ಆ್ಯಪ್ನಗರ

ಅಮಾನವೀಯ: ಮಗಳ ಸಾವಿನ ವಿಷಯ ತಂದೆಗೆ ತಿಳಿಸದೆ ಕರ್ತವ್ಯಕ್ಕೆ ಕಳುಹಿಸಿದರಾ ಅಧಿಕಾರಿಗಳು?

ಮಗಳು ಸತ್ತಿದ್ದಾಳೆ ಎಂದು ತಂದೆಗೆ ತಿಳಿದಾಗ ಆಕೆಯ ಕ್ರಿಯಾಕರ್ಮಗಳೆಲ್ಲ ಮುಗಿದಿದ್ದವು. ಅಷ್ಟಕ್ಕೂ ನಡೆದಿದ್ದೇನು?

Vijaya Karnataka Web 6 Sep 2019, 4:08 pm
ಕೊಪ್ಪಳ: ಇದನ್ನು ಅಮಾನವೀಯ ಅನ್ನುತ್ತೀರೋ, ಅಧಿಕಾರದ ದರ್ಪ ಅನ್ನುತ್ತೀರೋ, ಹೃದಯಶೂನ್ಯರೆನ್ನುತ್ತಿರೋ! ನಿಮಗೆ ಬಿಟ್ಟಿದ್ದು. ಆ ತಂದೆಯ ಮಗಳು ಸಾವನ್ನಪ್ಪಿದ್ದಳು. ಈ ಮಾಹಿತಿ ಅಧಿಕಾರಿಗಳಿಗೆ ದೊರೆತಿದ್ದರೂ, ತಂದೆಗೆ ತಿಳಿಸದೇ ಕರ್ತವ್ಯಕ್ಕೆ ಕಳುಹಿಸಿದ್ದಾರೆ.
Vijaya Karnataka Web Death


ಹೌದು, ಕೊಪ್ಪಳದ ಗಂಗಾವತಿ ಸಾರಿಗೆ ಘಟಕದಲ್ಲಿ ಈ ಅಮಾನವೀಯ ಪ್ರಸಂಗ ನಡೆದಿದೆ. ಬಾಗಲಕೋಟೆ ಜಿಲ್ಲೆಯ ರಾಂಪುರ ಗ್ರಾಮದ ನಿವಾಸಿ ಮಂಜುನಾಥ ಎನ್ನುವವರು ಗಂಗಾವತಿಯ ಸಾರಿಗೆ ಘಟಕದಲ್ಲಿ ಬಸ್ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಸ್ ಚಾಲಕನ ಪುತ್ರಿ ಕವಿತಾ ಅನಾರೋಗ್ಯದಿಂದ ಬುಧವಾರ ರಾಂಪುರ ಗ್ರಾಮದಲ್ಲಿ ಸಾವನ್ನಪ್ಪಿದ್ದಳು. ಕುಟುಂಬಸ್ಥರು ಮಗಳು ಮೃತ ಪಟ್ಟಿರುವ ಸುದ್ದಿಯನ್ನು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ‌.

ಆದರೆ ಅಧಿಕಾರಿಗಳು ಚಾಲಕ ಮಂಜುನಾಥ ಅವರಿಗೆ ಮಾಹಿತಿ ನೀಡದೆ ಕೊಲ್ಲಾಪೂರ -ಗಂಗಾವತಿ ಬಸ್‌ಗೆ ಚಾಲಕನನ್ನು ಕಳುಹಿಸಿದ್ದಾರೆ. ಎರಡು ದಿನಗಳ ನಂತರ ಡಿಪೋಗೆ ಆಗಮಿಸಿದ ವೇಳೆ ಮಗಳು ಮೃತಪಟ್ಟಿರುವ ಘಟನೆಯನ್ನು ತಿಳಿಸಿದ್ದಾರೆ. ಮಗಳ ಸಾವಿನ ವಿಷಯ ತಡವಾಗಿ ತಿಳಿದರಿಂದ ದಿಗ್ಭ್ರಮೆಗೊಂಡಿದ್ದಾರೆ.

ಕೊನೆಯ ಬಾರಿ‌ ಮಗಳ ಮುಖವನ್ನು ನೋಡದಂತಾಯಿತು ಎಂದು ಮಂಜುನಾಥ ಗೋಳಾಡಿದ್ದು ಎಂಥಹ ಕಲ್ಲು ಹೃದಯವನ್ನು ಕರಗಿಸುವಂತಿತ್ತು.

ಈ ಕುರಿತು ಮಾತನಾಡಿದ ವಿಭಾಗೀಯ ನಿಯಂತ್ರಣಾಧಿಕಾರಿ, ಮೃತಳಾದ ಬಗ್ಗೆ ಯಾವುದೇ ಅಧಿಕಾರಿಗೆ ಮಾಹಿತಿ ಬಂದಿಲ್ಲ. ಇಂತಹ ಸುದ್ದಿ ತಿಳಿದು ಕೆಲಸಕ್ಕೆ‌ ಕಳುಹಿಸುವುದಿಲ್ಲ. ಮಾನವೀಯತೆ ಆಧಾರದ ಮೇಲೆ ಚಾಲಕನನ್ನು ನಾವೇ ಅವರ ಊರಿಗೆ ಕಳುಹಿಸುತ್ತಿದ್ದೆವು. ತಪ್ಪು ಗ್ರಹಿಕೆಯಿಂದ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ