ಆ್ಯಪ್ನಗರ

ಅಮಿತ್‌ ಶಾ ಆಗಮನ : ಬಂದೋಬಸ್ತ್‌ ಪರೇಡ್‌

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆಗಮನದ ಹಿನ್ನೆಲೆಯಲ್ಲಿ ಬಂದೋಬಸ್ತ್‌ ಕಲ್ಪಿಸಲು ನಗರ ಠಾಣೆ ಆವರಣದಲ್ಲಿ ಡಿವೈಎಸ್ಪಿ ಸಂತೋಷ ಬುನ್ನಟ್ಟಿ ನೇತೃತ್ವದಲ್ಲಿ ಶುಕ್ರವಾರ ಪರೇಡ್‌ ನಡೆಯಿತು.

Vijaya Karnataka 28 Apr 2018, 5:00 am
ಗಂಗಾವತಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆಗಮನದ ಹಿನ್ನೆಲೆಯಲ್ಲಿ ಬಂದೋಬಸ್ತ್‌ ಕಲ್ಪಿಸಲು ನಗರ ಠಾಣೆ ಆವರಣದಲ್ಲಿ ಡಿವೈಎಸ್ಪಿ ಸಂತೋಷ ಬುನ್ನಟ್ಟಿ ನೇತೃತ್ವದಲ್ಲಿ ಶುಕ್ರವಾರ ಪರೇಡ್‌ ನಡೆಯಿತು.
Vijaya Karnataka Web amit shahs arrival security parade
ಅಮಿತ್‌ ಶಾ ಆಗಮನ : ಬಂದೋಬಸ್ತ್‌ ಪರೇಡ್‌


ನಂತರ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ನಗರಕ್ಕೆ ರಾಜಕೀಯ ನಾಯಕರು, ಮುಖಂಡರು ಆಗಮಿಸಲಿದ್ದು, ನಿಯೋಜಿಸಿರುವ ಸಿಬ್ಬಂದಿ, ಕಟ್ಟುನಿಟ್ಟಿನ ಬಂದೋಬಸ್ತ್‌ ಕೈಗೊಳ್ಳಬೇಕು. ಮೊಬೈಲ್‌ ಹಿಡಿದುಕೊಂಡು ಕೆಲಸ ಮಾಡುವುದನ್ನು ಬಿಟ್ಟು ಶ್ರದ್ಧೆಯಿಂದ ಕೆಲಸ ಮಾಡಬೇಕು. ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಜನಪ್ರತನಿಧಿಗಳ ಮನೆಗಳಿಗೆ ಭೇಟಿ ನೀಡಲಿದ್ದು, ನಗರದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಗರದ ನಾನಾ ವೃತ್ತ, ಆಯಕಟ್ಟಿನ ಸ್ಥಳ, ಮಾರುಕಟ್ಟೆ, ಗಾಂಧಿ ವೃತ್ತ, ವೇದಿಕೆ ಕಾರ್ಯಕ್ರಮದಲ್ಲಿ ನಿಯೋಜಿಸಿರುವ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಈ ವೇಳೆ ಸಿಪಿಐ ದೀಪಕ್‌ ಬೂಸರೆಡ್ಡಿ, ಪಿಎಸ್‌ಐ ಜಿ.ಎಸ್‌.ಹೆಬ್ಬಳ, ರಾಜಕುಮಾರ ವಾಜಂತ್ರಿ, ಪಿಎಸ್‌ಐಗಳಾದ ವಿನಾಯಕ, ಪಿ.ಗಣೇಶ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ