ಕೊಪ್ಪಳ: ಜಿಲ್ಲೆಯಗಂಗಾವತಿ ತಾಲೂಕಿನ ದೇವಘಾಟ ಬಳಿಯ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಇಬ್ಬರು ರೈತರ ಮೇಲೆ ಕರಡಿ ದಾಳಿ ನಡೆಸಿದೆ. ಬಳಿಕ ಇಬ್ಬರು ರೈತರನ್ನು ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡಿರುವ ರೈತರನ್ನು ಶರಣಪ್ಪ ಕುಷ್ಟಗಿ (40), ರಾಮಣ್ಣ (26) ಎಂದು ಗುರುತಿಸಲಾಗಿದ್ದು, ಗಾಯಾಳು ರೈತರನ್ನು ಚಿಕಿತ್ಸೆಗಾಗಿ ಗಂಗಾವತಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದೆ.
ಎಂದಿನಂತೆ ಜಮೀನುಗಳಲ್ಲಿ ಆಹಾರಕ್ಕಾಗಿ ಕರಡಿ ರಾತ್ರಿ ಗ್ರಾಮಕ್ಕೆ ಆಗಮಿಸಿದೆ. ಅದರೆ ವಾಪಸ್ ಬೆಟ್ಟದ ಕಡೆಗೆ ತೆರಳದೇ ಜಮೀನಿನಲ್ಲಿ ಉಳಿದಿದೆ. ಬಳಿಕ ರೈತರು ಜಮೀನುಗಳಲ್ಲಿ ಕೆಲಸ ಮಾಡಲು ಹೋಗಿರುವ ವೇಳೆ ದಾಳಿ ಮಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ, ಜಮೀನಿನಲ್ಲಿದ್ದ ಕರಡಿಯನ್ನು ಪಟಾಕಿ ಸಿಡಿಸಿ, ಗುಡ್ಡಗಾಡು ಪ್ರದೇಶದ ಕಡೆಗೆ ಓಡಿಸಿದ್ದಾರೆ.
ಗಾಯಗೊಂಡಿರುವ ರೈತರನ್ನು ಶರಣಪ್ಪ ಕುಷ್ಟಗಿ (40), ರಾಮಣ್ಣ (26) ಎಂದು ಗುರುತಿಸಲಾಗಿದ್ದು, ಗಾಯಾಳು ರೈತರನ್ನು ಚಿಕಿತ್ಸೆಗಾಗಿ ಗಂಗಾವತಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದೆ.
ಎಂದಿನಂತೆ ಜಮೀನುಗಳಲ್ಲಿ ಆಹಾರಕ್ಕಾಗಿ ಕರಡಿ ರಾತ್ರಿ ಗ್ರಾಮಕ್ಕೆ ಆಗಮಿಸಿದೆ. ಅದರೆ ವಾಪಸ್ ಬೆಟ್ಟದ ಕಡೆಗೆ ತೆರಳದೇ ಜಮೀನಿನಲ್ಲಿ ಉಳಿದಿದೆ. ಬಳಿಕ ರೈತರು ಜಮೀನುಗಳಲ್ಲಿ ಕೆಲಸ ಮಾಡಲು ಹೋಗಿರುವ ವೇಳೆ ದಾಳಿ ಮಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ, ಜಮೀನಿನಲ್ಲಿದ್ದ ಕರಡಿಯನ್ನು ಪಟಾಕಿ ಸಿಡಿಸಿ, ಗುಡ್ಡಗಾಡು ಪ್ರದೇಶದ ಕಡೆಗೆ ಓಡಿಸಿದ್ದಾರೆ.