ಆ್ಯಪ್ನಗರ

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ರೈತರ ಮೇಲೆ ಕರಡಿ ದಾಳಿ; ಆಸ್ಪತ್ರೆಗೆ ದಾಖಲು

ರೈತರು ಎಂದಿನಂತೆ ಜಮೀನುಗಳಲ್ಲಿ ಕೆಲಸ ಮಾಡಲು ಹೋಗಿರುವ ವೇಳೆ ದಾಳಿ ಮಾಡಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ದೇವಘಾಟ ಬಳಿ ಈ ಘಟನೆ ನಡೆದಿದೆ.

Vijaya Karnataka Web 12 Jul 2019, 1:06 pm
ಕೊಪ್ಪಳ: ಜಿಲ್ಲೆಯಗಂಗಾವತಿ ತಾಲೂಕಿನ ದೇವಘಾಟ ಬಳಿಯ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಇಬ್ಬರು ರೈತರ ಮೇಲೆ ಕರಡಿ ದಾಳಿ ನಡೆಸಿದೆ. ಬಳಿಕ ಇಬ್ಬರು ರೈತರನ್ನು ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Vijaya Karnataka Web bear attack on koppala farmer


ಗಾಯಗೊಂಡಿರುವ ರೈತರನ್ನು ಶರಣಪ್ಪ ಕುಷ್ಟಗಿ (40), ರಾಮಣ್ಣ (26) ಎಂದು ಗುರುತಿಸಲಾಗಿದ್ದು, ಗಾಯಾಳು ರೈತರನ್ನು ಚಿಕಿತ್ಸೆಗಾಗಿ ಗಂಗಾವತಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದೆ.

ಎಂದಿನಂತೆ ಜಮೀನುಗಳಲ್ಲಿ ಆಹಾರಕ್ಕಾಗಿ ಕರಡಿ ರಾತ್ರಿ ಗ್ರಾಮಕ್ಕೆ ಆಗಮಿಸಿದೆ. ಅದರೆ ವಾಪಸ್ ಬೆಟ್ಟದ ಕಡೆಗೆ ತೆರಳದೇ ಜಮೀನಿನಲ್ಲಿ ಉಳಿದಿದೆ. ಬಳಿಕ ರೈತರು ಜಮೀನುಗಳಲ್ಲಿ ಕೆಲಸ ಮಾಡಲು ಹೋಗಿರುವ ವೇಳೆ ದಾಳಿ ಮಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ, ಜಮೀನಿನಲ್ಲಿದ್ದ ಕರಡಿಯನ್ನು ಪಟಾಕಿ ಸಿಡಿಸಿ, ಗುಡ್ಡಗಾಡು ಪ್ರದೇಶದ ಕಡೆಗೆ ಓಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ