ಆ್ಯಪ್ನಗರ

‘ಶುಚಿತ್ವ ಕಾಪಾಡದ ಕೋಳಿ ಫಾರ್ಮ್‌ಗಳ ವಿರುದ್ಧ ಕ್ರಮ’

ಶುಚಿತ್ವ ಕಾಪಾಡದ ಕೋಳಿ ಫಾರ್ಮ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್‌ ಕೆ.ಎಂ.ಗುರುಬಸವರಾಜ ಹೇಳಿದರು.

Vijaya Karnataka 30 Jun 2018, 5:00 am
ಕೊಪ್ಪಳ : ಶುಚಿತ್ವ ಕಾಪಾಡದ ಕೋಳಿ ಫಾರ್ಮ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್‌ ಕೆ.ಎಂ.ಗುರುಬಸವರಾಜ ಹೇಳಿದರು.
Vijaya Karnataka Web KPL-KPL29MGB05


ತಾಲೂಕಿನ ಹಿಟ್ನಾಳ ಹೋಬಳಿ ವ್ಯಾಪ್ತಿಯ ಶ್ರೀನಿಧಿ ಪೌಲ್ಟ್ರಿ ಫಾರ್ಮ್‌ ಶುಚಿತ್ವ ಕಾಪಾಡದ ಹಿನ್ನೆಲೆಯಲ್ಲಿ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ತೀವ್ರ ದುರ್ವಾಸನೆ ಸಮಸ್ಯೆ ಎದುರಿಸುತ್ತಿರುವುದಾಗಿ ಮುನಿರಾಬಾದ್‌ನಲ್ಲಿರುವ ಕಮಾಂಡೆಂಟ್‌ ಇಂಡಿಯಾ ರಿಸರ್ವ್‌ ಬಟಾಲಿಯನ್‌ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಫಾರ್ಮ್‌ಗೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತ್ಯಾಜ್ಯ ವಸ್ತುಗಳು ಮತ್ತು ಸತ್ತ ಕೋಳಿಗಳನ್ನು ವಿಲೇವಾರಿ ಮಾಡದೇ ಶೇಖರಿಸಿ ಇಟ್ಟಿದ್ದು ಪತ್ತೆಯಾಗಿದೆ. ಈ ತ್ಯಾಜ್ಯದಿಂದಾಗಿ ದುರ್ವಾಸನೆ ಹರಡಿದ್ದಲ್ಲದೇ ಕ್ರಿಮಿ ಕೀಟಗಳು ಉತ್ಪತ್ತಿಯಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಸಂಭವವಿದೆ. ಈ ಹಿನ್ನೆಲೆಯಲ್ಲಿ, ಶ್ರೀನಿಧಿ ಪೌಲ್ಟ್ರಿ ಫಾರ್ಮ್‌ ವಿರುದ್ಧ ಭಾರತೀಯ ದಂಡ ಸಂಹಿತೆ ಪ್ರಕ್ರಿಯೆ 1973 ಕಲಂ 133(1)(ಬಿ) ಹಾಗೂ (ಡಿ) ಪ್ರಕಾರ ನೋಟಿಸ್‌ ಜಾರಿ ಮಾಡಲಾಗುವುದು. ಸೂಕ್ತ ಕ್ರಮ ಕೈಗೊಳ್ಳದೇ ಇದ್ದ ಪಕ್ಷ ದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು. ನಂತರ ಸದರಿ ನೋಟಿಸ್‌ ಹಿಟ್ನಾಳ ಹೋಬಳಿಯ ಕಂದಾಯ ನಿರೀಕ್ಷ ಕರ ಮೂಲಕ ಶ್ರೀನಿಧಿ ಪೌಲ್ಟ್ರಿ ಫಾರ್ಮ್‌ ಮಾಲೀಕ ಡಿ.ಶ್ರೀಧರ ಹಾಗೂ ಡಿ. ಶ್ರೀದೇವಿ ಅವರಿಗೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ