ಆ್ಯಪ್ನಗರ

ಬಿಎಸ್‌ವೈಗೆ ರೈಡ್‌ ಮಾಡೋದು ಗೊತ್ತು, ಎದುರಾಳಿಯನ್ನು ಹಿಡಿಯೋದೂ ಗೊತ್ತು: ಆರ್‌.ಅಶೋಕ್‌

ಬಿಎಸ್‌ವೈ ಅವರು ಕಬಡ್ಡಿ ತಂಡದ ಕ್ಯಾಪ್ಟನ್‌. ಅವರಿಗೆ ರೈಡ್‌ ಮಾಡೋದು ಹಾಗೂ ಎದುರಾಳಿಯನ್ನು ಹಿಡಿಯೋದೂ ಗೊತ್ತು ಎಂದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

Vijaya Karnataka Web 18 Sep 2020, 4:12 pm
ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಬಡ್ಡಿ ತಂಡದ ಕ್ಯಾಪ್ಟನ್‌. ಅವರಿಗೆ ರೈಡ್‌ ಮಾಡೋದು ಹಾಗೂ ಎದುರಾಳಿಯನ್ನು ಕ್ಯಾಚ್‌ ಹಿಡಿಯೋದೂ ಗೊತ್ತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು.
Vijaya Karnataka Web R Ashok


ಕೊಪ್ಪಳ ಜಿಲ್ಲಾಡಳಿತ ಭವನದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ''ಯಡಿಯೂರಪ್ಪ ಅವರು ರಾಜಾಹುಲಿ ಅಂತ ಎಂದೋ ಹೇಳಿದ್ದೇನೆ. ಹಣಕಾಸು ವಿಷಯದಲ್ಲಿ ರಾಜ್ಯವು ಇಡೀ ದೇಶಕ್ಕೇ ಮಾದರಿಯಾಗಿದೆ. ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಸಿಎಂ ದಿಲ್ಲಿಗೆ ಹೋಗಿದ್ದು, ಎನ್‌ಡಿಆರ್‌ಎಫ್‌ ಅನುದಾನ ಬಿಡುಗಡೆಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲು ತೆರಳಿದ್ದಾರೆ. ನನ್ನನ್ನು ಕರೆದಿದ್ದರು. ಆದರೆ ನಾನು ಮೂರು ಜಿಲ್ಲೆಗಳ ಪ್ರವಾಸದಲ್ಲಿ ಇರುವುದರಿಂದ ಅವರೊಂದಿಗೆ ಹೋಗಲು ಆಗಲಿಲ್ಲ'' ಎಂದರು.

ಅನುದಾನ ಕೊರತೆಯಿಲ್ಲ:

''ರಾಜ್ಯದಲ್ಲಿ ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಅನುದಾನ ಕೊರತೆ ಇಲ್ಲ. 334 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಫಲಾನುಭವಿಗಳಿಗೆ ಮೂರು, ನಾಲ್ಕನೇ ಕಂತಿನ ಅನುದಾನ ಬಿಡುಗಡೆಗೊಳಿಸಲಾಗಿದೆ. ರಾಜ್ಯದಲ್ಲಿ 130 ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದೆ. ಪ್ರವಾಹದಿಂದಾಗಿ 3.31 ಲಕ್ಷ ಹೆಕ್ಟೇರ್‌ ಕೃಷಿ ಭೂಮಿ ಹಾಳಾಗಿದೆ. ಅರಣ್ಯ ಹಾಗೂ ಕಂದಾಯ ಇಲಾಖೆಯ ಸುಮಾರು 9 ಲಕ್ಷ ಹೆಕ್ಟೇರ್‌ ಜಮೀನು ಗೊಂದಲದಲ್ಲಿತ್ತು. ಈ ಪೈಕಿ ಅರಣ್ಯ ಇಲಾಖೆಯಿಂದ 6 ಲಕ್ಷ ಹೆಕ್ಟೇರ್‌ ಜಮೀನು ಕಂದಾಯ ಇಲಾಖೆಗೆ ಒದಗಿಸುವುದಕ್ಕೆ ಸಂಬಂಧಿಸಿದಂತೆ ಚರ್ಚೆಯಾಗಿದೆ'' ಎಂದು ತಿಳಿಸಿದರು.

ಸಮೀಕ್ಷೆ ಪೂರ್ಣಗೊಂಡ ಬಳಿಕ ಪ್ರವಾಹದಲ್ಲಿ ನಷ್ಟ ಅನುಭವಿಸಿದವರಿಗೆ ಪರಿಹಾರ ವಿತರಣೆ : ಆರ್ ಅಶೋಕ್

''ಪಡಿತರ ಚೀಟಿ ಹಾಗೂ ಆಧಾರ್‌ ಕಾರ್ಡ್‌ ಆಧರಿಸಿ 60 ವರ್ಷ ಆದವರಿಗೆ ವೃದ್ಧಾಪ್ಯ ವೇತನ ತಾನಾಗಿಯೇ ಮಂಜೂರಾಗಲಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಬಳ್ಳಾರಿ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದೆ. ವೃದ್ಧರು ಸರಕಾರಿ ಕಚೇರಿಗೆ ಅಲೆದಾಡಬಾರದು ಎನ್ನುವ ಉದ್ದೇಶದಿಂದ 60 ವರ್ಷ ಆದ ಬಳಿಕ ತಕ್ಷಣ ತಹಸಿಲ್‌ ಕಚೇರಿಯಿಂದ ಫಲಾನುಭವಿಗೆ ಅರ್ಜಿ ಕಳುಹಿಸಿ ತುಂಬಿಸಿಕೊಂಡು ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಮಾಸಾಶನ ಜಮಾ ಮಾಡಲಾಗುವುದು'' ಎಂದು ವಿವರಿಸಿದರು.

ಪ್ರವಾಹದಿಂದ 8,700 ಕೋಟಿ ರೂ. ಹಾನಿ, ಕೇಂದ್ರದಿಂದ 325 ಕೋಟಿ ಪರಿಹಾರ -ಆರ್‌ ಅಶೋಕ್‌

ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್‌, ಜಿಲ್ಲಾಧಿಕಾರಿ ಸುರಳ್ಕರ್‌ ವಿಕಾಸ್‌ ಕಿಶೋರ್‌, ಜಿ.ಪಂ. ಸಿಇಒ ರಘುನಂದನ್‌ಮೂರ್ತಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ