿನ್ನಾಳ ಹೇಳಿದರು.

Vijaya Karnataka 28 Jun 2018, 5:00 am
ಕೊಪ್ಪಳ : ಕಲೆ ಎಂಬ ದೇಹಕ್ಕೆ ಜೀವ ತುಂಬಿ, ಬಾವ ಬೆಸೆದಾಗ ಅಭಿನಯವಾಗುತ್ತದೆ ಎಂದು ಲೇಖಕ ಬಸವರಾಜ ಬಿನ್ನಾಳ ಹೇಳಿದರು.
Vijaya Karnataka Web KPL-KPL27MGB04


ನಗರದ ಬಹದ್ದೂರಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರದಲ್ಲಿ ಕರ್ನಾಟಕ ಬೀದಿ ನಾಟಕ ಅಕಾಡೆಮಿ ಬೆಂಗಳೂರು ಆರ್ಟ್‌ ಫೌಂಡೇಶನ್‌, ಅವಿರತ ಪುಸ್ತಕ ಹಾಗೂ ಕನ್ನಡನೆಟ್‌.ಕಾಂ ಕವಿಸಮೂಹ ಜೀವಯಾನ ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಸಿಜಿಕೆ ಬೀದಿ ರಂಗ ದಿನಾಚರಣೆ, ಸಿಜಿಕೆ ರಂಗ ಪುರಸ್ಕಾರ ಪ್ರದಾನ ಕಾರ್ಯಕ್ರಮ ಬುಧವಾರ ಉದ್ಘಾಟಿಸಿ ಮಾತನಾಡಿದರು. ರಂಗಕಲೆ ಎನ್ನುವುದು ನೋಡುವುದಕ್ಕೆ ಸುಂದರವಾಗಿ ಕಂಡರೂ ಅದರಲ್ಲಿ ಹೊಕ್ಕು ನೋಡಿದಾಗ ಕಲೆ ಎನ್ನುವುದು ಒಂದು ಕಾಡಕಗ್ಗಲ್ಲು ಎನ್ನುವುದು ಅರಿವಾಗುತ್ತೆ. ಅಭಿನಯದ ಮೂಲಕ, ನಾಟಕಗಳ ಮೂಲಕ ಕನ್ನಡ ನಾಡಿನಲ್ಲಿ ಶ್ರೇಯಸ್ಸು ಗಳಿಸಿ ಜಾಗೃತಿ ಮೂಡಿಸಿ ರಂಗಕಲೆಯ ಬಗ್ಗೆ ಸಾಕಷ್ಟು ಆಸಕ್ತಿ ಹುಟ್ಟಿಸಿದ ಅನೇಕ ಖ್ಯಾತ ಕವಿಗಳು ಈ ಕನ್ನಡ ಮಣ್ಣಿನಲ್ಲಿ ಹುಟ್ಟಿ ಬೆಳೆದಿದ್ದಾರೆ. ಅವರೆಲ್ಲರ ಪ್ರೇರಣೆಯಿಂದ ಇವತ್ತು ರಂಗಭೂಮಿ ಜೀವಂತವಾಗಿದೆ. ಅಂತಹ ಮಹನೀಯರಲ್ಲಿ ಸಿಜಿಕೆಯವರೂ ಒಬ್ಬರು ಎಂದರು.

ಸರಸ್ವತಿ ವಿದ್ಯಾಮಂದಿರದ ಅಧ್ಯಕ್ಷ ಎ.ಎಚ್‌.ಅತ್ತನೂರು ಅಧ್ಯಕ್ಷತೆ ವಹಿಸಿದರು. ಚಾಂದ್‌ಪಾಷಾ ಕಿಲ್ಲೇದಾರ, ಕೆ.ಮುದ್ದಾಬಳ್ಳಿ, ಮೌಲಾಹುಸೇನ್‌ ಬುಲ್ಡಿಯಾರ ಇದ್ದರು. ಗಂಗಾವತಿಯ ರಂಗಕರ್ಮಿ ಎಂ.ಪರಶುರಾಮಪ್ರಿಯ ಅವರಿಗೆ ಸಿಜಿಕೆ ರಂಗಪುರಸ್ಕಾರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಎಚ್‌.ವಿ.ರಾಜಾಬಕ್ಷಿ, ಸಿರಾಜ್‌ ಬಿಸರಳ್ಳಿ ನಿರ್ವಹಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ