Byrathi Suresh: ಎಲ್ಲ ಕಡೆ ಸಿದ್ದರಾಮಯ್ಯರನ್ನ ಹೊಗಳುತ್ತೇನೆ, ಅವರೇ ಮುಂದಿನ ಮುಖ್ಯಮಂತ್ರಿ ಏನೀಗ?: ಶಾಸಕ ಭೈರತಿ ಸುರೇಶ್

Vijaya Karnataka Web 19 Feb 2023, 6:23 pm
ಕೊಪ್ಪಳ: ಕೊಪ್ಪಳದ ಯಲಬುರ್ಗಾದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಗದ್ದಲ ಕೋಲಾಹಲ ಸೃಷ್ಟಿಯಾಯ್ತು, ಶಾಸಕ‌ ಭೈರತಿ ಸುರೇಶ್‌ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಬೇಕು, ಈ ಕ್ಷೇತ್ರದ ಶಾಸಕ ಏನಾದರೂ ಕೆಲಸ ಮಾಡಿದ್ದಾರಾ ಎನ್ನುತ್ತಿದ್ದಂತೆ ಹಲವರು ಭೈರತಿ ಸುರೇಶ್‌ ಮಾತಿ ಆಕ್ಷೇಪ ವ್ಯಕ್ತಪಡಿಸಿ, ಗಲಾಟೆ ಎಬ್ಬಿಸಿದರು. ಶಾಸಕ‌ ಭೈರತಿ ಸುರೇಶ್‌ ಮಾತನಾಡಿ ಯಾರೋ 4 ಮಂದಿ ಗಲಾಟೆ ಮಾಡಿದ್ರೆ ನಾನು ಜಗ್ಗಲ್ಲ, ನಾನು ಸಿದ್ದರಾಮಯ್ಯರನ್ನು ಹೊಗಳುತ್ತೇನೆ, ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು, ನಿಮಗೆ ಇಷ್ಟ ಇದ್ದರೆ ಕೇಳಿ ಇಲ್ಲ ಅಂದ್ರೆ ಕಾರ್ಯಕ್ರಮದಿಂದ ಹೊರಗೆ ಹೋಗಿ, ಡೋಂಟ್‌ಕೇರ್‌ ಎಂದು ಏರುಧ್ವನಿಯಲ್ಲಿ ಮಾತಾಡಿದರು. ಕಲೆ ಕಾಲ ಕಾರ್ಯಕ್ರಮದಲ್ಲಿ ಗೊಂದಲ ಸೃಷಿಯಾಯ್ತು, ನಂತರ ಮುಖಂಡರು, ಪೊಲೀಸರು ಸೇರಿ ಗಲಾಟೆಯನ್ನು ನಿಯಂತ್ರಿಸಿದರು.
Loading ...