ಆ್ಯಪ್ನಗರ

ಸಂಭ್ರಮದ ಹೋಳಿ ಆಚರಣೆ

ಪಟ್ಟಣದ ನಾಗರಿಕರು ಹೋಳಿಯನ್ನು ಸಂಭ್ರಮದಿಂದ ಗುರುವಾರ ಆಚರಿಸಿದರು.ಬೆಳಗ್ಗೆಯಿಂದಲೇ ಬಣ್ಣದಾಟ ಆರಂಭಗೊಂಡಿತು. ಮಹಿಳೆಯರು, ಹಿರಿಯ ನಾಗರಿಕರು ತಮ್ಮ ಓಣಿಗಳಲ್ಲೇ ಬಣ್ಣ ಎರಚಿ ಸಂಭ್ರಮಿಸಿದರು. ಯುವಕರು ಪ್ರಮುಖ ಬೀದಿಗಳಲ್ಲಿ ಗುಂಪುಗುಂಪಾಗಿ ಬಣ್ಣ ಆಡಿದರು. ಇಲ್ಲಿನ ಭಗತ್‌ಸಿಂಗ್ ಯುವಕ ಸಂಘದ ಕಾರ್ಯಕರ್ತರು ಡಿಜೆ ಸೌಂಡ್ ಸಿಸ್ಟಮ್ ಮೂಲಕ ಪ್ರಮುಖ ರಸ್ತೆಗಳಲ್ಲಿ ಬಣ್ಣದೊಂದಿಗೆ ಮೆರವಣಿಗೆಗಿಳಿದರು. ಪರಸ್ಪರ ಬಣ್ಣ ಎರಚುತ್ತಾ ಡಿಜೆ ಸಪ್ಪಳಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ವಿಕ ಸುದ್ದಿಲೋಕ 25 Mar 2016, 6:25 am
ಕುಷ್ಟಗಿ; ಪಟ್ಟಣದ ನಾಗರಿಕರು ಹೋಳಿಯನ್ನು ಸಂಭ್ರಮದಿಂದ ಗುರುವಾರ ಆಚರಿಸಿದರು.
Vijaya Karnataka Web celebrating holi celebrations
ಸಂಭ್ರಮದ ಹೋಳಿ ಆಚರಣೆ


ಬೆಳಗ್ಗೆಯಿಂದಲೇ ಬಣ್ಣದಾಟ ಆರಂಭಗೊಂಡಿತು. ಮಹಿಳೆಯರು, ಹಿರಿಯ ನಾಗರಿಕರು ತಮ್ಮ ಓಣಿಗಳಲ್ಲೇ ಬಣ್ಣ ಎರಚಿ ಸಂಭ್ರಮಿಸಿದರು. ಯುವಕರು ಪ್ರಮುಖ ಬೀದಿಗಳಲ್ಲಿ ಗುಂಪುಗುಂಪಾಗಿ ಬಣ್ಣ ಆಡಿದರು. ಇಲ್ಲಿನ ಭಗತ್‌ಸಿಂಗ್ ಯುವಕ ಸಂಘದ ಕಾರ್ಯಕರ್ತರು ಡಿಜೆ ಸೌಂಡ್ ಸಿಸ್ಟಮ್ ಮೂಲಕ ಪ್ರಮುಖ ರಸ್ತೆಗಳಲ್ಲಿ ಬಣ್ಣದೊಂದಿಗೆ ಮೆರವಣಿಗೆಗಿಳಿದರು. ಪರಸ್ಪರ ಬಣ್ಣ ಎರಚುತ್ತಾ ಡಿಜೆ ಸಪ್ಪಳಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮೆರವಣಿಗೆ ಇಲ್ಲಿನ ಶ್ರೀಮಾರುತಿ ವತ್ತಕ್ಕೆ ಬಂದಾಗ ಕೆಲವರು ಪರಸ್ಪರ ಹೊಡೆದಾಟಕ್ಕೆ ಮುಂದಾದರು. ಹೊಡೆದಾಟದಲ್ಲಿ ಯುವಕನೊಬ್ಬನಿಗೆ ಗಾಯವಾಗಿದೆ. ಪೊಲೀಸರು ಮಧ್ಯ ಪ್ರವೇಶಿಸಿ ಎರಡೂ ಕಡೆಯವರನ್ನು ಶಾಂತವಾಗಿಸಿದರು. ಜಗಳವಾಡಿಕೊಂಡವರನ್ನು ಮೆರವಣಿಗೆಯಿಂದ ಹೊರಗೆ ಕಳುಹಿಸಲಾಯಿತು. ನಂತರ ಬಸವೇಶ್ವರ ವತ್ತದವರೆಗೆ ಮೆರವಣಿಗೆ ಸಾಗಿತು.

ಚರ್ಮಕ್ಕೆ ಮಾರಕವಾದ ಬಣ್ಣ ಬಳಸಿದ್ದು ಕಂಡುಬಂತು. ಮುಖ ಮತ್ತು ತಲೆಗಳಿಗೆ ವಾರ್ನಿಶ್ ಹಚ್ಚಲಾಯಿತು. ಮೊಟ್ಟೆ ಒಡೆಯುವುದು ನೋಡುಗರಿಗೆ ಅಸಹ್ಯ ಹುಟ್ಟಿಸಿತು. ಬಿಸಿಲಿನ ತಾಪ ಲೆಕ್ಕಿಸದೇ ಯುವಕರು ಮಧ್ಯಾಹ್ನ ವರೆಗೆ ಓಕುಳಿಯಾಟದಲ್ಲಿ ತೊಡಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ