ಆ್ಯಪ್ನಗರ

ದುಬಾರಿ ದಂಡ, ಕೇಂದ್ರ ಮೋಟಾರ್ ಕಾಯಿದೆ ವಿರೋಧಿಸಿ ಆಟೋ ಚಾಲಕರ ಪ್ರತಿಭಟನೆ

ಕೇಂದ್ರದ ಮೋಟಾರ್ ವಾಹನ ಕಾಯಿದೆ ತಿದ್ದುಪಡಿ ವಿರೋಧಿಸಿ ಆಟೋ ಚಾಲಕರ ಯೂನಿಯನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

Vijaya Karnataka Web 27 Aug 2019, 3:17 pm
ಕೊಪ್ಪಳ: ಅವೈಜ್ಞಾನಿಕ ದುಬಾರಿ ದಂಡ ಹಾಗೂ ಕೇಂದ್ರ ಮೋಟಾರ್ ವಾಹನ ಕಾಯಿದೆ ತಿದ್ದುಪಡಿ ವಾಪಾಸಾತಿಗೆ ಆಗ್ರಹಿಸಿ ಆಟೋ ಚಾಲಕರ ಯೂನಿಯನ್ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.
Vijaya Karnataka Web auto


ನಗರದ ಈಶ್ವರ ದೇವಾಲಯದಿಂದ ಜಿಲ್ಲಾಡಳಿತ ಭವನದವರೆಗೆ ಚಾಲಕರು ರ್ಯಾಲಿ ನಡೆಸಿದರು. ಆಟೋ ಚಾಲಕರ ಆದಾಯ ಕಿತ್ತುಕೊಳ್ಳುವ ಉದ್ದೇಶದಿಂದ ಸಣ್ಣ ತಪ್ಪಿಗೂ ೧೦ ಪಟ್ಟು ದಂಡ ಹೆಚ್ಚಳ ಮಾಡಿದೆ.

೧೫ ವರ್ಷಗಳ ಸೇವೆಯ ಆಟೋ ರದ್ದುಪಡಿಸುತ್ತಿದ್ದು ಹಳೆ ಆಟೋಗಳಿಗೆ ಕಂಪನಿಗಳಿಂದ ದರ‌ನಿಗದಿಪಡಿಸಬೇಕು. ಆಟೋ ಚಾಲಕರಿಗೆ ಮನೆ, ಕಾಲೊನಿ ನಿರ್ಮಿಸಬೇಕು.

ಆಟೋ ಚಾಲಕರಿಗೆ ಕನಿಷ್ಠ ವಿದ್ಯಾರ್ಹತೆ ಹಿಂಪಡೆಯಬೇಕು. ಎಲ್ಲ‌ ಚಾಲಕರಿಗೆ ಲೈಸೆನ್ಸ್ ನೀಡಬೇಕು. ಆರ್ ಟಿಓ ಕಚೇರಿಯಲ್ಲಿ ಬ್ರೋಕರ್ ಹಾವಳಿ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ