ಆ್ಯಪ್ನಗರ

‘ಸುಳ್ಳು ಹೇಳುವುದು ಬಿಜೆಪಿ ಅಜೆಂಡಾ’

ಬಿಜೆಪಿ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದು, ಬಿಜೆಪಿಯ ಅಜೆಂಡಾವೇ ಸುಳ್ಳು ನುಡಿಯುವುದು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್‌ ಹೇಳಿದರು.

Vijaya Karnataka Web 12 Apr 2018, 5:00 am
ಕೊಪ್ಪಳ : ಬಿಜೆಪಿ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದು, ಬಿಜೆಪಿಯ ಅಜೆಂಡಾವೇ ಸುಳ್ಳು ನುಡಿಯುವುದು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್‌ ಹೇಳಿದರು.
Vijaya Karnataka Web bjps agenda of lying
‘ಸುಳ್ಳು ಹೇಳುವುದು ಬಿಜೆಪಿ ಅಜೆಂಡಾ’


ತಾಲೂಕಿನ ಅಗಳಕೇರಾ ಗ್ರಾಮದಲ್ಲಿ ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಬುಧವಾರ ಮಾತನಾಡಿದರು. ಬಸವಣ್ಣನವರ ತತ್ತ್ವದಡಿ ಐದು ವರ್ಷ ರಾಜ್ಯದಲ್ಲಿ ಅಧಿಕಾರ ಮಾಡಿದ ಕಾಂಗ್ರೆಸ್‌ ಸರಕಾರ ನಾಡಿನ ಸಮಸ್ತ ಜನತೆಗೆ ಅನೇಕ ಯೋಜನೆ ನೀಡಿದೆ.ಕಡ್ಡಾಯ ಶಿಕ್ಷ ಣ, ಗ್ರಾಮಗಳ ಅಭಿವೃದ್ಧಿ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷ ಣ ಸೇರಿದಂತೆ ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ 50 ಸಾವಿರ ರೂ. ಸಾಲ ಮನ್ನಾ ಮಾಡಿದೆ. ಸಿಎಂ ಸಿದ್ಧರಾಮಯ್ಯ ಇಂದಿರಾ ಗಾಂಧಿ ಅವರ 20 ಅಂಶದ ಕಾರ್ಯಕ್ರಮ ಅನುಷ್ಠಾನಕ್ಕೆ ತಂದು ಹಸಿರು ಕ್ರಾಂತಿ ಸೃಷ್ಟಿಸಿದ್ದಾರೆ. ಈ ಬಾರಿಯ ರಾಜ್ಯದ ಚುನಾವಣಾ ಫಲಿತಾಂಶ ದೇಶದ ರಾಜಕಾರಣದ ಬದಲಾವಣೆಯ ದಿಕ್ಸೂಚಿಯಾಗಿದೆ ಎಂದರು.

ಪ್ರಧಾನಿ ಮೋದಿಯವರ ಭಾಷಣದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಕೇಂದ್ರದ ಬಿಜೆಪಿ ಸರಕಾರದ ಸಾಧನೆ ಶೂನ್ಯವಾಗಿದೆ. ಬಿಜೆಪಿ ನಾಯಕರಿಗೆ ರಾಜ್ಯದ ಜನತೆ ಬರುವ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಗ್ರಾಮಗಳಲ್ಲಿ ಉಜ್ಜಲ ಯೋಜನೆಯಡಿ ಎರಡು ಕುಟುಂಬಗಳಿಗೆ ಗ್ಯಾಸ್‌ ವಿತರಣೆ ಮಾಡಿ, ದೊಡ್ಡ ಸಾಧನೆ ಎಂದು ಹೇಳುಕೊಳ್ಳುವರಿಗೆ ನಮ್ಮ ಸರಕಾರದ ಅನಿಲ ಭಾಗ್ಯ ಯೋಜನೆಯಡಿ ಪ್ರತಿ ಕ್ಷೇತ್ರದ 14 ಸಾವಿರ ರೂ.ಕುಟುಂಬಗಳಿಗೆ ಅನಿಲ ಭಾಗ್ಯದ ಸೌಭಾಗ್ಯ ದೊರೆಯಲಿದೆ. ಈಗಾಗಲೇ ಕಾಂಗ್ರೆಸ್‌ ಪಕ್ಷ ಕ್ಕೆ ಅಭೂತ ಪೂರ್ವ ಒಲವು ದೊರೆಯುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಬೆಂಬಲ ದೊರೆಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿ.ಪಂ.ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ್‌, ತಾ.ಪಂ.ಅಧ್ಯಕ್ಷ ಬಾಲಚಂದ್ರನ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುರೇಶ ಭೂಮರಡ್ಡಿ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ ರಾಜು, ಮುಖಂಡರಾದ ಎಚ್‌.ಎಲ್‌. ಹೀರೆಗೌಡರ್‌, ವೆಂಕಟೇಶ ಕಂಪಸಾಗರ, ನವೋದಯ ವಿರುಪಣ್ಣ, ಗವಿಸಿದ್ದಪ್ಪ ಮುದಗಲ್‌, ವೆಂಕಟೇಶ ಅಗಳಕೇರಾ, ಬಾಬುಗೌಡ ಪಾಟೀಲ್‌, ಹುಲುಗಪ್ಪ ಗಡಾದ, ರೂಪ್ಲಾ ನಾಯಕ, ಅಲಿಸಾಬ್‌ ಗಬ್ಬೂರು, ಹನುಮಂತಪ್ಪ ಹ್ಯಾಟಿ, ವೀರಭದ್ರಯ್ಯ ಸ್ವಾಮಿ, ಗವಿಸಿದ್ದಪ್ಪ ಹಿಟ್ನಾಳ್‌, ಮಲ್ಲಿಕಾರ್ಜುನ ಅಗಳಕೇರಾ, ನಾಗರಾಜ ಪಟವಾರಿ, ಜಂಬಣ್ಣ ಹೂಗಾರ, ವಿರುಪಣ್ಣ ಬಿಸರಳ್ಳಿ, ಅಕ್ಬರ್‌ಪಾಷಾ ಪಲ್ಟನ್‌ ಇತರರು ಇದ್ದರು. ನಂತರ ಬಂಡಿಹರ್ಲಾಪುರ ಜಿ.ಪಂ. ವ್ಯಾಪ್ತಿಯ ಗ್ರಾಮಗಳಾದ ಶಿವಪುರ, ಬಸಾಪುರ, ರಾಜಾರಾಮಪೇಟ್‌, ಅಯೋಧ್ಯ, ಕವಳಿಯಲ್ಲಿ ಪ್ರಚಾರ ನಡೆಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ