ಆ್ಯಪ್ನಗರ

ಕುಲಪತಿ ಚಂಡು ಹಾರಿಸುವುದಕ್ಕೆ ಆಗುತ್ತಾ?: ರಾಯರೆಡ್ಡಿ

ಹಂಪಿ ವಿವಿ ಕುಲಪತಿ ಡಾ. ಮಲ್ಲಿಕಾ ಘಂಟಿ ಅವರು ಆರೋಪ ಮಾಡಿದಾಕ್ಷಣ ಅವರ ಚಂಡು ಹಾರಿಸುವುದಕ್ಕೆ ಬರುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಪ್ರಶ್ನಿಸಿದರು.

Vijaya Karnataka 18 Sep 2017, 7:42 am
ಕೊಪ್ಪಳ: ಹಂಪಿ ವಿವಿ ಕುಲಪತಿ ಡಾ. ಮಲ್ಲಿಕಾ ಘಂಟಿ ಅವರು ಆರೋಪ ಮಾಡಿದಾಕ್ಷಣ ಅವರ ಚಂಡು ಹಾರಿಸುವುದಕ್ಕೆ ಬರುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಪ್ರಶ್ನಿಸಿದರು.
Vijaya Karnataka Web news/koppal/chancellor
ಕುಲಪತಿ ಚಂಡು ಹಾರಿಸುವುದಕ್ಕೆ ಆಗುತ್ತಾ?: ರಾಯರೆಡ್ಡಿ


ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದರು. ಯಾವುದೇ ಕೆಲಸಕ್ಕೂ ಸೂಟ್‌ಕೇಸ್ ನೀಡಬೇಕು ಎಂದು ಕುಲಪತಿ ಏಕೆ ಹೇಳಿದ್ದಾರೆ? ಯಾವ ಅರ್ಥದಲ್ಲಿ ಹೇಳಿದ್ದಾರೆ? ಎನ್ನುವುದು ಗೊತ್ತಿಲ್ಲ. ಕುಲಪತಿ ಅವರು ಆರೋಪ ಮಾಡಿದ್ದಾರೆ ಎಂದಾಕ್ಷಣ ಅವರ ಚಂಡು ತೆಗೆಯೋಕೆ ಆಗುತ್ತದೆಯಾ? ನನಗೆ ಸಚಿವನಾಗಿ ಆ ಅಧಿಕಾರ ಇಲ್ಲ. ಕೆಲವೊಂದು ಇತಿಮಿತಿಗಳಿರುತ್ತವೆ. ಕಾನೂನು, ನಿಯಮಗಳಿರುತ್ತವೆ. ತಮ್ಮ ಹೇಳಿಕೆ ಬಗ್ಗೆ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸೂಟ್‌ಕೇಸ್ ಆರೋಪಕ್ಕೆ ಸಂಬಂಧಿಸಿದಂತೆ ಅವರ ಬಳಿ ಸಾಕ್ಷಾಧಾರಗಳಿದ್ದರೆ ತಂದು ಕೊಡಲಿ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಸಚಿವರು, ವಿಧಾನಸೌಧದ ಮೂರನೇ ಮಹಡಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವ ತಮ್ಮ ಹೇಳಿಕೆಗೆ ಈಗಲೂ ಬದ್ಧ, ಎಲ್ಲ ಕಡೆಗಳಲ್ಲೂ ಭ್ರಷ್ಟಾಚಾರ ವ್ಯವಸ್ಥೆ ಇದೆ. ಆದರೆ ಇದಕ್ಕೆಲ್ಲ ಸರಕಾರ ಪ್ರೋತ್ಸಾಹ ನೀಡುತ್ತದೆ ಎಂದರ್ಥವಲ್ಲ. ಸರಕಾರ ಭ್ರಷ್ಟಾಚಾರವನ್ನು ಅಳಿಸಿ ಹಾಕುವುದಕ್ಕೆ ಪ್ರಯತ್ನಿಸುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಸಿಎಂ ಕುರಿತು ದಾಖಲೆ ಬಿಡುಗಡೆಗೊಳಿಸುತ್ತೇನೆ ಎಂದು ಹೇಳುವ ಮೂಲಕ ಪ್ರಚಾರದ ನಾಟಕವಾಡುತ್ತಿದ್ದಾರೆ. ಸಾಕ್ಷಿಗಳಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕು ಎಂದರು.

1500 ಕೋಟಿ ರೂ. : ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಲಾಗುತ್ತಿದೆ. ಸರಕಾರ ಪ್ರಸಕ್ತ ವರ್ಷ 1,500 ಕೋಟಿ ರೂ. ಅನುದಾನ ಒದಗಿಸಿದೆ. ಕೆಲವೆಡೆ ಬಳಕೆಯಾದರೆ ಇನ್ನೂ ಕೆಲವೆಡೆ ಬಳಕೆಯಾಗಿಲ್ಲ. ಆದ್ದರಿಂದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಬೇಕಾಗಿದೆ. ಸಿಎಂ ಬಳಿ ಮಾತನಾಡಿ ನೀಲ ನಕ್ಷೆ ಸಿದ್ಧಪಡಿಸಲಾಗುವುದು. ಸಂವಿಧಾನದ 371 ಜೆ ತಿದ್ದುಪಡಿಯಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಉದ್ಯೋಗ ಮೀಸಲಾತಿ ದೊರೆಯುತ್ತಿದೆ. ಆರಂಭಿಕ ಹಂತದಲ್ಲಿ ತೊಂದರೆ ಉಂಟಾಗುವುದು ಸಹಜ. ಅವುಗಳನ್ನೆಲ್ಲ ಸರಕಾರ ನಿಯಮ ರೂಪಿಸಿ, ನ್ಯಾಯಾಲಯದಲ್ಲಿ ಸಮರ್ಪಕ ಎದುರಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಜಿ.ಪಂ.ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ್ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ