ಆ್ಯಪ್ನಗರ

ವೈರಲ್ ವೀಡಿಯೋ: ಅಂಗನವಾಡಿ ಮಕ್ಕಳ ಅನ್ನಕ್ಕೆ ಕನ್ನ, ಕದ್ದೊಯ್ಯುವಾಗಲೇ ಸಿಕ್ಕಿಬಿದ್ದರು

ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ದ್ವಾರಕಾ ಜೂಡಿ ಅವರು ಮಕ್ಕಳಿಗೆ ವಿತರಿಸಬೇಕಾದ ಸಕ್ಕರೆ, ದ್ವಿದಳ ಧಾನ್ಯ, ಮೆಣಸಿನಕಾಯಿ, ಎಣ್ಣೆ, ಸಕ್ಕರೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಮನೆಗೆ ಒಯ್ಯುತ್ತಿದ್ದರು ಎನ್ನುವ ಆರೋಪವಿತ್ತು. ಅಂಗನವಾಡಿ ಕೇಂದ್ರದಿಂದ ಇತ್ತೀಚೆಗೆ ಆಹಾರಧಾನ್ಯ ಕದ್ದೊಯ್ಯುವಾಗ ಕರ್ನಾಟಕ ಕ್ರಾಂತಿ ಸೇನೆಯ ಕಾರ್ಯಕರ್ತರು ವೀಡಿಯೋ ಮಾಡಿದ್ದರು. ಈ ಕುರಿತು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರಿಗೆ ದೂರು ಸಲ್ಲಿಸಿದ್ದರು.

Vijaya Karnataka Web 26 Apr 2019, 12:47 pm
ಕೊಪ್ಪಳ: ತಾಲೂಕಿನ ಭಾಗ್ಯನಗರ ಪಟ್ಟಣದ ಅಂಗನವಾಡಿ ಕೇಂದ್ರ ಸಂಖ್ಯೆ 11ಲ್ಲಿ ಕಾರ್ಯಕರ್ತೆಯೊಬ್ಬರು ಕಾರಿನಲ್ಲಿ ಮಕ್ಕಳ‌ ಆಹಾರ ಸಾಮಗ್ರಿ ಕದ್ದೊಯ್ಯುವ ವೇಳೆ‌ ಸಿಕ್ಕಿಬಿದ್ದಿರುವ ವೀಡಿಯೋ ಈಗ ಮತ್ತೆ ವೈರಲ್ ಆಗಿದೆ.

ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ದ್ವಾರಕಾ ಜೂಡಿ ಅವರು ಮಕ್ಕಳಿಗೆ ವಿತರಿಸಬೇಕಾದ ಸಕ್ಕರೆ, ದ್ವಿದಳ ಧಾನ್ಯ, ಮೆಣಸಿನಕಾಯಿ, ಎಣ್ಣೆ, ಸಕ್ಕರೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಮನೆಗೆ ಒಯ್ಯುತ್ತಿದ್ದರು ಎನ್ನುವ ಆರೋಪವಿತ್ತು.

ಅಂಗನವಾಡಿ ಕೇಂದ್ರದಿಂದ ಇತ್ತೀಚೆಗೆ ಆಹಾರಧಾನ್ಯ ಕದ್ದೊಯ್ಯುವಾಗ ಕರ್ನಾಟಕ ಕ್ರಾಂತಿ ಸೇನೆಯ ಕಾರ್ಯಕರ್ತರು ವೀಡಿಯೋ ಮಾಡಿದ್ದರು. ಈ ಕುರಿತು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರಿಗೆ ದೂರು ಸಲ್ಲಿಸಿದ್ದರು.

ದೂರಿನ‌ ಮೇರೆಗೆ ಕಾರ್ಯಕರ್ತೆ ದ್ವಾರಕಾ ಜೂಡಿ ಅವರನ್ನು ವಜಾಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ ಆಹಾರ ಸಾಮಗ್ರಿ ಕಳ್ಳತನ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ