ಆ್ಯಪ್ನಗರ

ಇಬ್ಬರ ಕಳ್ಳರ ಸೆರೆ: ನಗದು ಜಪ್ತಿ

ತಾಲೂಕಿನ ಬಸವಣ್ಣ ಕ್ಯಾಂಪಿನ ಕಾಲುವೆ ಮೇಲೆ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು ಶನಿವಾರ ತಡರಾತ್ರಿ 8, 79, 540 ರೂ.ಜಪ್ತಿ ಮಾಡಿದ್ದಾರೆ.

Vijaya Karnataka 16 Jul 2018, 4:36 pm
ಕಾರಟಗಿ : ತಾಲೂಕಿನ ಬಸವಣ್ಣ ಕ್ಯಾಂಪಿನ ಕಾಲುವೆ ಮೇಲೆ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು ಶನಿವಾರ ತಡರಾತ್ರಿ 8, 79, 540 ರೂ.ಜಪ್ತಿ ಮಾಡಿದ್ದಾರೆ.
Vijaya Karnataka Web capture of two robbers cash confiscation
ಇಬ್ಬರ ಕಳ್ಳರ ಸೆರೆ: ನಗದು ಜಪ್ತಿ


ಈರಣ್ಣ ಈಡಿಗೇರ್‌, ಲಕ್ಷ್ಮಿ ಈಡಿಗೇರ್‌ ಕರಡೋಣಿ ಬಂಧಿತರು. ಯಂಕೋಬ ಎಂಬಾತ ತಪ್ಪಿಸಿಕೊಂಡಿದ್ದಾನೆ. ಪಿಎಸ್‌ಐ ಎಂ.ಶಿವಕುಮಾರ್‌ ಹಾಗೂ ಸಿಬ್ಬಂದಿ ರಾತ್ರಿ ಗಸ್ತಿನಲ್ಲಿ ಹೋಗುತ್ತಿದ್ದಾಗ ಜೀಪ್‌ ನೋಡಿ, ಇವರು ಓಡಲು ಯತ್ನಿಸಿದ್ದಾರೆ. ಬೆನ್ನತ್ತಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಕೈಯಲ್ಲಿದ್ದ ಚೀಲವನ್ನು 8,79,540 ರೂ.ಪತ್ತೆಯಾಗಿದೆ. ವಿಚಾರಣೆ ನಡೆಸಿದಾಗ ಸೂಕ್ತ ಮಾಹಿತಿ ನೀಡಿಲ್ಲ. ಕಳವು ಮಾಡಿದ ಹಣವೆಂದು ಶಂಕಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬನಿಗಾಗಿ ಶೋಧ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ