ಆ್ಯಪ್ನಗರ

​ರಾಜೀವ್‌ ಹತ್ಯೆ ಬದಲು ರಾಹುಲ್‌ ಹತ್ಯೆ ಎಂದ ಸಿಎಂ

'ರಾಹುಲ್ ಗಾಂಧಿ ಅವರ ಹತ್ಯೆಗೆ ಮುನ್ನ ಲೋಕಸಭೆ ಚುನಾವಣೆ ನಡೆದಿದ್ದರೆ ನಾನೇ ಗೆಲ್ಲುತ್ತಿದ್ದೆ,' ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Vijaya Karnataka Web 14 Dec 2017, 2:55 pm
ಕೊಪ್ಪಳ: 'ರಾಹುಲ್ ಗಾಂಧಿ ಅವರ ಹತ್ಯೆಗೆ ಮುನ್ನ ಲೋಕಸಭೆ ಚುನಾವಣೆ ನಡೆದಿದ್ದರೆ ನಾನೇ ಗೆಲ್ಲುತ್ತಿದ್ದೆ,' ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಕುಷ್ಟಗಿಯಲ್ಲಿ ಜರುಗಿದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುವ ವೇಳೆ ಮುಖ್ಯಮಂತ್ರಿ ಎಡವಿ, ರಾಜೀವ್‌ ಬದಲು ರಾಹುಲ್‌ ಎಂದು ಹೇಳಿದರು.
Vijaya Karnataka Web cm siddaramaiah told by mistake rahul
​ರಾಜೀವ್‌ ಹತ್ಯೆ ಬದಲು ರಾಹುಲ್‌ ಹತ್ಯೆ ಎಂದ ಸಿಎಂ


ರಾಜೀವ್ ಗಾಂಧಿ ಹತ್ಯೆ ನಡೆಯುವ ಮುನ್ನ ಎನ್ನವ ಬದಲಿ ರಾಹುಲ್ ಗಾಂಧಿ ಎನ್ನುತ್ತಿದ್ದಂತೆ ಸಮಾವೇಶದಲ್ಲಿ ಗೊಂದಲ ಮೂಡಿತು. ತಕ್ಷಣವೇ ತಪ್ಪಿನ ಅರಿವಾಗಿ ನಾನು ಸರಿಯಾಗಿ ಹೇಳುತ್ತಿದ್ದೆ ಎಂದು ಸಿಎಂ ಮಾತಿನ ವರಸೆ ಬದಲಾಯಿಸಿದರು.

1991ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಾಗಿತ್ತು. ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಆದರೆ ಹೊಸಪೇಟೆ ಭಾಗದಲ್ಲಿ ಕಡಿಮೆ ಮತ ಲಭಿಸಿದ್ದರಿಂದ ಸೋಲು ಅನುಭವಿಸಿದೆ. ಒಂದು ವೇಳೆ ಲೋಕ ಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೆ ಸಿಎಂ ಆಗುತ್ತಿರಲಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ