ಚಂದ್ರಶೇಖರ ಮುಕ್ಕುಂದಿ
ಗಂಗಾವತಿ (ಕೊಪ್ಪಳ): ಪೌರಾಣಿಕ ಹಿನ್ನೆಲೆಯ ಅಂಜನಾದ್ರಿ ಪರ್ವತ ಅಭಿವೃದ್ಧಿಗೆ ಕೊಪ್ಪಳ ಜಿಲ್ಲಾಡಳಿತದಿಂದ ನೀಲನಕ್ಷೆ ಸಿದ್ಧವಾಗಿದ್ದು, ಬೆಂಗಳೂರಿನಲ್ಲಿ ಜೂನ್ 15 ಬುಧವಾರ ನಡೆಯುವ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೀಲನಕ್ಷೆಗೆ ಮುದ್ರೆ ಹೊತ್ತುವ ನಿರೀಕ್ಷೆಯಿದೆ. ಇದುವರೆಗೆ ರಾಮಾಯಣ ಕಾಲದ ಶ್ರೀರಾಮಭಕ್ತ ಹನುಮ ಜನಿಸಿದ ಪ್ರದೇಶದ ಎಲ್ಲ ಕುರುಹುಗಳು, ರಾಜ್ಯದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತವೆಂದೇ ನಂಬಲಾಗಿದೆ. ಇದಕ್ಕೆ ಹಲವು ಇತಿಹಾಸ ತಜ್ಞರು ತಮ್ಮ ಸಂಶೋಧನೆ ಮೂಲಕ ಸಹಮತ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ಮಧ್ಯೆ ಆಂಧ್ರ ಪ್ರದೇಶದ ಟಿಟಿಡಿ, ಮಹಾರಾಷ್ಟ್ರದ ನಾಸಿಕ್ ಹಾಗೂ ಗೋವಾದ ಪಣಜಿಯವರು ತಮ್ಮಲ್ಲಿಯೇ ಹನುಮ ಜನಿಸಿದ್ದು ಎಂಬ ವಿತಂಡ ವಾದ ಶುರು ಮಾಡುವ ಜತೆಗೆ ಧಾರ್ಮಿಕ ಸಭೆಗಳನ್ನು ನಡೆಸುತ್ತಿರುವುದು ರಾಜ್ಯ ಸರಕಾರವನ್ನು ಕೆರಳಿಸಿದೆ.
ಭರಪೂರ ಅನುದಾನ: ರಾಜ್ಯದ ಇತಿಹಾಸಕಾರರು, ಸಂಶೋಧಕರು ಕಳೆದ ಹಲವು ದಶಕಗಳಿಂದ ಗಂಗಾವತಿಯ ಅಂಜನಾದ್ರಿ ಪರ್ವತವೇ ಹನುಮನ ಜನ್ಮ ಸ್ಥಳ ಎಂದೇ ದಾಖಲೆಗಳ ಮೂಲಕ ತಮ್ಮ ವಾದ ಮಂಡಿಸುತ್ತಿದ್ದಾರೆ. ರಾಜ್ಯ ಸರಕಾರ ಮಾತ್ರ ಅಧಿಕೃತ ಘೋಷಣೆ ಮಾಡದೇ ಅಂಜನಾದ್ರಿ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಿದೆ. ಕಳೆದ ವರ್ಷದ ಬಜೆಟ್ನಲ್ಲಿ 20 ಕೋಟಿ ರೂ., ಪ್ರಸಕ್ತ ಬಜೆಟ್ನಲ್ಲಿ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ ಅನುದಾನ ಬಳಕೆ ನನೆಗುದಿಗೆ ಬಿದ್ದಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಜೂನ್ 15 ರಂದು ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ಹನುಮ ಜನ್ಮ ಸ್ಥಳ ವಿವಾದಕ್ಕೂ ತೆರೆ ಎಳೆಯಲು ರಾಜ್ಯ ಸರಕಾರ ಮುಂದಾಗುವ ಲಕ್ಷಣಗಳಿವೆ.
ಹೀಗಿದೆ ನೀಲನಕ್ಷೆ: ಅಂಜನಾದ್ರಿ ಪರ್ವತ ಅಭಿವೃದ್ಧಿ ಉದ್ದೇಶದಿಂದ ರಾಜ್ಯ ಸರಕಾರ 120 ಕೋಟಿ ರೂ. ಬಿಡುಗಡೆ ಮಾಡಿದೆ. ಅನುದಾನದ ಸಮರ್ಪಕ ಬಳಕೆಗೆ ಜಿಲ್ಲಾಡಳಿತ ನೀಲನಕ್ಷೆ ಸಿದ್ಧ ಪಡಿಸಿದೆ. ರೋಪ್ ವೇ, ಪಾರ್ಕಿಂಗ್ ಸ್ಥಳ, ಪ್ರವಾಸಿ ಮಂದಿರ, ಅತಿಥಿ ಗೃಹ, ಸಮುದಾಯ ಭವನ, ಸಿಬ್ಬಂದಿ ವಸತಿ ಗೃಹ, ಊಟದ ಹಾಗೂ ಅಡುಗೆ ಕೋಣೆ, ಶಾಪಿಂಗ್ ಕಾಂಪ್ಲೆಕ್ಸ್, ಪ್ರದಕ್ಷಿಣೆ ಪಥ, ರಸ್ತೆ ವಿಸ್ತರಣೆ, ವ್ಯಾಖ್ಯಾನ ಕೇಂದ್ರ ಸೇರಿ ಒಟ್ಟು 28 ಕಾಮಗಾರಿಗಳನ್ನು ನೀಲನಕ್ಷೆ ಒಳಗೊಂಡಿದೆ.
60 ಎಕರೆ ಭೂಮಿ ಅಗತ್ಯ: ಅಂಜನಾದ್ರಿ ಪರ್ವತದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರ ವಿಶೇಷ ಆಸಕ್ತಿ ತೋರಿಸಿದೆ. ದೇವಸ್ಥಾನ ಸುತ್ತಲಿನ ಹನುಮನಹಳ್ಳಿ, ಚಿಕ್ಕರಾಂಪುರ ಗ್ರಾಮಗಳ ಪಟ್ಟಾ ಭೂಮಿ, ಮುಜರಾಯಿ ಭೂಮಿ, ಅರಣ್ಯ ಇಲಾಖೆ ಭೂಮಿ, ಸರಕಾರಿ ಪಡಾ ಭೂಮಿ ಸೇರಿ ಒಟ್ಟು 60 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಜಿಲ್ಲಾಡಳಿತ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಜೂನ್ 15 ರಂದು ನಡೆಯುವ ಸಭೆಯಲ್ಲಿ ಈ ವಿಷಯ ಕುರಿತ ಚರ್ಚೆಯೂ ಮುನ್ನೆಲೆಗೆ ಬರುವ ನಿರೀಕ್ಷೆಯಿದೆ.
'ಅಂಜನಾದ್ರಿ ಅಭಿವೃದ್ಧಿ ಪಡಿಸಲು ರಾಜ್ಯ ಸರಕಾರ 120 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಅಭಿವೃದ್ಧಿಯ ಕುರಿತು ಸಿಎಂ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗುತ್ತಿದೆ' ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.
ಗಂಗಾವತಿ (ಕೊಪ್ಪಳ): ಪೌರಾಣಿಕ ಹಿನ್ನೆಲೆಯ ಅಂಜನಾದ್ರಿ ಪರ್ವತ ಅಭಿವೃದ್ಧಿಗೆ ಕೊಪ್ಪಳ ಜಿಲ್ಲಾಡಳಿತದಿಂದ ನೀಲನಕ್ಷೆ ಸಿದ್ಧವಾಗಿದ್ದು, ಬೆಂಗಳೂರಿನಲ್ಲಿ ಜೂನ್ 15 ಬುಧವಾರ ನಡೆಯುವ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೀಲನಕ್ಷೆಗೆ ಮುದ್ರೆ ಹೊತ್ತುವ ನಿರೀಕ್ಷೆಯಿದೆ.
ಭರಪೂರ ಅನುದಾನ: ರಾಜ್ಯದ ಇತಿಹಾಸಕಾರರು, ಸಂಶೋಧಕರು ಕಳೆದ ಹಲವು ದಶಕಗಳಿಂದ ಗಂಗಾವತಿಯ ಅಂಜನಾದ್ರಿ ಪರ್ವತವೇ ಹನುಮನ ಜನ್ಮ ಸ್ಥಳ ಎಂದೇ ದಾಖಲೆಗಳ ಮೂಲಕ ತಮ್ಮ ವಾದ ಮಂಡಿಸುತ್ತಿದ್ದಾರೆ. ರಾಜ್ಯ ಸರಕಾರ ಮಾತ್ರ ಅಧಿಕೃತ ಘೋಷಣೆ ಮಾಡದೇ ಅಂಜನಾದ್ರಿ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಿದೆ. ಕಳೆದ ವರ್ಷದ ಬಜೆಟ್ನಲ್ಲಿ 20 ಕೋಟಿ ರೂ., ಪ್ರಸಕ್ತ ಬಜೆಟ್ನಲ್ಲಿ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ ಅನುದಾನ ಬಳಕೆ ನನೆಗುದಿಗೆ ಬಿದ್ದಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಜೂನ್ 15 ರಂದು ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ಹನುಮ ಜನ್ಮ ಸ್ಥಳ ವಿವಾದಕ್ಕೂ ತೆರೆ ಎಳೆಯಲು ರಾಜ್ಯ ಸರಕಾರ ಮುಂದಾಗುವ ಲಕ್ಷಣಗಳಿವೆ.
ಹೀಗಿದೆ ನೀಲನಕ್ಷೆ: ಅಂಜನಾದ್ರಿ ಪರ್ವತ ಅಭಿವೃದ್ಧಿ ಉದ್ದೇಶದಿಂದ ರಾಜ್ಯ ಸರಕಾರ 120 ಕೋಟಿ ರೂ. ಬಿಡುಗಡೆ ಮಾಡಿದೆ. ಅನುದಾನದ ಸಮರ್ಪಕ ಬಳಕೆಗೆ ಜಿಲ್ಲಾಡಳಿತ ನೀಲನಕ್ಷೆ ಸಿದ್ಧ ಪಡಿಸಿದೆ. ರೋಪ್ ವೇ, ಪಾರ್ಕಿಂಗ್ ಸ್ಥಳ, ಪ್ರವಾಸಿ ಮಂದಿರ, ಅತಿಥಿ ಗೃಹ, ಸಮುದಾಯ ಭವನ, ಸಿಬ್ಬಂದಿ ವಸತಿ ಗೃಹ, ಊಟದ ಹಾಗೂ ಅಡುಗೆ ಕೋಣೆ, ಶಾಪಿಂಗ್ ಕಾಂಪ್ಲೆಕ್ಸ್, ಪ್ರದಕ್ಷಿಣೆ ಪಥ, ರಸ್ತೆ ವಿಸ್ತರಣೆ, ವ್ಯಾಖ್ಯಾನ ಕೇಂದ್ರ ಸೇರಿ ಒಟ್ಟು 28 ಕಾಮಗಾರಿಗಳನ್ನು ನೀಲನಕ್ಷೆ ಒಳಗೊಂಡಿದೆ.
ಅಂಜನಾದ್ರಿ ಪರ್ವತ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭೂಮಿ ಸ್ವಾಧೀನಕ್ಕೆ ಸಂಬಂಧಪಟ್ಟಂತೆ ದೇವಸ್ಥಾನದ 500 ಮೀ. ಒಳಗಡೆ ಸಮೀಕ್ಷೆ ನಡೆಸಲು ಮುಜರಾಯಿ ಇಲಾಖೆಯವರಿಗೆ ಆದೇಶ ನೀಡಲಾಗಿದೆ.
60 ಎಕರೆ ಭೂಮಿ ಅಗತ್ಯ: ಅಂಜನಾದ್ರಿ ಪರ್ವತದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರ ವಿಶೇಷ ಆಸಕ್ತಿ ತೋರಿಸಿದೆ. ದೇವಸ್ಥಾನ ಸುತ್ತಲಿನ ಹನುಮನಹಳ್ಳಿ, ಚಿಕ್ಕರಾಂಪುರ ಗ್ರಾಮಗಳ ಪಟ್ಟಾ ಭೂಮಿ, ಮುಜರಾಯಿ ಭೂಮಿ, ಅರಣ್ಯ ಇಲಾಖೆ ಭೂಮಿ, ಸರಕಾರಿ ಪಡಾ ಭೂಮಿ ಸೇರಿ ಒಟ್ಟು 60 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಜಿಲ್ಲಾಡಳಿತ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಜೂನ್ 15 ರಂದು ನಡೆಯುವ ಸಭೆಯಲ್ಲಿ ಈ ವಿಷಯ ಕುರಿತ ಚರ್ಚೆಯೂ ಮುನ್ನೆಲೆಗೆ ಬರುವ ನಿರೀಕ್ಷೆಯಿದೆ.
'ಅಂಜನಾದ್ರಿ ಅಭಿವೃದ್ಧಿ ಪಡಿಸಲು ರಾಜ್ಯ ಸರಕಾರ 120 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಅಭಿವೃದ್ಧಿಯ ಕುರಿತು ಸಿಎಂ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗುತ್ತಿದೆ' ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.